ಇತಿಹಾಸದಲ್ಲಿ ಒಂದು ಪಾಠ ಮತ್ತು ಪ್ರೇರಣೆಯಾದ “ಜಲಿಯನ್ ವಾಲಾಬಾಗ್ ಹತ್ಯಾಕಾಂಡ”

ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಇದು ಭಾರತದ ಇತಿಹಾಸದ ಪುಟದಲ್ಲಿ ನಡೆದ ಘೋರ ಕೃತ್ಯ ಹಾಗೂ ಅಮಾನವೀಯ ಘಟನೆ ಆಗಿದೆ. ಇತಿಹಾಸದಲ್ಲಿ ನಡೆದ ಯಾವುದೇ ಘಟನೆಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ಸಂದೇಶವನ್ನು ಸಾರುತ್ತವೆ. ಇತಿಹಾಸದಿಂದ ನಾವು ಪಾಠವನ್ನು ಕೂಡ ಕಲಿಯಬಹುದಾಗಿದೆ. ಜೊತೆಗೆ ಯಾವುದೇ ವಿಷಯ ಆದರೂ ಕೂಡ ಅವುಗಳನ್ನು ತಡೆಯುವುದು ಹೇಗೆ ಎನ್ನುವುದನ್ನು ಕೂಡ ನಾವು ಗಮನಿಸಲು ಅನುಕೂಲವಾಗುತ್ತದೆ. ನಡೆದಿರುವ ಇತಿಹಾಸದ ಘಟನೆಗಳನ್ನು ಓದುತ್ತಾ ಹೋದರೆ ಒಂದೊಂದು ಕೂಡ ಒಂದೊಂದು ರೋಚಕ ಕಥೆಗಳನ್ನ ಸಾರಿ ಹೇಳುತ್ತವೆ!. 

ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಬಂದರೂ ಕೂಡ ಇತಿಹಾಸದ ಹಲವು ನೆನಪುಗಳು ಹಸಿ ಹಸಿಯಾಗಿಯೇ ಉಳಿದಿವೆ. ನಮ್ಮ ದೇಶಕ್ಕಾಗಿ ದುಡಿದ, ಮಡಿದ ಎಲ್ಲರನ್ನೂ ನೆನಪಿಸಿಕೊಳ್ಳಲೇ ಬೇಕಾದ ದಿನಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ತ್ಯಾಗ, ಬಲಿದಾನದಿಂದ ಮಡಿದ ಅನೇಕರ ಫಲದಿಂದಾಗಿ ನಾವು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡೆವು. "ಓ ಭಾರತ ಭಾಂದವ ನೆನೆ ನೆನೆ ಆ ದಿನವಾ........"- ಎನ್ನುವ ಒಂದು ಗೀತೆಯೂ ಕೂಡ "ಮಾಡಿ ಮಡಿದವರು" ಎಂಬ ಚಿತ್ರದಲ್ಲಿ ಅಳವಡಿಸಿದ್ದಾರೆ. 

ಭಾರತದ ಎಲ್ಲಾ ಕಡೆಗಳಿಂದಲೂ ಕೂಡ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಹಲವು ಅಂಶಗಳು ದಾಖಲೆಯಾಗಿ ಉಳಿದಿವೆ. ಇನ್ನು ಜಲಿಯನ್ ವಾಲಾಬಾಗ್ ವಿಷಯದ ಬಗ್ಗೆ ಚರಿತ್ರೆಯಲ್ಲಿ ಓದುವಾಗ ಕಣ್ಣಾಲಿಗಳು  ತೇವಗೊಳ್ಳುತ್ತವೆ.  1919ರ ಏಪ್ರಿಲ್ 13 ಪಂಜಾಬ್ ನ ಅಮೃತಸರದ ಹತ್ತಿರ ಇರುವ ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಒಂದು ಶಾಂತಿ ಸಮ್ಮೇಳನದಲ್ಲಿ ನಡೆದ ಘಟನೆ ಇವತ್ತಿಗೂ ಜೀವಂತ ಸಾಕ್ಷಿಯಾಗಿ ಉಳಿದಿದೆ. ದುರಂತದ ಒಂದು ಗುರುತು ಕೂಡ ಸಿಗದ ಜನರು ಅಲ್ಲಿ ದಾವಿಸಿದ್ದರು. ಎತ್ತರದ ಗೋಡೆಗಳು.....  ಒಳಬರಲು ಮತ್ತು ಹೊರ ಹೋಗಲು ಇದ್ದ ಒಂದೇ ಒಂದು ಪ್ರವೇಶ ದ್ವಾರ..... ಆದರೆ ಒಂದು ದೊಡ್ಡದಾದ ಮೈದಾನ ಇಲ್ಲಿ ಏಕಾಏಕಿ ಗುಂಡಿನ ದಾಳಿ ನಡೆದಾಗ ಎಲ್ಲರೂ ವಿಚಲಿತಲಾದರು. ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ಐದು, ಹತ್ತು ನಿಮಿಷದಲ್ಲಿ ನೂರಕ್ಕೂ ಹೆಚ್ಚು ಮಂದಿ ಬಲಿಯಾದರು. ಗಾಬರಿಯ ನೂಕು ನುಗ್ಗಲಿನಿಂದಲೂ ಕೂಡ ಪಕ್ಕದಲ್ಲಿ ಇದ್ದ ಬಾವಿಗೆ ಬಿದ್ದವರು ಕೂಡ ಅನೇಕರು. ಜನರಲ್ ಡೈಯರ್ ನ ಆತುರದ ನಿರ್ಧಾರದಿಂದ ಈ ರೀತಿಯ ದುರಂತ ನಡೆದೇ ಬಿಟ್ಟಿತು. ನಮ್ಮ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಯಾಯಿತು. 

ಇಷ್ಟೆಲ್ಲಾ ನಡೆದರೂ ಕೂಡ......" ನನ್ನ ಸೈನಿಕರ ಬಂದುಕಿನಲ್ಲಿ ಗುಂಡುಗಳು ಮುಗಿದಿದ್ದರಿಂದ ಹತ್ಯಾಕಂಡವನ್ನು ನಿಲ್ಲಿಸಲಾಯಿತು"- ಎಂದು ಡಯರ್ ಜಂಬ ಕೊಚ್ಚಿಕೊಂಡಿದ್ದ. ಇಷ್ಟೆಲ್ಲಾ ನಡೆದಿದ್ದರೂ ಕೂಡ ಅವತ್ತಿನ ಬ್ರಿಟಿಷ್ ಸರ್ಕಾರದಲ್ಲಿ ಕೇವಲ 350ಕ್ಕೂ ಹೆಚ್ಚು ಜನ ಸತ್ತರೆಂದು ಕಾಟಾಚಾರದ ವರದಿ ನೀಡಿ, ಗುಂಡಿನ ದಾಳಿಯು ಅನಿವಾರ್ಯ ಆಕಸ್ಮಿಕವಾಗಿ ನಡೆದಿದೆ ಎಂದು ವರದಿ ಮಾಡಲಾಗಿತ್ತು. ಈ ಘಟನೆಯು ಭಾರತೀಯರ ಹೋರಾಟವನ್ನು ಧಮನಗೊಳಿಸುವ ಬದಲು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಒಂದು ಮುಖ್ಯ ವೇದಿಕೆಯಾಗಿ ನಿರ್ಮಾಣಗೊಂಡಿತು. ಅದು ಬ್ರಿಟಿಷರಿಗೆ ಅರ್ಥವಾಗಲಿಲ್ಲ ಅಷ್ಟೇ!.  ತಟಸ್ಥರಾಗಿ ಸುಮ್ಮನಿದ್ದ ಅನೇಕ ಹೋರಾಟಗಾರರು ಪುಟಿದೆದ್ದರು.  ಬ್ರಿಟಿಷರಿಗೆ ಸಿಂಹ ಸ್ವಪ್ನವಾದರು. ಭಾರತವನ್ನಷ್ಟೇ ಅಲ್ಲ ಇಡೀ ಏಷ್ಯಾ ಖಂಡದಲ್ಲಿ ರಾಷ್ಟ್ರೀಯ ಚಳುವಳಿಯ ಕಾವು ಎಲ್ಲೆಡೆ ಹಬ್ಬಲಾಯಿತು. ಲೋಕಮಾನ್ಯ ತಿಲಕರು ನಿರ್ಗಮಿಸಿದ ನಂತರ ಗಾಂಧೀಜಿ ಸ್ವಾತಂತ್ರ್ಯ ಚಳುವಳಿಯ ನಾಯಕರಾದರು ಗುರುದೇವ ರವೀಂದ್ರನಾಥ ಟ್ಯಾಗೋರ್ ರವರು ತಮ್ಮ ನೈಟ್ ವುಡ್ ಪದವಿಯನ್ನು ಹಿಂತಿರುಗಿಸಿದರು.

