ಮೈಸೂರು: ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆಗಳಾದ ಶಾಶ್ವತ ಸೇವಾ ಶಾಲೆ ಹಾಗೂ ಟೆರೇಷಿಯನ್ ಪದವಿ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮೈಸೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಶ್ರೀ ದಿನೇಶ್ ಬಿ.ಜಿ ಅವರು ಭಾಗವಹಿಸಿದ್ದರು.
ಗೌರವ ಅತಿಥಿಯಾಗಿ ಮೈಸೂರಿನ ಮಧ್ಯವರ್ತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಕೀಲರಾಗಿರುವ ಶ್ರೀಮತಿ ಹೇಮಲತಾ ಅವರು ಭಾಗವಹಿಸಿ ಮಾತಾನಾಡಿದರು.
ಇರುವುದೊಂದೇ ಭೂಮಿ ಅದನ್ನು ಕಾಪಾಡಿ ಸ್ವಾಮಿ, ಹಸಿರೇ ನಾಡಿನ ಉಸಿರು, ಮನೆಗೊಂದು ಮರ-ಊರಿಗೊಂದು ವನ ಎನ್ನುವಂತಹ ಮಹತ್ವದ ಹೇಳಿಕೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥವತ್ತಾಗಿ ಆಚರಿಸಲಾಯಿತು.

ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪರಿಸರ ಎಂದು ಕರೆಯುತ್ತೇವೆ. ಇಂತಹ ಪರಿಸರವು ಮಾನವನ ಹಲವು ವಿರೂಪ ಕಾರ್ಯಗಳಿಂದ ಮಾಲಿನ್ಯಕ್ಕೆ ತುತ್ತಾಗಿ ಪರಿಸರವು ಸಾಕಷ್ಟು ಸವಕಳಿಯಾಗುತ್ತಿದೆ.
ಅರಣ್ಯ ನಾಶ, ಕೈಗಾರಿಕೀಕರಣ, ನಗರೀಕರಣ, ಪ್ರಾಣಿ-ಪಕ್ಷಿಗಳ ಸಂತತಿ ಅಳಿವಿನಂಚಿರುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು ಹಾಗೂ ಸಿವಿಲ್ ನ್ಯಾಯಾಧೀಶರಾದ ಶ್ರೀ ದಿನೇಶ್ ಬಿ.ಜಿ. ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಸಹ ಮಾಡಿದರು.
ವಿದ್ಯಾರ್ಥಿಗಳು ಕೇಳಿದ ಎಲ್ಲಾ ಬಗೆಯ ಪ್ರಶ್ನೆಗಳಿಗೆ ಶಾಂತಿ ಹಾಗೂ ಸಹನೆಯಿಂದಲೇ ಅತ್ಯಂತ ಬೆಲೆ ಬಾಳುವ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಶ್ವತ ಸೇವಾ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಚೌಧರಿ, ಶಾಶ್ವತ ಸೇವಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪವಿತ್ರಾ ಹೆಚ್.ಪಿ. ಅವರು, ಟೆರೇಸಿಯನ್ ಕಾಲೇಜಿನ ನಿರ್ದೇಶಕರಾದ ಡಾ.ಎಸ್.ಆರ್. ಜುವಾನಿಟಾ ಅವರು, ಟೆರೇಸಿಯನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಂತಿ ಅವರು, ಟೆರೇಸಿಯನ್ ಪದವಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ರೇಖಾ ಅವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದರು. ಅಂತೆಯೇ ಗಿಡಕ್ಕೆ ನೀರೆರೆಯುವ ಹಾಗೂ ಸಾವಕಾಶವಾದ ಜಾಗದಲ್ಲಿ, ಕೆರೆಯ ಸುತ್ತ ನೂರಾರು ಗಿಡಗಳನ್ನು ನೆಟ್ಟು ಅವುಗಳ ಸುತ್ತ ರಕ್ಷಣೆಗಾಗಿ ಬೇಲಿ ಹಾಕುವುದರ ಮೂಲಕ ಗಿಡಗಳ ಪ್ರಾಣಜ್ಯೋತಿಯನ್ನು ಪ್ರತಿಷ್ಠಾನ ಮಾಡಲಾಯಿತು.