ಪ್ರಚಲಿತ ವಿದ್ಯಮಾನಕ್ಕೆ ಬರುತ್ತಿರುವ ಸ್ಕೇಟಿಂಗ್ ಕ್ರೀಡೆ

ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಗೌರವಾಧ್ಯಕ್ಷರಾದ ನರ್ಗೀಸ್‍ಬಾನು ಮಾಹಿತಿ
ಚಾಮರಾಜನಗರ: ಜಿಲ್ಲೆಯಲ್ಲಿ ಸ್ಕೇಟಿಂಗ್ ಕ್ರೀಡೆಯು ಬಹಳ ವೇಗವಾಗಿ ಪ್ರಚಲಿತ ವಿದ್ಯಮಾನಕ್ಕೆ ಬರುತ್ತಿರುವುದು ಶ್ಲಾಘನೀಯ ಎಂದು ಚಾಮರಾಜನಗರ ಜಿಲ್ಲಾ ನೆಟ್‍ಬಾಲ್ ಗೌರವಾಧ್ಯಕ್ಷರಾದ ನರ್ಗೀಸ್‍ಬಾನು ತಿಳಿಸಿದರು.

ನಗರದ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಾಲೆಂಜರ್ಸ್ ಸ್ಕೇಟ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಸ್ಕೇಟಿಂಗ್‍ನಲ್ಲಿ ಭಾಗವಹಿಸಿದ್ದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಮೆಡಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಟ್ಟ ಮಕ್ಕಳು ಈ ವಯಸ್ಸಿನಲ್ಲಿ ಸ್ಕೇಟಿಂಗ್ ಕಲಿಯಲು ಕಷ್ಟಸಾಧ್ಯ. ಆದರೂ ಈ ಮಕ್ಕಳ ಚತುರತೆ, ನಿಯಂತ್ರಣತೆ ಹಾಗೂ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವ ಮೂಲಕ ಈ ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಈ ಕ್ರೀಡಾ ಮಕ್ಕಳ ಸಾಧನೆಯೂ ಕೂಡಾ ಸ್ಕೇಟಿಂಗ್ ಕ್ರೀಡೆ ಬೆಳವಣಿಗೆಗೆ ಪೂರಕವಾಗಿದ್ದು, ಸ್ಕೇಟಿಂಗ್ ಕ್ರೀಡೆ ಸೇರಿದಂತೆ ವಿವಿಧ ಕ್ರೀಡೆಗಳಾದ ಖೋ ಖೋ, ಕರಾಟೆ, ವಾಲಿಬಾಲ್, ಕಬ್ಬಡ್ಡಿ, ಥ್ರೋ ಬಾಲ್, ಇವು ಕೂಡಾ ಪ್ರಚಲಿತ ವಿದ್ಯಾಮಾನಕ್ಕೆ ಬರುತ್ತಿದ್ದು, ಮಕ್ಕಳು ಕ್ರೀಡೆಗೆ ಹೆಚ್ಚಿನ ಒತ್ತನ್ನು ಕೊಡುವುದರ ಜೊತೆಗೆ ಶಿಕ್ಷಣಕ್ಕೂ ಅಷ್ಟೇ ಒತ್ತನ್ನು ನೀಡುವ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಈ ಪ್ರತಿಭಾನ್ವಿತ ಮಕ್ಕಳಿಗಾಗಿ ಸ್ಕೇಟಿಂಗ್ ಕ್ರೀಡೆ ಆಟ ವಾಡಲು ಅಂಕಣದ ಕೊರತೆ ಇದ್ದು, ಸ್ಕೇಟಿಂಗ್ ಅಂಕಣವನ್ನು ಕಲ್ಪಿಸಿಕೊಡುವ ಮೂಲಕ ಈ ಕ್ರೀಡೆಗೆ ಪ್ರೋತ್ಸಾಹವನ್ನು ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಜಿಲ್ಲಾ ನೆಟ್‍ಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಜಿಲ್ಲೆಯ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಉದ್ಯೋವನ್ನು ಕಲ್ಪಿಸಿಕೊಡುವ ಮೂಲಕ ಅವರ ಕ್ರೀಡಾ ಭವಿಷ್ಯಕ್ಕೆ ಉತ್ತೇಜನ ನೀಡಿ. ಜೊತೆಗೆ ಕುಂಠಿತವಾಗಿರುವ ಚಾಮರಾಜನಗರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸ್ಕೇಟಿಂಗ್ ತರಬೇತುದಾರ ಫುರ್ಖಾನ್ ಪಾಷಾ, ಶಿವಶಂಕರ್, ಅಭಿಷೇಕ್, ಇರ್ಷಾದ್ ಪಾಷಾ, ಶ್ರೀನಿವಾಸ್ ಮತ್ತು ಕ್ರೀಡಾಭಿಮಾನಿಗಳು ಹಾಗೂ ಮಕ್ಕಳ ಪೋಷಕರು ಇದ್ದರು.

Leave a Reply

Your email address will not be published. Required fields are marked *