


ಚಾಮರಾಜನಗರ: ರಾಜರತ್ನ ಅಪ್ಪು ಯುವ ಸೇನಾ ಸಮಿತಿ ವತಿಯಿಂದ ನಗರದ ಮಾಡಿಗುಡಿ ಹತ್ತಿರವಿರುವ ಕಾಮದೇನು ಮಿಲ್ಕ್ ಪಾರ್ಲರ್ನ ಬಳಿ ದಿವಂಗತ ಡಾ.ಪುನೀತ್ರಾಜ್ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಮಂಜು, ಮಣಿ, ಮಂಜುಮಿಲನಾ, ವಿಷ್ಣು, ರಮೇಶ್, ಕಾರ್ತಿಕ್, ಚಂದ್ರು, ಮದನ, ಮೋಹನ್, ಪ್ರದೀಪ್, ಮಹೇಶ್, ವಿನೋದ್, ರಾಜೇಂದ್ರ ಮತ್ತಿತರರಿದ್ದರು.