ಚಾಮರಾಜನಗರ: ಅಖಿಲ ಭಾರತೀಯ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಂದಿಬ್ರಿಗೇಡ್, ಜೆಎಸ್ಎಸ್ ವೈದ್ಯಕೀಯ ಸಂಸ್ಥೆ, ಜೆಎಸ್ಎಸ್ ನರ್ಸಿಂಗ್ ಕಾಲೇಜು, ರೋಟರಿ ಸಂಸ್ಥೆ ವತಿಯಿಂದ ಫೆ. 5 ರಂದು ನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ನಂದಿ ಬ್ರಿಗೇಡ್ ಮುಖ್ಯಸ್ಥ ಶಿವರಾಜ್ ಸಿದ್ದಯ್ಯಪುರ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ನಗರದ ರೋಟರಿ ಭವನದಲ್ಲಿ ಬೆಳಿಗ್ಗೆ 9: 30 ರಿಂದ ಮಧ್ಯಾಹ್ನ 2 ಗಂಟೆಯ ತನಕ ಶಿಬಿರ ನಡೆಯಲಿದ್ದು, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು, ಸ್ತ್ರೀರೋಗ ತಜ್ಞರು, ರಕ್ತದೊತ್ತಡ, ಮಧುಮೇಹ, ಇಸಿಜಿ, ಹಾಗೂ ಇನ್ನಿತರ ಸಮಸ್ಯೆಗಳು ಮೈಸೂರಿನ ತಜ್ಞ ವೈದ್ಯರುಗಳು ಇರುತ್ತಾರೆ. ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಶಿವರಾಜ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಣಪತಿ ಮಂಡಳಿಯ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಅಮಚವಾಡಿ ಮಹದೇವ, ಅರ್ಜುನ್ ಸಿ.ಕೆ, ಮಹೇಶ್ ಇತರರು ಹಾಜರಿದ್ದರು.