ಚಾಮರಾಜನಗರ : ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕೂಡಗಿ ಗ್ರಾಮಕ್ಕೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಇಂದು ಭೇಟಿ ನೀಡಿ ಶುಕ್ರವಾರ ಹುಲಿ ದಾಳಿಗೆ ಬಲಿಯಾದ ರೈತರಾದ ದೊಡ್ಡನಿಂಗಯ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ದೊಡ್ಡನಿಂಗಯ್ಯ ಅವರ ನಿಧನಕ್ಕೆ ಸಂಸದರಾದ ಸುನಿಲ್ ಬೋಸ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ದೊಡ್ಡನಿಂಗಗಯ್ಯ ಅವರ ಅಕಾಲಿಕ ಮರಣದಿಂದ ಕುಟುಂಬಕ್ಕೆ ಆದ ನೋವು ಅಸಹನೀಯ. ಸರ್ಕಾರ ಮತ್ತು ಇಲಾಖೆಯ ವತಿಯಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನೆರವು ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದ ಜೊತೆ ಇರುತ್ತೇವೆ, ಎಂದು ಸಂಸದ ಸುನೀಲ್ ಬೋಸ್ ಅವರು ಭರವಸೆನೀಡಿದರು.
ಇದೇ ವೇಳೆ ದುರಂತ ಘಟನೆ ಕುರತು ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಂಸದರು ಹುಲಿ ಸೆರೆ ಕಾರ್ಯಾಚರಣೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು.
ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಭಾಗ್ಯಲಕ್ಷ್ಮಿ ಮುಖಂಡರಾದ ಸಿದ್ದರಾಜು, ಶಿವರಾಜು ,ಶುಭಾನ್ ಚೆಲುವರಾಜು ,ಬೆಟ್ಟಸ್ವಾಮಿ ಪ್ರಕಾಶ್, ದೇವದಾಸ್ ಮೂರ್ತಿ ಚಿನ್ನಯ್ಯ, ನಾಗಣ್ಣ ಹೈರಿಗೆ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.