ಕಂಪ್ಯೂಟರ್ ಕಲಿಕೆಯಿಂದ ಉದ್ಯೋಗವಕಾಶಗಳು ಹೆಚ್ಚು : ವೆಂಕಟೇಶ್

ಶ್ರೀ ಕಂಪ್ಯೂಟರ್ಸ್‍ನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಚಾಮರಾಜನಗರ: ಜಾಗತೀಕರಣದ ಪರಿಣಾಮ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನೀಡುತ್ತಾರೆ ಎಂದು ಶ್ರೀ ಕಂಪ್ಯೂಟರ್‍ನ ಸಿ.ಬಿ. ವೆಂಕಟೇಶ್ ತಿಳಿಸಿದರು.

ನಗರದ ದೇವಾಂಗ ಬೀದಿಯಲ್ಲಿರುವ ಶ್ರೀ ಕಂಪ್ಯೂಟರ್‍ನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ಕಂಪ್ಯೂಟರ್ ಸೆಂಟರ್ ಆರಂಭಿಸಿ, ಅತ್ಯಂತ ಕಡಿಮೆ ದರದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಿಕೊಡಲಾಗುತ್ತಿದೆ. ಇದರೊಟ್ಟಿಗೆ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕಂಪ್ಯೂಟರ್ ಕಲಿಕೆಗೆ ಅವಕಾಶ ನೀಡಿದೆ. ವಿದ್ಯಾರ್ಥಿಗಳ ಕೌಶಲ್ಯ ತರಬೇತಿ ಅನ್‍ಲೈನ್ ಸೇವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ಇದನ್ನು ಸದ್ಬಳಕೆ ಮಾಡಿಕೊಂಡು ಸ್ವಉದ್ಯೋಗವನ್ನು ಹೊಂದಿ ಅರ್ಥಿಕ ಸ್ವಾವಲಂಬನೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಇದುವರೆಗೆ ಶ್ರೀ ಕಂಪ್ಯೂಟರ್ ನಿಂದ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಪತ್ರಕರ್ತರಾದ ಎಚ್.ಎಸ್. ಚಂದ್ರಶೇಖರ್ ಮಾತನಾಡಿ, ಕಂಪ್ಯೂಟರ್ ಕಲಿತರೇ ಎಲ್ಲೆ ಹೋದರು ಉದ್ಯೋಗ ದೊರೆಯುತ್ತದೆ. ಓದುವ ಸಮಯದಲ್ಲಿ ಕಂಪ್ಯೂಟರ್ ಕಲಿತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು.ಜಿಲ್ಲೆಗೆ ಹೆಚ್ಚಿನ ಕಂಪನಿಗಳು ಹಾಗೂ ಕಾರ್ಖಾನೆಗಳು ಬರುತ್ತಿವೆ. ಹೀಗಾಗಿ ಇಂಥ ಸಂಸ್ಥೆಗಳ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿ ಎಂದರು.
ಶ್ರೀ ಕಂಪ್ಯೂಟರ್ಸ್‍ನ ಕಾರ್ಯದರ್ಶಿ ನಾಗೇಶ್, ವ್ಯವಸ್ಥಾಪಕಿ ಲಕ್ಷ್ಮಿ, ಶಿಕ್ಷಕರು, ಶಿಬಿರಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *