
ತೆರದ ಮನೆ ಕಾನೂನು ಅರಿವು ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಮಾಹಿತಿ ನೀಡಿದ ಪಿಎಸ್ಐ ನವೀನ್
ಚಾಮರಾಜನಗರ: ನಗರದ ಸಮೀಪದ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆ ಗೆ ತಾಲೂಕಿನ ಅಂಕನಶೆಟ್ಟಪುರ ಪ್ರೇರಣಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಭೇಟಿ ನೀಡಿ, ಅಲ್ಲಿನ ಕಾರ್ಯ ವೈಖರಿ, ಜೈಲು ಮತ್ತು ಅವರ ಕಾರ್ಯನಿರ್ವಹಣೆ ಕುರಿತು ತಿಳಿದುಕೊಂಡರು.
ತೆರೆದ ಮನೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಶಾಲೆಯಿಂದ ಮುಖ್ಯ ಶಿಕ್ಷಕÀ ಮಹೇಶ್ಕುಮಾರ್ ಹಾಗೂ ಸಹ ಶಿಕ್ಷಕರ ವೃಂದವರು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದು ಅಲ್ಲಿನ ಕಾನೂನು ಪಾಲನೆ ವ್ಯವಸ್ಥೆ ಮತ್ತು ಕಾರ್ಯ ವೈಖರಿ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ತಂಡ ತಂಡವಾಗಿ ಶಿಕ್ಷಕರ ಸೂಚನೆಯಂತೆ ಠಾಣೆಗೆ ತೆರಳಿ, ಅಲ್ಲಿನ ಬಂದಿ ಖಾನೆ, ಕಂಪ್ಯೂಟರ್ ವಿಭಾಗ, ದೂರು ಸ್ವೀಕಾರ ಕೊಠಡಿ, ವಾಕಿಟಾಕಿ ಅಪರಾಧ ಪ್ರಕರಣಗಳ ಸಂಬಂಧ ಕಡತಗಳ ಸಂರಕ್ಷಣೆ ಮತ್ತು ಅರೋಪಿಗಳ ಮಾಹಿತಿ ಮತ್ತು ನ್ಯಾಯಾಲಯಕ್ಕೆ ನೀಡುವ ಪೂರಕ ದಾಖಲೆಗಳ ಸಂಗ್ರಹ ಮತ್ತು ಸಿಬ್ಬಂದಿಗಳ ಶಿಸ್ತು ಬದ್ದ ಕಾರ್ಯನಿರ್ವಹಣೆ ಬಗ್ಗೆ ಸ್ವತಃ ವಿದ್ಯಾರ್ಥಿಗಳು ನೋಡಿ ಪ್ರೇರಣೆಗೊಂಡರು.
ರಾಮಸಮುದ್ರ ಪೂರ್ವ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಅವರು ವಿದ್ಯಾರ್ಥಿಗಳನ್ನು ಠಾಣೆಗೆ ಸ್ವಾಗತಿದರು. ಮಕ್ಕಳಲ್ಲಿದ್ದ ಕೆಲವು ಅನುಮಾನದ ಪ್ರಶ್ನೆಗಳಿಗೆ ಉತ್ತರಿಸಿ, ಜನ ಸ್ನೇಹಿ ಪೊಲೀಸ್ ಸೇವೆಗಳ ಬಗ್ಗೆ ವಿವರಣೆ ನೀಡಿದರು. ನೀವು ಸಹ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಬರಬೇಕೆಂಬ ಸಂಕಲ್ಪ ಮಾಡಬೇಕು. ಕಾನೂನು ಪಾಲನೆ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಠಾಣೆಗಳು ಶಾಂತಿ, ಸೌಹರ್ದತೆ, ಸಹಬಾಳ್ವೆ ಮತ್ತು ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತದೆ. ಡಾ. ಬಿ.ಆರ್. ಅಂಭೇಡ್ಕರ್ ಅವರು ಬರೆದಿರುವ ಸಂವಿಧಾನದ ಚೌಕಟ್ಟಿನಲ್ಲಿ ನಾವೆಲ್ಲರು ಕಾರ್ಯನಿರ್ವಹಿಸುತ್ತಿದ್ದೇವೆ ಸಂವಿಧಾನ ದತ್ತವಾಗಿರುವ ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಮಕ್ಕಳಲ್ಲಿ ಪೋಲಿಸ್ ಠಾಣೆ ಎಂದರೆ ಕೆಲವು ತಪ್ಪು ಗ್ರಹಿಕೆಗಳಿರುತ್ತದೆ. ಕೇವಲ ಕಳ್ಳರು, ಕೊಲೆಗಾರರನ್ನು ಕೂಡಿ ಹಾಕುವ ಸ್ಥಳ ಎಂಬಂತೆ ಕಲ್ಪನೆಗಳಿರುತ್ತದೆ. ಪೋಷಕರು ಸಹ ಪೋಲೀಸ್À ಠಾಣೆಗಳ ಬಗ್ಗೆ ಹೇಳಿರುವುದಿಲ್ಲ. ಪೊಲೀಸರು ಜನ ಸ್ನೇಹಿಯಾಗಿದ್ದು, ಕಾನೂನು ಪಾಲನೆ ಮಾಡುವ ಜೊತೆಗೆ ಸಾರ್ವಜನಿಕರ ಅಸ್ತಿ ಪಾಸ್ತಿ ರಕ್ಷಣೆ ಮಾಡಲು ಪ್ರಮುಖ ಪಾತ್ರ ವಹಿಸುತ್ತಾರೆ. ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಉದ್ಯೊಗ ಪಡೆದುಕೊಳ್ಳಲು ಸಹ ಪೊಲೀಸ್ ಠಾಣೆಗಳಿಂದ ದೃಢೀಕರಣ ಪತ್ರ ಅವಶ್ಯಕತೆ ಇದೆ, ಬಡವರು, ಶ್ರೀಮಂತರು ಎಲ್ಲರಿಗೂ ಒಂದೇ ನ್ಯಾಯ, ಒಂದೇ ಕಾನೂನು ಎಂದು ನವೀನ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾನೂನು ವಿಬಾಗ ಇನ್ಸ್ಪೆಕ್ಟರ್ ಆರ್.ವೆಂಕಟೇಶ್, ಅಪರಾಧ ವಿಭಾಗದ ಪ್ರಕಾಶ್ ಪೊಲೀಸ್ ಸಿಬ್ಬಂದಿಗಳು ಇದ್ದರು.