ಮೈಸೂರು: ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ನಲ್ಲಿ (ಜೆಡಬ್ಲ್ಯೂಜಿಸಿ) ಆಯೋಜಿಸಲಾಗಿದ್ದ ಮೈಸೂರು ಗಾಲ್ಫ್ ಲೀಗ್ (ಎಂಜಿಎಲ್) ಗಾಲ್ಫ್ ಪಂದ್ಯಾವಳಿಯಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಕ್ಯಾಪ್ಟನ್ ಶ್ರೀ ಅರ್ಜುನ್ ರಂಗ ಅವರ ನೇತೃತ್ವದ ಮೈಸೂರು ವಾರಿಯರ್ಸ್ ಗಾಲ್ಫ್ ಕ್ಲಬ್ ವಿಜಯಶಾಲಿಯಾಗಿ ಹೊರಹೊಮ್ಮಿದೆ.
ಅಂತಿಮ ಹಂತದಲ್ಲಿ ಮೈಸೂರು ವಾರಿಯರ್ಸ್ ಮತ್ತು ರಾಜ್ ಇನ್ಫ್ರಾ ಗ್ರೀನ್ ಲೆಜೆಂಡ್ಸ್ ಮಧ್ಯೆ ತೀವ್ರ ಹಣಾಹಣಿ ನಡೆದು ಕಡೆಗೆ ಮೈಸೂರು ವಾರಿಯರ್ಸ್ 3-2 ಗೋಲುಗಳಿಂದ ರಾಜ್ ಇನ್ಫ್ರಾ ಗ್ರೀನ್ ಲೆಜೆಂಡ್ಸ್ ವಿರುದ್ಧ ಜಯ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.
ವಿಶಿಷ್ಟ ಗಾಲ್ಫ್ ಸ್ವರೂಪದ ಈ ಗಾಲ್ಫ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್, ಗ್ರ್ಯಾಂಡ್ ಸೆರಿನ್ ರಾಯಲ್ಸ್, ವಾಕ್ ಮೇಟ್ ಏಸಸ್, ಗ್ರಾವಿಟಿ ಒನ್ ವನಜ, ನಕ್ಷಾ ಮಾಸ್ಟರ್ಸ್, ಸ್ಯಾಂಡಲ್ ವುಡ್ ಸ್ಟ್ರೈಕರ್ಸ್, ವಾಕ್ ಮೇಟ್ ಏಸಸ್ ಮತ್ತು ಸಾನ್ವಿಸ್ ಮೈಸೂರು ಟೈಗರ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದವು. ವಿವಿಧ ಸ್ವರೂಪಗಳಲ್ಲಿ ಸ್ಪರ್ಧೆ ನಡೆಸಲಾಗಿದ್ದು, ಜನವರಿ 25ರಂದು ಅಂತಿಮ ಸುತ್ತಿನ ಸ್ಪರ್ಧೆ ನಡೆದು ಮೈಸೂರು ವಾರಿಯರ್ಸ್ ಗಾಲ್ಫ್ ಕ್ಲಬ್ ಕಪ್ ಗೆದ್ದುಕೊಂಡಿದೆ.
ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗ ಅವರು, ?ಈ ಗೆಲುವು ಸಂತೋಷ ತಂದಿದೆ. ಮೈಸೂರು ವಾರಿಯರ್ಸ್ ಗಾಲ್ಫ್ ಕ್ಲಬ್ ಗೆ ಇದು ಬಹಳ ಹೆಮ್ಮೆಯ ಕ್ಷಣವಾಗಿದೆ. ನಮ್ಮ ತಂಡದ ಪರಿಶ್ರಮ ಮತ್ತು ಬದ್ಧತೆಗೆ ಈ ಗೆಲುವು ಪುರಾವೆಯಾಗಿದೆ. ಮೈಸೂರು ಗಾಲ್ಫ್ ಲೀಗ್ ಪಂದ್ಯಾವಳಿಯು ಮೈಸೂರಿನ ಎಲ್ಲಾ ಗಾಲ್ಫ್ ಆಟಗಾರರಿಗೆ ಸಂಭ್ರವನ್ನು ತಂದಿದೆ ಎಂದು ಹೇಳಿದರು.