ರಾಜ ಯೋಗಿ ಬ್ರಹ್ಮಾಕುಮಾರ ಕರುಣಾಜೀಯವರಿಗೆ 86ರ ಸಂಭ್ರಮ

ಮೈಸೂರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬು ರಾಜಸ್ಥಾನ ಮುಖ್ಯಾಲಯದ ಹೆಚ್ಚುವರಿ ಸೆಕ್ರೆಟರಿ ಜನರಲ್ ಮತ್ತು ಮುಖ್ಯಸ್ಥರು, ಮಲ್ಟಿ ಮೀಡಿಯಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ರಾಜ ಯೋಗಿ ಬ್ರಹ್ಮಾಕುಮಾರ ಕರುಣಾಜೀಯವರು 86ನೇ ವರ್ಷದ ಜನ್ಮ ದಿವಸವನ್ನು ವಿಜೃಂಭಣೆಯಿಂದ ಯಾದವಗಿರಿ ಸೇವಾ ಕೇಂದ್ರದಲ್ಲಿ ಆಚರಿಸಿಕೊಂಡರು.

ಸೇವಾ ಕೇಂದ್ರದ ಹಿರಿಯ ಸಮರ್ಪಿತ ಸಹೋದರರಾದ ರಾಜಯೋಗಿ ಬ್ರಹ್ಮಾಕುಮಾರ ಪ್ರಾಣೇಶ್ ಜೀ ಗೌರವ ಸಮರ್ಪಣೆ ಮಾಡಿ ಮಾತನಾಡಿ 60ರ ದಶಕದಲ್ಲಿ ಹೆಚ್ಎಎಲ್ ಕಂಪನಿಯ ಇಂಜಿನಿಯರ್ ಆಗಿದ್ದ ಕರುಣಾಜೀಯವರು ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ವಿದ್ಯಾರ್ಥಿಯಾಗಿ ಅಂದಿನ ದಿನಗಳಲ್ಲಿ ಸೈಕಲ್ ನಿಂದ ಹಳ್ಳಿ ಹಳ್ಳಿಗೆ ಸುತ್ತಿ ಈಶ್ವರಿಯ ಸೇವೆಯನ್ನು ಸಲ್ಲಿಸುತ್ತಿದ್ಧ ನಮಗೆ ಪ್ರೇರಣೆಯನ್ನು ಉಂಟುಮಾಡುತ್ತಿತ್ತು ಈಗ ಅವರು ದೇಶ ವಿದೇಶಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೀಡಿಯಾ ಸೇವಾ ವಿಭಾಗದ ಅಧ್ಯಕ್ಷರಾಗಿ ಅನೇಕ ಸೇವೆಯನ್ನು ಸಲ್ಲಿಸಿ ಪ್ರೇರಕ ಶಕ್ತಿಯಾಗಿದ್ದಾರೆ ಅವರು ಇಷ್ಟು ಇಳಿಯ ವಯಸ್ಸಿನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈಶ್ವರನ ಸೇವೆಯನ್ನ ಸಲ್ಲಿಸುತ್ತಿರುವುದು ನಮಗೆ ಸಂತೋಷದಾಯಕವಾಗಿದೆ ಹಾಗೂ 86ನೇ ವರ್ಷದ ಜನ್ಮದಿನದ ಆಚರಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆ ಉಂಟುಮಾಡುತ್ತಿದೆ ಎಂದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜಯೋಗಿ ಬ್ರಹ್ಮಾಕುಮಾರ ಕರುಣಾಜೀಯವರು, ಶಿಕ್ಷಕರು ನಿರಂತರ ಕಲಿಯುತ್ತಲೇ ಇರಬೇಕು ಏಕೆಂದರೆ ದೀಪವು ನಿರಂತರ ಉರಿಯುತ್ತಿದ್ದರೆ ಅನೇಕ ದೀಪಗಳನ್ನು ಹೊತ್ತಿಸಲು ಸಾಧ್ಯ ಎಂದರು.

ನಾವು ಸತ್ಯವಂತರಾದಾಗ ನಾವು ಮಾಡುವ ಕಾರ್ಯಗಳು ಮತ್ತು ಮಾತುಗಳು ಒಂದೇ ಆಗಿರುತ್ತದೆ ಮಾಡುವುದನ್ನೇ ಹೇಳುತ್ತೇವೆ ಆ ಕಾರಣ ನಾವು ಎಲ್ಲರಿಂದಲೂ ಗೌರವ ಮತ್ತು ಪ್ರೀತಿಯನ್ನು ಪಡೆಯುತ್ತೇವೆ ಎಂದರು.

ಚಿಚ್ಚುವುದು ಸೂಜಿಯ ಗುಣ ಆದರೆ ದಾರದ ಜೊತೆ ಗೆಳೆತನ ಮಾಡಿದ ಮೇಲೆ ಸೂಜಿಯು ಬದಲಾಗಿ ಎಲ್ಲವನ್ನು ಜೋಡಿಸಲು ಮುಂದಾಗುತ್ತದೆ. ಅದಕ್ಕೆ ಹೇಳೋದು ಒಳ್ಳೆಯವರ ಜೊತೆ ಇದ್ದರೆ ಒಳ್ಳೆಯದೇ ಆಗುತ್ತದೆ ಅಂತ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರದ ಬಿಕೆ ರಂಗನಾಥ್ ನಿವೃತ್ತ ಡಿವೖಎಸ್ಪಿ ಕೃಷ್ಣಮೂರ್ತಿ, ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ ಶಾರದಾಜೀ ಮಣಿ ಅಣ್ಣ ಕುಮಾರಣ್ಣ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *