ಬಸ್ ಷೆಲ್ಟರ್ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ನಗರದ ಹೊರವಲಯದಲ್ಲಿರುವಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನಸಂಸ್ಥೆಆಸ್ಪತ್ರೆ ಮುಂಭಾಗ, ಶಾಸಕರ ಪ್ರದೇಶಾಭಿವೃದ್ದಿಅನುದಾನ 5ಲಕ್ಷರೂ.ವೆಚ್ಚದಲ್ಲಿ ಬಸ್ ಷೆಲ್ಟರ್ ನಿರ್ಮಾಣಕಾಮಗಾರಿಗೆಎಂಎಸ್‍ಐಎಲ್‍ಅಧ್ಯಕ್ಷರು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.


ಇದೇವೇಳೆ ಅವರು ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಬಸ್ ಷೆಲ್ಟರ್ ನಿರ್ಮಾಣ ಅವಶ್ಯವಿದೆ. ಇಲ್ಲದಿರುವ ಕಡೆ ಪರಿಶೀಲಿಸಿ ಬಸ್ ಷೆಲ್ಟರ್ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.

ಯಡಪುರ ಗ್ರಾ,ಪಂ ಸದಸ್ಯ ಮಹದೇವಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ(ಸೋಮೇಶ್), ಡಾ,ಮಂಜುನಾಥ್, ಸೇರಿದಂತೆಇತರರು ಹಾಜರಿದ್ದರು.

Leave a Reply

Your email address will not be published. Required fields are marked *