ತೊಟ್ಟು ಕಳಚಿದ ಕಾಯಿ
ಹಣ್ಣಾಗಲುಬಹುದು; ಬಲಿತಿದ್ದರೆ
ತೊಟ್ಟ ಹಂಭಾರವ ತೊಟ್ಟು
ತಡೆಯಲುಬಹುದು;ಬಲವಿದ್ದರೆ
ಕಾಯಿಯ ಹಂ-ಭಾರಕೆ ಹೆಗಲಾಗುವ ಸ್ನೇಹ
ತಾಯಿಯ ಸಂಪರ್ಕಕ್ಕೆ ಬಂಧವಾಗುತದೆ
ಕಾಯಿಯ ಭಾರಕೆ ತೊಟ್ಟು ಕಳಚದಂತೆ.
ಕಾಯಿಯ ಸುತ್ತಿ ಜಗ್ಗುವ ನೇಹ
ತಾಯಿಯ ಬಂಧಕೆ ಭಂಗವಾಗುತ್ತದೆ
ಕಾಯಿಯ ಸುತ್ತಿದ ಬಳ್ಳಿ ಜಗ್ಗಿ ತೊಟ್ಟು ಕಳಚುವಂತೆ..
ಬಲಿಯದ ಕಾಯಿ ಬತ್ತಲಾಗುತ್ತದೆ
ಬದುಕು ಬೆತ್ತಲಾಗುತ್ತದೆ.
ಕಟ್ಟೆಯೊಡೆದ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ
ಕೆರೆಯೂ ಉಳಿಯುವುದಿಲ್ಲ..
ಕಟ್ಟೆಯೊಡೆದು ಹರಿದ ನೀರಿಂದ ಹಾನಿಯಲ್ಲದೆ ಫಲವಿಲ್ಲ,
ಬದುಕು ಮೂರಾಬಟ್ಟೆ..
ಬದ್ರವಿರದ ಬದುಕಿಗಾಧಾರವಿಲ್ಲದಿರೆ
ಕಳಚಿದ ಬಂಧದ; ಬಲಿಯದ ಜೀವದ
ಬದುಕು ಬೀದಿಗರುವಾಗುತ್ತದೆ..
ಪಡೆದವರಿಗೆ ಬಾಯಿ -ಬದುಕು; ಸವಿ-ಹಸನು
ಹಡೆದವರ ಪ್ರೀತಿಯ ಸವಿ ಸವಿದ ಫಸಲು

ಹೇಮಚಂದ್ರ ದಾಳಗೌಡನಹಳ್ಳಿ