- ನಗರದಲ್ಲಿ ಕಲರವ ಪ್ರೀ ಸ್ಕೂಲ್ಗೆ ಉದ್ಘಾಟನೆ
- ಸರಸ್ವತಿ ಪೂಜೆ, ಅಕ್ಷರಾಭ್ಯಾಸ, ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ
ಚಾಮರಾಜನಗರ: ಭಾರತೀಯ ಸಂಸ್ಕøತಿ , ಪರಂಪರೆ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ವಾಸವಿ ಏಜುಕೇಷನ್ ಟ್ರಸ್ಟ್ ವತಿಯಿಂದ ಆರಂಭವಾಗಿರುವ ಕಲರವ ಪ್ರೀ ಸ್ಕೂಲ್ ಶ್ರಮಿಸಲಿದೆ ಎಂದು ನಗರದ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.

ನಗರದ ಶಂಕರಪುರ ಬಡಾವಣೆಯ ಶ್ರೀರಾಮ ಲೇಔಟ್ನಲ್ಲಿ ನೂತನವಾಗಿ ವಾಸವಿ ಏಜುಕೇಷನ್ ಟ್ರಸ್ಟ್ ವತಿಯಿಂದ ಆರಂಭವಾದ ಕಲರವ ಪ್ರೀ ಸ್ಕೂಲ್ ಉದ್ಗಾಟಿಸಿ, ಪುಟ್ಟ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.

ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹಾಗೂ ವಿಭಕ್ತ ಕುಟುಂಬಗಳಿಂದಾಗಿ ಪತಿ, ಪತ್ನಿ ಇಬ್ಬರು ಸಹ ದುಡಿಮೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆಟವಾಡುತ್ತಲೇ ಮಗುವಿಗೆ ಕಲಿಕೆಯ ಆಸಕ್ತಿಯನ್ನು ಮೂಡಿಸುವ ಕಲರವ ಪ್ರೀ ಸ್ಕೂಲ್ಗಳು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ. ಬೆಂಗಳೂರು ಹಾಗೂ ಮಹಾನಗರ ಪ್ರದೇಶಗಳಲ್ಲಿ ಇರುವಂತಹ ಸೌಲಭ್ಯವುಳ್ಳ ಕಲರವ ಪ್ರೀ ಸ್ಕೂಲ್ ಅನ್ನು ಚಾ.ನಗರದಲ್ಲಿ ವಾಸವಿ ಏಜುಕೇಷನ್ ಟ್ರಸ್ಟ್ ನಿರ್ಮಾಣ ಮಾಡಿದೆ. ಇದನ್ನು ನಮ್ಮ ಜಿಲ್ಲೆಯ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಟ್ರಸ್ಟ್ನ ಅಧ್ಯಕ್ಷರು ಹಾಗೂ ನಂದಕುಮಾರ ಅಭರಣ ಮಾಲೀಕರಾದ ಡಿ.ಎಸ್. ವೆಂಕಟೇಶ್ ಬಾಬು ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಮಕ್ಕಳಿಗೆ ಉತ್ತಮವಾದ ಪ್ರೀ ಸ್ಕೂಲ್ ಆರಂಭಿಸಬೇಕೇಂಬ ನಮ್ಮ ಟ್ರಸ್ಟ್ ಆಶಯದಂತೆ ಪ್ರಸಕ್ತ ವರ್ಷದಲ್ಲಿ ಪ್ಲೇಯ್ ಗ್ರೂಪ್, ಪ್ರೀ ಕೆಜಿಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆಯನ್ನು ಮುನ್ನಡೆಸಲಾಗುತ್ತದೆ, ಪೋಷಕರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಶಾಲೆಯ ಪ್ರಥಮ ದಿನದ ಆರಂಭಕ್ಕೆ ಪುಟ್ಟ ಮಕ್ಕಳೊಂದಿಗೆ ಆಗಮಿಸಿದ ಪೋಷಕರು ಹಾಗೂ ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು. ಸರಸ್ವತಿ ಪೂಜೆ ಬಳಿಕ ಪೋಷಕರೊಟ್ಟಿಗೆ ಮಗುವಿಗೆ ಅಕ್ಷಾರಾಭ್ಯಾಸ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ವಾಸವಿ ಏಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಬಿ.ಆರ್. ನಾಗಾರ್ಜುನ, ಖಜಾಂಚಿ ಶ್ರೀಗಿರಿವಾಸ, ಉಪಾಧ್ಯಕ್ಷ ರಮೇಶ್ಕುಮಾರ್, ಸಹ ಕಾರ್ಯದರ್ಶಿ, ಡಿ.ವಿ.ಶ್ರೀನಿಧಿ, ಶಿಕ್ಷಕರಾದ ಮಾಧುರಿ, ಸುಷ್ಮಿತಾ, ಮೇಘ, ಸುಬ್ಬಲಕ್ಷ್ಮೀ, ಸಹನಾ, ಸಿಂಚನ ಹಾಗೂ ಪೋಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.