ಮೈಕಲ್ ಓ’ಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ, ಅಂದಿನ ವೈಸರಾಯ್ಯಾಗಿದ್ದ, ಫ್ರೆಡ್ರಿಕ್ ತೆಸಿಂಗರ್, ಅಮೃತಸರ ಹಾಗು ಅದರ ಸುತ್ತ-ಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದನು.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓ’ಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ, ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ 12.40 ರ ವೇಳೆಗೆ ತಿಳಿಯಿತಾದರೂ, ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು, ಡೈಯಾರ್ ಒಪ್ಪಿಕೊಂಡನು.

ಇದಲ್ಲದೆ, ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. “ಜಲಿಯನ್‌ವಾಲಾ ಬಾಗ್ ನಲ್ಲಿ ಸೇರಿದ ಜನರನ್ನು ಚದುರಿಸಲು, ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ, ತಾನು ಆ ಕ್ರಮ ಕೈಗೊಂಡಿರದಿದ್ದರೆ, ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ ಗೇಲಿ ಮಾಡಿ, ತಾನು ಒಬ್ಬ ಮೂರ್ಖನಂತೆ ತೋರುತಿದ್ದೆ” ಎಂದು ಹಂಟರ್ ಆಯೋಗದ ಮುಂದೆ
ಡೈಯಾರ್ತ ನ್ನ ನಿಲುವನ್ನು ಸ್ಪಷ್ಟಪಡಿಸಿದನು.

ಡೈಯಾರ್ ತಾನು ಗುಂಪನ್ನು ಒಂದು ಚಿಕ್ಕ ನಿರ್ದಿಷ್ಟ ಸ್ಥಳದಲ್ಲಿ ಗುಂಪು ಹಾಕಲು ಸಾದ್ಯವಾಗಿದ್ದರೆ, ತಾನು ಮಿಷಿನ್ ಬಂದೂಕನ್ನೇ ಪ್ರಯೋಗಿಸುತಿದ್ದುದ್ದಾಗಿ ರಾಜಾರೋಷವಾಗಿ ಆಯೋಗದ ಮುಂದೆ ಹೇಳಿಕೆಯನ್ನು ನೀಡಿದನು. ತಾನು ಜನರು ಚದುರುತಿದ್ದರುವುದನ್ನು ನೊಡಿದರೂ, ಅವರು ಸಂಪೂರ್ಣವಾಗಿ ಜಲಿಯನ್‌ವಾಲಾ ಬಾಗ್‌ನಿಂದ ತೆರವು ಗೊಳಿಸುವುದರ ತನಕ ಗುಂಡಿನ ಚಕಮಕಿಯನ್ನು ನಿಲ್ಲಿಸ ಬಾರದೆಂದು ನಿರ್ಧರಿಸಿದ್ದಾಗಿ ಹೇಳಿದನು. ತನ್ನ ಹೇಳಿಕೆಯನ್ನು ಮುಂದುವರೆಸುತ್ತಾ, ತಾನು ಗಾಯಳುಗಳನ್ನು ನಿರ್ಲಕ್ಷಿಸಿದ್ದಾಗಿ, ಅವರ ಆರೈಕೆ ಆಸ್ಪತ್ರೆಗಳ ಕರ್ತವ್ಯವೆಂದನು.

“ಜಲಿಯನ್‍ವಾಲಾ ಬಾಗ್ ನಲ್ಲಿ ನಡೆದಿರುವ ಈ ಘಟನೆಯು ಒಂದು ಅಸಾಮಾನ್ಯ ಘಟನೆಯಾಗಿದ್ದು, ವಿಸ್ಮಯಗೊಳಿಸುವಂತಹ ಅಮಾನುಷ ದುಷ್ಕೃತ್ಯವಾಗಿದೆ, ಹಾಗು ಪಾಪಕೂಪದಲ್ಲಿ ಪ್ರತ್ಯೇಕವಾಗಿ “. ಡೈಯರ್‍ನ ಕ್ರಮವು ಜಗತ್ತಿನಾದ್ಯಂತ ನಿಂದಿಸಲ್ಪಟ್ಟಿತು. ಬ್ರಿಟೀಷ್ ಸರಕಾರವು ಅವನನ್ನು ಅಧಿಕೃತವಾಗಿ ಅಮಾನತುಗೊಳಿಸಿತು. ಅವನು ತನ್ನ ಹುದ್ದೆಗೆ 1920ರಲ್ಲಿ ರಾಜೀನಾಮೆ ಕೊಟ್ಟನು.

ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ 26000 ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು. ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು. ಭಾರತದಲ್ಲಿ ಈ ಹತ್ಯಾಕಾಂಡವು ಅತೀವ ದುಃಖ, ರೋಷವನ್ನು ಉಂಟುಮಾಡಿತು.

ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ, ಮಹಾತ್ಮ ಗಾಂಧಿಯವರ ಬ್ರಿಟೀಷರ ವಿರುದ್ಧದ 1920ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು. .

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಮೇರೆಗೆ, ಈ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸುವ ಸಲುವಾಗಿ 1920ರಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಯಿತು. 1923ರಲ್ಲಿ ಇದಕ್ಕೆ ಬೇಕಾದ ಜಾಗವನ್ನು ಖರೀದಿಸಲಾಯಿತು. ಆ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಇದನ್ನು 1961 ಏಪ್ರಿಲ್ 13ರಂದು, ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತಿತರ ಮುಖಂಡರ ಸಮ್ಮುಖದಲ್ಲಿ, ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು.

ನಂತರ ಜ್ಯೋತಿಯೊಂದನ್ನು ಇಡಲಾಯಿತು. ಗುಂಡಿನಿಂದಾದ ರಂಧ್ರಗಳನ್ನು ಇಂದಿಗೂ ಅಲ್ಲಿನ ಗೋಡೆಗಳ ಮೇಲೆ, ಅಕ್ಕಪಕ್ಕದ ಕಟ್ಟಡಗಳ ಮೇಲೆ ನೋಡಬಹುದಾಗಿದೆ. ಬಹಳಷ್ಟು ಜನರು ಧುಮುಕಿದ ಅಲ್ಲಿನ ಬಾವಿಯನ್ನು ಕೂಡ ಸಂರಕ್ಷಿಸಿ, ಸ್ಮಾರಕವನ್ನಾಗಿ ಮಾಡಲಾಗಿದೆ. ಈ ಹತ್ಯಾಕಾಂಡದ ಚಿತ್ರಣವನ್ನು ರಿಚರ್ಡ್ ಅಟೆನ್‍ಬೊರೋ ನಿರ್ದೇಶನದ 1982ರಲ್ಲಿ ಬಿಡುಗಡೆಯಾದ “ಗಾಂಧಿ”- ಚಲನಚಿತ್ರದಲ್ಲಿ, ಹಾಗು ಇತರ ಭಾರತೀಯ ಚಲನಚಿತ್ರಗಳಾದ ರಂಗ್ ದೇ ಬಸಂತಿ, ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಗಳಲ್ಲಿ ಅಳವಡಿಸ ಲಾಗಿದೆ.

ಈ ಬಗ್ಗೆ ಮತ್ತಷ್ಟು ಮಾಹಿತಿ…….
ಮೊದಲನೆಯ ಮಹಾಯುದ್ಧದ ಸಮಯದಲ್ಲಿ (1914-18) ಭಾರತದ ಬ್ರಿಟಿಷ್ ಸರ್ಕಾರವು ವಿಧ್ವಂಸಕ ಚಟುವಟಿಕೆಗಳನ್ನು ಎದುರಿಸಲು ಉದ್ದೇಶಿಸಲಾದ ದಮನಕಾರಿ ತುರ್ತು ಅಧಿಕಾರಗಳ ಸರಣಿಯನ್ನು ಜಾರಿಗೆ ತಂದಿತು. ಯುದ್ಧದ ಅಂತ್ಯದ ವೇಳೆಗೆ ಆ ಕ್ರಮಗಳನ್ನು ಸಡಿಲಗೊಳಿಸಲಾಗುತ್ತದೆ ಮತ್ತು ಭಾರತಕ್ಕೆ ಹೆಚ್ಚಿನ ರಾಜಕೀಯ ಸ್ವಾಯತ್ತತೆಯನ್ನು ನೀಡಲಾಗುತ್ತದೆ ಎಂಬ ನಿರೀಕ್ಷೆಗಳು ಭಾರತೀಯರಲ್ಲಿ ಹೆಚ್ಚಾಗಿದ್ದವು. 1918 ರಲ್ಲಿ ಬ್ರಿಟಿಷ್ ಸಂಸತ್ತಿಗೆ ಮಂಡಿಸಲಾದ ಮಾಂಟೆಗು-ಚೆಲ್ಮ್ಸ್‌ಫೋರ್ಡ್ ವರದಿಯು ವಾಸ್ತವವಾಗಿ ಸೀಮಿತ ಸ್ಥಳೀಯ ಸ್ವ-ಸರ್ಕಾರವನ್ನು ಶಿಫಾರಸು ಮಾಡಿತು. ಆದಾಗ್ಯೂ, 1919 ರ ಆರಂಭದಲ್ಲಿ ಭಾರತ ಸರ್ಕಾರವುರೌಲಟ್ ಕಾಯಿದೆಗಳು , ಇದು ಮೂಲಭೂತವಾಗಿ ದಮನಕಾರಿ ಯುದ್ಧಕಾಲದ ಕ್ರಮಗಳನ್ನು ವಿಸ್ತರಿಸಿತು.


