ಸತ್ಯ ಎಜುಕೇರ್ ಕಾಂಫಿಡೆನ್ಸಿ ಸಂಸ್ಥೆ ಕಚೇರಿ ಉದ್ಘಾಟನೆ

ಚಾಮರಾಜನಗರ: ಸತ್ಯ ಎಜುಕೇರ್ ಕಾಂಫಿಡೆನಿ ಸಂಸ್ಥೆ ಒಂದು ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿದ್ದು, ಹತ್ತು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಜಿ.ಪಂ. ಸಿಇಓ ಮೋನಾ ರೋತ್ ತಿಳಿಸಿದರು.

ಚಾಮರಾಜನಗರದಲ್ಲಿ ಸಂಸ್ಥೆಯ ನೂತನ ಕಚೇರಿಯನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಮೋನಾ ರೋತ್ ರವರು ಉದ್ಘಾಟಿಸಿ ಮಾತನಾಡಿದರು.

ಚಾಮರಾಜನಗರದಲ್ಲಿ ಸಂತ ಸಮಯ ವೃದ್ಧಾಪ್ಯ ಎಂಬ ಧೇಯೋದ್ದೇಶದೊಂದಿಗೆ ಸಮಾಜದಲ್ಲಿ ಹಿರಿಯ ನಾಗರಿಕ ಸೇವಾ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಚಿದಂಬರ ಹಾಗೂ ಮನೋನಿಧಿ ನರ್ಸಿಂಗ್ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಸಿಬಿಲ್ ವರ್ಗಿಸ್, ಸತ್ಯ ಎಜುಕೇರ್ ಮುಖ್ಯಸ್ಥರಾದ ಪಿಂಟೋ, ಹಣಕಾಸು ಆಡಳಿತ ಮತ್ತು ನಿರ್ವಹಣಾ ಅಧಿಕಾರಿಗಳಾದ ಮುತ್ತುರಾಜ್ ಪ್ರಾಜೆಕ್ಟ್ ಡೈರೆಕ್ಟರ್, ಡಾ. ಬಸುಲಿ ಚಕ್ರವರ್ತಿ ಹಾಗೂ ಸತ್ಯ ಎಜುಕೇರ್ ಕಾಂಫಿಡೆನ್ಸಿ ಸಂಸ್ಥೆಯ ಸಿಬ್ಬಂದಿ ವರ್ಗ, ಜಿಲ್ಲಾ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *