ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಮತ್ತು ಬ್ಯಾಡ್ಜ್ ವಿತರಣೆ

ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಿಗೆ ಮತ್ತು ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋದನೆ ಕಾರ್ಯಕ್ರಮ ಆಯೋಜನೆ
ಮೈಸೂರು: ನಗರದ ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಿಗೆ ಮತ್ತು ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋದನೆ ಮತ್ತು ಬ್ಯಾಡ್ಜಿನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಡಿ.ಇ. ಎಸ್, ಮೈಸೂರಿನ ಗೌರವಾನ್ವಿತ ಕಾರ್ಯದರ್ಶಿಗಳಾದ ರೆ. ಫಾ. ಎಡ್ವರ್ಡ್ ವಿಲಿಯಂ ಸಲ್ಡಾನ ಅವರು ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಿಗೆ ಮತ್ತು ತರಗತಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋಧಿಸಿ, ಬ್ಯಾಡ್ಜ್‍ನ್ನು ವಿತರಣೆ ಮಾಡಿ ಶುಭ ಹಾರೈಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿರುವ ನಿಮ್ಮ ಜವಾಬ್ದಾರಿ ತುಂಬಾ ದೊಡ್ಡದಿದೆ, ನಮ್ಮ ಜನ ಪ್ರತಿನಿಧಿಗಳ ಜವಾಬ್ದಾರಿಯಷ್ಟೇ, ನಿಮ್ಮ ಜವಾಬ್ದಾರಿ ಕೂಡ ಇಲ್ಲಿ ದೊಡ್ಡದು. ನೀವು ನಿಮ್ಮ ಸಾಮರ್ಥ್ಯದ ಮೇಲೆ ಈ ಚುನಾವಣೆಯಲ್ಲಿ ಆಯ್ಕೆಯಾಗಿದ್ದೀರಿ, ಇಲ್ಲಿಂದ ನೀವು ನಿಮ್ಮ ಜವಾಬ್ದಾರಿಯುತ ನಾಯಕತ್ವದ ಹೊಣೆ ಹೊರಬೇಕಾಗುತ್ತದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿಂದು ಹಣವೇ ಮುಖ್ಯ ಪಾತ್ರ ವಹಿಸುತ್ತಿದೆ, ಇದನ್ನು ಹೂಡಿಕೆ ರಾಜಕಾರಣವೆನ್ನಬಹುದು. ಮತದಾರರಾದ ನಮ್ಮ ಮೇಲೆ ಹಣವನ್ನು ಚುನಾವಣೆಯ ನೆಪದಲ್ಲಿ ಹೂಡಿಕೆ ಮಾಡಿ, ಅದರ ಲಾಭವನ್ನು ನಮ್ಮ ಜನಪ್ರತಿನಿದಿನಗಳೆನಿಸಿಕೊಂಡ ಕೆಲವರು ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನವೆನಿಸುತ್ತದೆ. ನಮ್ಮಲ್ಲಿನ ಎಷ್ಟೋ ಜನಪ್ರತಿನಿಧಿಗಳಿಗೆ ನಾಯಕರಾಗುವ ಅರ್ಹತೆ ಇದಿಯೋ, ಇಲ್ಲವೋ ಆದರೆ ಅವರ ಹಿಂದೆ ಒಂದು ಜಾತಿ, ಧರ್ಮವಿದೆ., ಅದಕ್ಕೆ ಅವರು ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಆದರೆ ನೀವಿಂದು ಇಂತಹ ವ್ಯವಸ್ಥೆಯಿಂದ ಜನರನ್ನ, ಸಮಾಜವನ್ನ ಹೊರತಂದು, ಮುನ್ನಡೆಸುವ ಜವಾಬ್ದಾರಿಯನ್ನು ಇಲ್ಲಿಂದಲೇ ಹೊರಬೇಕಿದೆ. ನಿಮ್ಮ ಮೇಲೆ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ನಂಬಿಕೆಯನ್ನ ಹೂಡಿಕೆ ಆಯ್ಕೆಯ ರೂಪದಲ್ಲಿ ಮಾಡಿದ್ದಾರೆ. ಆಯ್ಕೆಯಾಗಿರುವ ನೀವುಗಳು ಅದನ್ನು ಉಳಿಸಿಕೊಳ್ಳುತ್ತಿರೆನ್ನುವ ನಂಬಿಕೆನಮ್ಮೆಲ್ಲರದ್ದಾಗಿದೆ. ನಿಮ್ಮ ಜವಾಬ್ದಾರಿ, ಉತ್ತಮ ಆಲೋಚನೆ, ನಡವಳಿಕೆ, ನಾಯಕತ್ವದ ಮೂಲಕ ನೀವು ನಿಮ್ಮನ್ನು ಮತದಾನದ ಮೂಲಕ ಆಯ್ಕೆ ಮಾಡಿದವರ ನಂಬಿಕೆ, ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಎಂದು ಕರೆಕೊಟ್ಟರು.

ವೇದಿಕೆಯ ಮೇಲಿನ ಅತಿಥಿ ಗಣ್ಯರು ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಿಗೆ ಬ್ಯಾಡ್ಜನ್ನು ವಿತರಣೆ ಮಾಡಿದರು. ನಂತರ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿದ್ದ ರೆ.ಫಾ.ನವೀನ್ ಕುಮಾರ್, ಗೌರವಾನ್ವಿತ ಖಜಾಂಚಿಯವರು, ಎಂ.ಡಿ. ಇ. ಎಸ್, ಮೈಸೂರು ಇವರು ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋದನೆ ಮಾಡಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪೃಥ್ವಿ ಎಸ್ ಶಿರಹಟ್ಟಿ, ಎಂ.ಡಿ. ಇ. ಎಸ್‍ನ ಗೌರವಾನ್ವಿತ ಖಜಾಂಚಿಯವರಾದ ರೆ.ಫಾ.ನವೀನ್ ಕುಮಾರ್, ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಾದ ಹಾಜೀರಾ, ಸಾಂಸ್ಕೃತಿಕ ಕಾರ್ಯದರ್ಶಿ, ಮಸೀರಾ, ಉಪಾಧ್ಯಕ್ಷರು, ಫಿರ್ದೋಸ್ ಬಾನು, ಅಧ್ಯಕ್ಷರು, ಉಮ್ಮಿ ಐಮಾನ್, ಕಾರ್ಯದರ್ಶಿ, ಸಮೀರಾ, ಕ್ರೀಡಾ ಕಾರ್ಯದರ್ಶಿ .ವಿದ್ಯಾರ್ಥಿ ಪ್ರತಿನಿಧಿಗಳಾದ ರುಖಾಯ ಮತ್ತು ಜಾಮಾ, ಸಾದಿಯ ಮತ್ತು ಸಿಂಚನ, ಐನಾ ಮತ್ತು ರುಖಾಯ, ತಸ್ಮಿಯ ಮತ್ತು ಆಯಿಷಾ, ನೂರ್ ಹುಡಾ ಮತ್ತು ಅದ್ವಿಯ, ಸಾರಿಯ, ಫಲ್ಕಿಯಾ ಮತ್ತು ಆಮೀನ, ಜಾವೇರಿಯ ಮತ್ತು ಮಿಸ್ಬಾ, ಆಯಿಷಾ ಮತ್ತು ಫರ್ಸೀನ್, ಐನ್ ¥sóÁತಿಮ ಇತರರಿದ್ದರು.

Leave a Reply

Your email address will not be published. Required fields are marked *