ಜಲಿಯನ್‌ವಾಲಾ ಹೀಗೆಯೂ ಕರೆಯುತ್ತಾರೆ: ಅಮೃತಸರ ಹತ್ಯಾಕಾಂಡ
ಭಾರತೀಯರಲ್ಲಿ, ವಿಶೇಷವಾಗಿ ಪಂಜಾಬ್ ಪ್ರದೇಶದಲ್ಲಿ ವ್ಯಾಪಕ ಕೋಪ ಮತ್ತು ಅತೃಪ್ತಿಯನ್ನು ಉಂಟುಮಾಡಿದವು. ಏಪ್ರಿಲ್ ಆರಂಭದಲ್ಲಿ, ಗಾಂಧಿಯವರು ದೇಶಾದ್ಯಂತ ಒಂದು ದಿನದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದರು. ಅಮೃತಸರದಲ್ಲಿ ಪ್ರಮುಖ ಭಾರತೀಯ ನಾಯಕರನ್ನು ಬಂಧಿಸಿ ಆ ನಗರದಿಂದ ಗಡಿಪಾರು ಮಾಡಲಾಗಿದೆ ಎಂಬ ಸುದ್ದಿ ಏಪ್ರಿಲ್ 10 ರಂದು ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು, ಇದರಲ್ಲಿ ಸೈನಿಕರು ನಾಗರಿಕರ ಮೇಲೆ ಗುಂಡು ಹಾರಿಸಿದರು, ಕಟ್ಟಡಗಳನ್ನು ಲೂಟಿ ಮಾಡಲಾಯಿತು ಮತ್ತು ಸುಡಲಾಯಿತು, ಮತ್ತು ಕೋಪಗೊಂಡ ಗುಂಪುಗಳು ಹಲವಾರು ವಿದೇಶಿ ಪ್ರಜೆಗಳನ್ನು ಕೊಂದವು ಮತ್ತು ಕ್ರಿಶ್ಚಿಯನ್ ಮಿಷನರಿಯನ್ನು ತೀವ್ರವಾಗಿ ಥಳಿಸಲಾಯಿತು. ಬ್ರಿಗೇಡಿಯರ್ ಜನರಲ್ ನೇತೃತ್ವದಲ್ಲಿ ಹಲವಾರು ಡಜನ್ ಸೈನಿಕರ ಪಡೆ. ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ಅವರಿಗೆ ಕ್ರಮವನ್ನು ಪುನಃಸ್ಥಾಪಿಸುವ ಕೆಲಸವನ್ನು ನೀಡಲಾಯಿತು. ತೆಗೆದುಕೊಂಡ ಕ್ರಮಗಳಲ್ಲಿ ಸಾರ್ವಜನಿಕ ಸಭೆಗಳ ನಿಷೇಧವೂ ಸೇರಿದೆ.

ಒಟ್ಟಿನಲ್ಲಿ ಇಂತಹ ಘಟನೆಗಳನ್ನು ನಮ್ಮ ಯುವ ಜನತೆ ಓದಬೇಕು. ಜೊತೆಗೆ ಇತಿಹಾಸದ ರೋಚಕ ವಿಷಯಗಳನ್ನು ತಿಳಿದುಕೊಳ್ಳಬೇಕು. ಇತಿಹಾಸವು ನಮಗೆ ಒಂದಲ್ಲ ಒಂದು ರೀತಿಯಲ್ಲಿ ಪಾಠವನ್ನು, ಎಚ್ಚರಿಕೆಯನ್ನು ನೀಡುತ್ತದೆ. ಅದನ್ನು ತಾಳ್ಮೆಯಿಂದ ಓದುವಂತಾಗಬೇಕು. ನಮ್ಮ ಸ್ವಾತಂತ್ರ್ಯಕ್ಕಾಗಿ ಮಡಿದ, ದುಡಿದ ಎಲ್ಲರನ್ನೂ ಕೂಡ ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳೋಣ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *