ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದಲ್ಲಿ ಗಾಂಧಿ ಹೆಜ್ಜೆಗಳು

ಮೈಸೂರು:ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರುತಿಸಿಕೊಂಡ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮ ಗಾಂಧೀಜಿಯವರ ಪಾದ ಸ್ಪರ್ಶದಿಂದ ಪುನೀತವಾಗುವುದರೊಂದಿಗೆ, ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಗುಡಿ ಕೈಗಾರಿಕೆಗಳನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿದೆ.

ಅಲ್ಲಿನ ನೂಲು ತೆಗೆಯುವ ಚರಕಗಳ ಲಟ್,ಪಟ್ ಶಬ್ದ ದೂರದವರಗೆ ಕೇಳಿಬರುತ್ತದೆ ಮಹಾತ್ಮ ಗಾಂಧಿಯವರು 2 ಬಾರಿ ಅಂದರೆ 1927 ಹಾಗೂ 1934 ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದುದರ ಫಲವಾಗಿ ನೂರಾರು ಮಹಿಳೆಯರು ಖಾದಿ ಬಟ್ಟೆ ನೇಯ್ಗೆಯೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ.

1927 ರಲ್ಲಿ ಗಾಂಧಿಯವರು ಸೈಮನ್ ಆಯೋಗದ ವಿರುದ್ಧ ಹೋರಾಟ ಮಾಡುತ್ತ ಹೋರಾಟದ ಭಾಗವಾಗಿ ಮೈಸೂರು ಸಂಸ್ಥಾನಕ್ಕೆ ಭೇಟಿಯಿತ್ತಾಗ, ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾಯರನ್ನು ಭೇಟಿಮಾಡುವ ಮೂಲಕ ಮೈಸೂರು ಅರಸರು ಬದನವಾಳು ಗ್ರಾಮದಲ್ಲಿ ಆರಂಭಿಸಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಕಂಡು ಸಂತಸಗೊಂಡು ಪ್ರೇರೇಪಿಸಿದುದರ ಫಲವಾಗಿ ಮತ್ತಷ್ಟು ಗುಡಿ ಕೈಗಾರಿಕೆಗಳು ಆರಂಭಗೊಂಡವು.

ಗಾಂಧಿಯವರು ಭೇಟಿ ನೀಡಿದ ಕುರುಹಾಗಿ ಅವರು ಭೇಟಿ ನೀಡಿದ ಸ್ಥಳವನ್ನು ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡುವ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆ ಉದಯಕ್ಕೆ ಕಾರಣರಾದರು. ಅದರ ಕುರುಹಾಗಿ 1927 ನೇ ಇಸವಿ ಹಾಗೂ ಚರಕ ಚಿತ್ರವಿರುವ ಕಲ್ಲನ್ನು ಕೆತ್ತಲಾಗಿದೆ ಹಾಗೂ ಸ್ಥಳೀಯರ ಮುಂದಾಳತ್ವದಲ್ಲಿ ಗಾಂಧಿಯವರ ಪುತ್ಥಳಿ ಹಾಗೂ ಮಂಟಪ ನಿರ್ಮಿಸಲಾಗಿದೆ. ಪುತ್ಥಳಿಯ ಶಿಲಾ ಕಲ್ಲಿನ ಮೇಲೆ ಉಧ್ಘಾಟನೆ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಎಂದಿದೆ.

