ಸರ್ಕಾರಿ ಶಾಲೆಗಳು ಅಭಿವೃದ್ದಿಯಾದರೆ ಮಕ್ಕಳ ದಾಖಲಾತಿ ಹೆಚ್ಚಳ

2025-26 ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಪೇಟೆಶಾಲೆಯಲ್ಲಿ ನಡೆದ ಡಿಡಿಪಿಐ ರಾಮಚಂದ್ರರಾಜೇಅರಸ್ ಅಭಿಮತ

ಚಾಮರಾಜನಗರ: ನಗರದ ಹೃದಯಭಾಗದಲ್ಲಿರುವ ಶತಮಾನದ ಶಾಲೆ ಸರ್ಕಾರಿ ಪೇಟೆಶಾಲೆಯಲ್ಲಿ ನಡೆದ 2025-26 ನೇ ಶೈಕ್ಷಣಿಕ ಸಾಲಿನ ಶಾಲಾಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲೆ ಪ್ರವೇಶಿಸುವ ದ್ವಾರದಲ್ಲಿ ಹೂಚೆಲ್ಲುವ ಮೂಲಕ ವಿದ್ಯಾರ್ಥಿಗಳನ್ನು ವಿಭಿನ್ನವಾಗಿ ಸ್ವಾಗತಿಸಲಾಯಿತು.

ಇದೇವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇಅರಸ್ ಮಾತನಾಡಿ, ಇಂದು ಜಿಲ್ಲಾದ್ಯಂತ 2025-26 ನೇ ಶೈಕ್ಷಣಿಕ ಸಾಲಿನ ಶಾಲಾಪ್ರಾರಂಭೋತ್ಸವ À ಕಾರ್ಯಕ್ರಮವನ್ನು ಜಿಲ್ಲೆಯ ಮೂರು ತಾಲ್ಲೂಕಿನ ಶಾಸಕರು, ಚುನಾಯಿತ ಪ್ರತಿನಿಧಿಗಳು ಸಡಗರಸಂಭ್ರಮದಿಂದ ನೆರವೇರಿಸಿಕೊಟ್ಟಿದ್ದಾರೆ.

ಸರ್ಕಾರಿಶಾಲೆಯ ಸಬಲೀಕರಣ ಮಾಡುವುದು, ಸರ್ಕಾರದ ಸವಲತ್ತುಗಳನ್ನು ಮಕ್ಕಳಿಗೆ ವಿತರಣೆ ಮಾಡುವುದು ಕಾರ್ಯಕ್ರಮದ ಉದ್ದೇಶ, ಬಸವರಾಜೇಂದ್ರ ಆಸ್ಪತ್ರೆ ವೈದ್ಯರಾದ ಡಾ. ಬಸವರಾಜೇಂದ್ರ ಅವರು ಸರ್ಕಾರಿ ಪೇಟೆಶಾಲೆಯನ್ನು ಅಭಿವೃದ್ದಿಪಡಿಸುವ ಸಂಬಂಧ ದತ್ತು ತೆಗೆದುಕೊಂಡಿದ್ದು, ಶಾಲೆಗೆ ಬೇಕಾದ ಬೆಂಚುಕುರ್ಚಿ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಿದ್ದಾರೆ, ಮಕ್ಕಳನ್ನು ಶಾಲೆಗೆ ಕರೆತರಲು ಎರಡುಮೂರುದಿನದಲ್ಲಿ 13ಲಕ್ಷ ರೂ.ವೆಚ್ಚದ ಬಸ್ ಒದಗಿಸಲು ತೀರ್ಮಾನಿಸಿದ್ದಾರೆ. ಶಾಲಾಭಿವೃದ್ದಿಗೆ ಬೇಕಾದ ನೆರವುಕೊಡಿಸುವುದಾಗಿ ತಮ್ಮ ಜತೆ ಚರ್ಚಿಸಿದ್ದಾರೆ. ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಶಾಲಾಭಿವೃದ್ದಿಗೆ ಏನೇನು ಬೇಕು, ಅವುಗಳನ್ನು ಸರ್ಕಾರದಿಂದ ಪಡೆಯಲು ಸಾಧ್ಯವಾಗಲಿದೆ. ಜತೆಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಮಾಲಾ, ಸದಸ್ಯರಾದ ಕಲಾವತಿ, ಎಚ್.ಎಂ.ನಾಗೇಂದ್ರ, ಬಸವರಾಜೇಂದ್ರ ಆಸ್ಪತ್ರೆ ಸಿಬ್ಬಂದಿಗಳಾದ ನಾಗೇಂದ್ರಸ್ವಾಮಿ, ಮಹೇಶ್, ಸುಮಿತ್, ಸಿಆರ್‌ಪಿ ಉಮೇಶ್ ಶಿಕ್ಷಕಿ ವಿಜಯಕುಮಾರಿ, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *