ವೀರನಪುರ ಕ್ರಾಸ್ ಬಳಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ತಾಲ್ಲೂಕಿನ ವೀರನಪುರ ಕ್ರಾಸ್ ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ 1092 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 225 ಕಿಮೀಗಳ 2*125 ಎಂವಿಎ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಎಂಎಸ್ ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಇದೇವೇಳೆ ಅವರು ಮಾತನಾಡಿ, ಈ ಭಾಗದ ಗ್ರಾಮಗಳಾದ ಉಡಿಗಾಲ, ಉಗನೇದಹುಂಡಿ, ಚಿಕ್ಕಕೆಂಪಿಹುಂಡಿ, ದೇವಲಾಪುರ. ವೀರನಪುರ, ನಂಜೇದೇವನಪುರ, ಕಲ್ಪುರ, ಕಳಕನಹುಂಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಹಾಗೂ ಅಡಚಣೆ ರಹಿತ ವಿದ್ಯುತ್ ಒದಗಿಸಲು ವಿದ್ಯುತ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸೆಸ್ಕ್ ಇಇ ಪ್ರೀತಂ, ಎಇಇ ಗಳಾದ. ವಿನೋದ್ ಕುಮಾರ್ ಸಿಂಗ್, ಚೇತನ್, ಆನಂದ್ ಕುಮಾರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *