ಕಣ್ಣೂರು ವಿ ಗೋವಿಂದಾಚಾರಿಗೆ ಅತ್ಯುತ್ತಮ ಶುಶ್ರೂಷಕ ಸೇವಾ ಪ್ರಶಸ್ತಿ ಪ್ರದಾನ

ಆಧುನಿಕ ನರ್ಸಿಂಗ್‌ನ ಪ್ರವರ್ತಕರಾದ "ಫ್ಲಾರೆನ್ಸ್ ನೈಟಿಂಗೇಲ್" ಅವರ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಅಂತರರಾಷ್ಟ್ರೀಯ ದಾದಿಯರ (ಶುಶ್ರೂಷಕರು) ದಿನವನ್ನು ಆಚರಿಸಲಾಯಿತು. 
ಈ ಹಿನ್ನೆಲೆಯಲ್ಲಿ ಈ ವರ್ಷ ಆರ್ ವಿ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆ ಮೂವರಿಗೆ ಪ್ರಶಸ್ತಿಯನ್ನು ನೀಡಿದ್ದು, ಅವರಲ್ಲಿ ಮೈಸೂರಿನ ಕಣ್ಣೂರು ವಿ ಗೋವಿಂದಾಚಾರಿ ರವರಿಗೆ ಅತ್ಯುತ್ತಮ ಶುಶ್ರೂಷಕ ಸೇವಾ ಪ್ರಶಸ್ತಿಯನ್ನು ಡಿ ಎ ಪಾಂಡು ಮೆಮೋರಿಯಲ್ ಆರ್ ವಿ ಡೆಂಟಲ್ ಕಾಲೇಜ್ , ಬೆಂಗಳೂರಿನಲ್ಲಿ ಸೋಮವಾರ ಸಂಜೆ ಪ್ರದಾನ ಮಾಡಲಾಯಿತು.
ಕಣ್ಣೂರು ವಿ ಗೋವಿಂದಾಚಾರಿ ರವರು ಭಾರತ ಸರ್ಕಾರದ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಮೈಸೂರಿನ ಘಟಕದಲ್ಲಿ
30 ವರ್ಷ ಶುಶ್ರೂಷಕ ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

Leave a Reply

Your email address will not be published. Required fields are marked *