ನಂತರ 1934 ರಲ್ಲಿ ಹರಿಜನ ಸೇವಕ ಸಂಘದ ಕಾರ್ಯಕ್ರಮಗಳಿಗೆ ಗಾಂಧಿಯವರು ದೇಣಿಗೆ ಸಂಗ್ರಹದ ಭಾಗವಾಗಿ ಮತ್ತೊಮ್ಮೆ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದಾಗ ಬದನವಾಳು ಕೇಂದ್ರದ ಚರಕ ಕೇಂದ್ರ ಹೇಗೆ ನಡೆಯುತ್ತಿದೆ ಎಂದು ನೋಡಲು ಮತ್ತೊಮ್ಮೆ ಭೇಟಿ ನೀಡಿದರು.
ಗಾಂಧಿಯವರು ಮೊದಲಬಾರಿ ಭೇಟಿಕೊಟ್ಟ ನಂತರ ಮೈಸೂರು ಅರಸರ ಒತ್ತಾಸೆಯಂತೆ ಗ್ರಾಮದಲ್ಲಿ ಗ್ರಾಮೀಣ ಗುಡಿ ಕೈಗಾರಿಕೆಗಳಾದ ಬೆಂಕಿಕಡ್ಡಿ, ಕೈ ಕಾಗದ (ಊಚಿಟಿಜ mಚಿಜe ಠಿಚಿಠಿeಡಿ) ಬಡಗಿ ಮತ್ತು ಕಮ್ಮಾರಿಕೆ, ಏಕದಳ ಹಾಗೂ ದ್ವಿದಳ ಧಾನ್ಯ ಪರಿಷ್ಕರಣೆ,ಅವಲಕ್ಕಿ ,ಮುರ್ ಮುರಾ,ನಾರಿನ ಉತ್ಪನ್ನಗಳು ತಯಾರಿಕೆ ಗ್ರಾಮೀಣ ಎಣ್ಣೆ ಮತ್ತು ನಾರಿನ ಉದ್ದಿಮೆಗಳ ತರಬೇತಿ ಮತ್ತು ಉತ್ಪಾದನಾ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಸುಮಾರು 500 ಜನರಿಗೆ ಉದ್ಯೋಗ ನೀಡಲಾಗಿತ್ತು ಅದನ್ನು ಕಂಡ ಗಾಂಧಿಯವರು ಬಹಳ ಸಂತಸಗೊಂಡಿದ್ದರು ಎಂಬುದನ್ನು ಸ್ಥಳೀಯರು ನೆನೆಯುತ್ತಾರೆ.

ಈ ಸ್ಥಳದಲ್ಲಿ ಪ್ರಸ್ತುತ ಖಾದಿ ಉದ್ದಿಮೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇಂದು ಈ ಕೇಂದ್ರವನ್ನು ಹೊಳೆನರಸೀಪುರ, ಹಾಸನ ಜಿಲ್ಲೆ ಖಾದಿ ಗ್ರಾಮೋದ್ಯೋಗ ಸಂಘದವರು ಮುನ್ನೆಡೆಸಿಕೊಂಡು ಹೋಗುತಿದ್ದು, ಸರ್ಕಾರ ಪೆÇ್ರೀತ್ಸಾಹ ಮಜೂರಿ ನೀಡುತ್ತಿದೆ. ಚರಕದಿಂದ ನೇಯುವ ಬಟ್ಟೆಗೆ 35 ರೂ ಕೂಲಿ ಸಿಗುತಿದ್ದು ಖಾದಿ ದಾರದ ಒಂದು ಲಡಿಗೆ 3 ರೂ ಹಾಗೂ ಒಂದು ಮೀಟರ್ ಬಟ್ಟೆಗೆ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ 7 ರೂ ಪೆÇ್ರೀತ್ಸಾಹ ಮಜೂರಿ ದೊರೆತರೆ ಒಬ್ಬ ಮಹಿಳೆ ಒಂದು ದಿನಕ್ಕೆ 150 ರಿಂದ 200 ರೂ ಗಳಿಸುತ್ತಾರೆ, ಈ ಮಹಿಳೆಯರು ತಮ್ಮ ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿ ಬಿಡುವಿನ ವೇಳೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

5 ಎಕರೆ ವಿಸ್ತೀರ್ಣದಲ್ಲಿರುವ ಕೇಂದ್ರದ ಮುಂಭಾಗ ಕಾಂಪೌಂಡ್ ನಿರ್ಮಾಣವಾಗುತ್ತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬದನವಾಳು ಖಾದಿ ಕೇಂದ್ರದಲ್ಲಿ ಸಬರಮತಿ ಆಶ್ರಮ ಕಟ್ಟಡವನ್ನು ಕೆ.ಆರ್.ಐ.ಡಿ.ಎಲ್.ಇವರಿಂದ ನಿರ್ಮಿಸಲಾಗುತಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

ಉದ್ಯಾನವನದಲ್ಲಿ ಗಾಂಧೀಜಿ ಯವರು ದಂಡೀಯಾತ್ರೆ ಕೈಗೊಂಡಿರುವ ಪ್ರತಿಮೆಗಳನ್ನು ಹಾಗೂ ಗ್ರಾಮ ಸ್ವರಾಜ್ಯಕ್ಕೆ ಹಾಗೂ ಸ್ವಾವಲಂಬನೆಗೆ ಒತ್ತು ನೀಡಿರುವ ಪ್ರತಿಮೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಮಹಾತ್ಮ ಗಾಂಧಿಯವರು 1927 ರಲ್ಲಿ ಈ ಗ್ರಾಮದ ಜನರನ್ನು ಉದ್ದೇಶಿತ ಮಾತನಾಡಿದ ಸ್ಥಳದಲ್ಲಿ1950 ರಲ್ಲಿ ನಿರ್ಮಿಸಿದ್ದ ಕಟ್ಟಡ ಶಿಥಿಲಗೊಂಡಿದ್ದು ಸದರಿ ಕಟ್ಟಡವನ್ನು ನವೀಕರಣ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಲು ಉದ್ದೇಶಿಸಲಾಗಿದೆ.

ಬದನವಾಳು ಗ್ರಾಮ : ಮೈಸೂರು ಜಿಲ್ಲೆ, ನಂಜನಗೂಡು ತಾಲೂಕಿಗೆ ಸೇರಿರುವ ಬದನವಾಳು ಗ್ರಾಮ ನಂಜನಗೂಡಿನಿಂದ ಚಾಮರಾಜ ನಗರಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿದ್ದು, ಸದರಿ ಗ್ರಾಮಕ್ಕೆ ರಸ್ತೆ ಸಂಪರ್ಕವೂ ಇದೆ. ರೈಲ್ವೆ ಇಲಾಖೆಯ ದಾಖಲಾತಿ ಪ್ರಕಾರ ಸದರಿ ಗ್ರಾಮವನ್ನು ನರಸಾಂಬುಧಿ ಎಂದು ಕರೆಯಲಾಗುತಿದ್ದು, 2011 ರ ಜನಗಣತಿಯ ಪ್ರಕಾರ 632 ಕುಟುಂಬಗಳನ್ನು ಹೊಂದಿರು ಗ್ರಾಮದ ಜನಸಂಖ್ಯೆ 2784. ಈ ಗ್ರಾಮ ಒಂದು ಬಾರಿ ಜಾತಿ ಸಂಘರ್ಷಕ್ಕೊಳಗಾಗಿ ಸುದ್ದಿಯಾಗಿತ್ತಾದರೂ ಇಂದು ಜನ ಸಾಮರಸ್ಯದಿಂದಿದ್ದಾರೆ.
ಜಿಲ್ಲೆಯವರೇ ಆದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ 2024-25 ನೇ ಸಾಲಿನ ರಾಜ್ಯ ಆಯವ್ಯಯ ಭಾಷಣದಲ್ಲಿ ಗಾಂಧಿಯವರು ಭೇಟಿ ನೀಡಿದ್ದ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪೆÇ್ರೀತ್ಸಾಹಕ್ಕಾಗಿ ಕ್ರಮವಹಿಸಿ ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕದ ರೀತಿಯಲ್ಲಿ ಅಭಿವೃದ್ಧಿಗೆ ಚಿಂತಿಸಲಾಗಿದೆ ಎನ್ನುವುದರೊಂದಿಗೆ ಈಗಾಗಲೇ ಅಭಿವೃದ್ದಿ ಸಮಿತಿಯ ರಚನೆಯಾಗಿದೆ.

ಬದನವಾಳು ಕೇಂದ್ರಕ್ಕೆ ಹಲವಾರು ಗಣ್ಯರು ಭೇಟಿ ನೀಡಿದ್ದು, ಹೋರಾಟಗಾರ್ತಿ ಮೇಧಾಪಾಟ್ಕರ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಹಲವು ಸಚಿವರುಗಳು, ಶಾಸಕರು, ಜನಪ್ರತಿನಿಧಿಗಳು ಹಲವಾರು ಚಲನ ಚಿತ್ರ ನಟರು ಭೇಟಿ ನೀಡಿರುತ್ತಾರೆ.

  • ಅಶೋಕ್ ಕುಮಾರ್. ಡಿ ಉಪನಿರ್ದೇಶಕಕರು, ಮೈಸೂರು.

Leave a Reply

Your email address will not be published. Required fields are marked *