ಮೈಸೂರು: ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.
ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ 1994-95 ಇಸವಿಯಲ್ಲಿ ವ್ಯಾಸಂಗ ಮಾಡಿದ್ದು. ಅಂದು ನಾನು ಬೇರೆ ಶಾಲೆಗೆ ಸೇರಬೇಕಿತ್ತು ಈ ಶಾಲೆಯಲ್ಲಿ ಕಡಿಮೆ ಶುಲ್ಕ ಇದೆ ಎಂದು ಇಲ್ಲಿಗೆ ನಮ್ಮ ಪೋಷಕರು ಸೇರಿಸಿದರು. ಈಗ ನಾನು ಒಂದು ಸಂಸ್ಥೆಯ ಲಾಭದಾಯಕವಾಗಿ ಮುನ್ನುಗುತ್ತಿದೆ. ಅದ್ದರಿಂದ ಎಲ್ಲಾರು ಓದಿನ ಕಡೆ ಗಮನ ನೀಡಿ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗು ಮುನಿಗೋಪಾಲ್ ರಾಜ್,ಬಸವರಾಜು,ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷರು ವಿಕ್ರಂ ಅಯ್ಯಂಗರ್, ಮತ್ತು ಸುವರ್ಣ ಬೆಳಕು ಫೌಂಢೇಷನ್ ಅಧ್ಯಕ್ಷರು ಮಹೇಶ್ ನಾಯಕ್, ಶಾರ್ವಿ ಕನ್ಸ್ಟ್ರಕ್ಷನ್ ಶರತ್, ಸಮಾಜ ಸೇವಕರಾದ ಪ್ರವೀಣ್ ರಾವಂದೂರು, ಸ್ನೇಹ ಬಳಗದ ಗೌರವ ಅಧ್ಯಕ್ಷರು ಮಧು, ರವಿ ಅಧ್ಯಕ್ಷರು ಚಾಮುಂಡೇಶ್ವರಿ ಮಾಲೀಕರು ಹಾಗೂ ಚಾಲಕ ಸಂಘ ಮೈಸೂರು ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿಗಳು ಭಾಗವಹಿಸಿದ್ದರು.