ಚಾಮರಾಜನಗರ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ತಾಲ್ಲೂಕು ಪಂಚಾಯತ್ ಕೊಳ್ಳೇಗಾಲ, ಹನೂರು ಮತ್ತು ಯಳಂದೂರು ತಾಲೂಕಿನ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೊಳ್ಳೇಗಾಲ ತಾಲ್ಲೂಕಿನ ಸರ್ಕಾರಿ ಎಂ.ಜಿ.ಎಸ್.ವಿ ಶಾಲಾ ಆವರಣದಲ್ಲಿ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮವನ್ನು ಶಾಸಕರಾದ ಎ. ಆರ್. ಕೃಷ್ಣಮೂರ್ತಿ ರವರು ಇಂದು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೋನಾ ರೋತ್ ರವರು , ಯೋಜನಾ ನಿರ್ದೇಶಕರಾದ ಕಿರಣ್ ಪಡ್ನೆಕರ್ , ವಿಭಾಗಾಧಿಕಾರಿಗಳಾದ ಮಹೇಶ್. ಬಿ. ಆರ್ ರವರು, ಕೊಳ್ಳೇಗಾಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗುರುಶಾಂತಪ್ಪ ಬೆಳ್ಳುಂಡಗಿರವರು, ಹನೂರು ಮತ್ತು ಯಳಂದೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್ ರವರು ಹಾಗೂ ಗ್ಯಾರೆಂಟಿ ಯೋಜನೆಯ ತಾಲೂಕು ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ರವರು ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 20 ಮಳಿಗೆಗಳಲ್ಲಿ ಕೊಳ್ಳೇಗಾಲ, ಹನೂರು ಯಳಂದೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸುವ ವಿವಿಧ ರೀತಿಯ ಉತ್ಪನ್ನಗಳಾದ ಜೇನು ತುಪ್ಪ, ಗಾಣದಿಂದ ತಯಾರಿಸಿದ ಕೊಬ್ಭರಿ ಎಣ್ಣೆ, ಚಾಪೆಗಳು, ಕೈಮಗ್ಗದಿಂದ ತಯಾರಿಸಿದ ಕಾಟನ್ ಸೀರೆಗಳು, ಯೋಗ ಮ್ಯಾಟ್, ಹ್ಯಾಂಡ್ ಮೇಡ್ ಬ್ಯಾಗ್, ರಾಗಿ ಪೌಡರ್, ಸಿರಿದಾನ್ಯದ ಪೌಡರ್, ಹೋಟೆಲ್ ಸ್ಟಾಲ್, ತಂಪು ಪಾನೀಯ, ಬ್ಯಾಸ್ಕೆಟ್ ಗಳು ಬಾಳೆ ನಾರಿನ ಉತ್ಪನ್ನಗಳು, ಬಿದಿರಿನ ಬುಟ್ಟಿಗಳು ಸಾವಯವ ಉತ್ಪನ್ನಗಳು ಹಪ್ಪಳ ,ಚಕ್ಕುಲಿ, ನಿಪ್ಪಟ್ಟು,ಕಜ್ಜಾಯ, ಹಾಗೂ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಕ್ಕೆ ಆಗಮಿಸಿ ಉತ್ಪನ್ನಗಳನ್ನು ಖರೀದಿಸಿದರು ಎಲ್ಲಾ ಉತ್ಪನ್ನಗಳು ಮಾರಾಟವಾಗಿ ಮಹಿಳಾ ಉದ್ಯಮಿದಾರರು ಅಧಿಕ ಲಾಭಗಳಿಸಿದರು.