ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದ ಕೊನೆಯ ದಿನವಾದ ಇಂದು ಅಷ್ಟಮಿ/ನವಮಿ ಪ್ರಾತಃಕಾಲ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ ಆನಂತರ ಸ್ಥಂಭ ಪೂಜಾ ರಾತ್ರಿ ಪುಷ್ಪಾಂದೋಳಿಕೋತ್ಸವ, ಶಯನೋತ್ಸವವೂ ನಡೆಯಿತು.
ವಿಶೇಷವಾಗಿ ಪುಷ್ಪಗಳಿಂದ ಉತ್ಸವ ಮೂರ್ತಿಯನ್ನು ಅಲಂಕರಿಸಿ, ವಿಶೇಷ ರೀತಿಯ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು. ಎಂಎಸ್ಐಎಲ್ನ ಅಧ್ಯಕ್ಷರು ಹಾಗೂ ಶಾಸಕರಾದ ಪುಟ್ಟರಂಗಶೆಟ್ಟಿ ರವರು ಪಲ್ಲಕ್ಕಿ ಉತ್ಸವಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಚಾಮರಾಜೇಶ್ವರ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ನಡೆಯಿತು, ನಂತರ ಪ್ರಸಾದ ವಿನಿಯೋಗ ನಡೆಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಜ್ಗರ್ (ಮುನ್ನ), ಜಿ. ಪಂ. ಸಿಇಒ ಮೊನಾ ರೋತ್, ತಹಸೀಲ್ದಾರ್ ಗಿರಿಜಾ, ಪೇಷ್ಗಾರರು ಮಹೇಶ್, ಆಗಮಿಕರಾದ ದರ್ಶನ್, ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರಾದ ನಾಗರಾಜ ದೀಕ್ಷಿತ್, ಕೆಂಪನ ಜಾಂಬ ದೇವಿಯ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ಅರ್ಚಕರಾದ ಅನಿಲ್ ಕುಮಾರ್ ದೀಕ್ಷಿತ್, ಅಣ್ಣಾಜಿ, ಚಿಕ್ಕಣ್ಣ, ಉತ್ಸವ ಸಮಿತಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.