ಚಾಮರಾಜನಗರ: ಚಾಮರಾಜನಗರ ವಿಧಾನಸಭೆ ಸದಸ್ಯ ರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಜ್ಯೇಷ್ಠ ಪುತ್ರ ಪಿ.ಚಾಮರಾಜು ನಿಧನದ ಗೌರವಾರ್ಥ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ದಾಂಜಲಿ ನಡೆಯಿತು.
ಚಾಮರಾಜು ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಿದ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮಾತನಾಡಿ, ಚಾಮರಾಜು ಅವರು ತಂದೆ ಶಾಸಕ ಪುಟ್ಟರಂಗಶೆಟ್ಟರಂತೆ ಕ್ಷೇತ್ರದ ಜನರ ಜತೆ ಒಡನಾಟವಿಟ್ಟುಕೊಂಡಿದ್ದರು. ಅವರ ನಿಧನ ಅವರ ಕುಟುಂಬಕ್ಕೆ ಭರಿಸಲಾಗದ ದು: ಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡುವಂತಾಗಲಿ ಎಂದರು.
ಇದೇವೇಳೆ ಮೃತರ ಗೌರವಾರ್ಥ ಎರಡುನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ನಗರಸಭೆ ನಾಮನಿರ್ದೇಶನ ಸದಸ್ಯ ಸ್ವಾಮಿ, ,ಶಾಂತಲ, ತಾಪಂ ಮಾಜಿ ಸದಸ್ಯ ರಾಜು, ಜಿಪಂ ಮಾಜಿಸದಸ್ಯೆ ಕಾವೇರಿಶಿವಕುಮಾರ್, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮಪುರೋತ್ತಮ್, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಮುಖಂಡರಾದ ಎ.ಎಚ್.ಎನ್.ನಸ್ರುಲ್ಲಖಾನ್, ಪರ್ವೇಜ್,ಜುಬೇರ್ಎಲ್ಹಕ್,ಮಹಮದ್ ಸಾಧೀಕ್, ರಾಮಸಮುದ್ರ ಶಿವಮೂರ್ತಿ, ಶಿವಕುಮಾರ್,ಸಿ. ಚನ್ನಬಸವಯ್ಯ, ನಾಗರಾಜು,ರವಿಚಂದ್ರಪ್ರಸಾದ್, ಇತರರು ಹಾಜರಿದ್ದರು.