ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದಿಂದ ಆಯೋಜನೆ

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರವು ದಿನಾಂಕ:23.04.2025 ರಂದು ಹುಣಸೂರು ತಾಲ್ಲೂಕಿನ ಕೋಟ್ಟಿಗೆ ಕವಲ್ನಲ್ಲಿ ಬುಡಕಟ್ಟು ಸಮುದಾಯದ ಸಾರ್ವಜನಿಕರಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಲು ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದರಾಜು ವಿ.ಜಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾಗಿರುವ ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ಸಂಬಂಧಿತ ವಿವಿಧ ಯೋಜನೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಅವರು ಹೆಸರಿಸಿದಂತೆ, ಈ ಯೋಜನೆಗಳ ಸದುಪಯೋಗ ಪಡೆಯಲು ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲಾಯಿತು.
ಡಾ. ಸಿದ್ದರಾಜು, ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಯ ಕುರಿತು ಆತಂಕ ವ್ಯಕ್ತಪಡಿಸಿ, ಹೆಚ್ಚಿನ ಆದಿವಾಸಿ ಮಕ್ಕಳು 5ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿ ಶಾಲೆ ತೊರೆದು ಬಿಡುತ್ತಿರುವುದನ್ನು ಉಲ್ಲೇಖಿಸಿ, ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗೆ ಹಾಜರಾಗಲು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಪ್ರತಿಯಾಗಿ ಆದಿವಾಸಿ ಪಾಲಕರು ಶಾಲೆಗಳಲ್ಲಿನ ವ್ಯವಹಾರಾತ್ಮಕ ಅಸಮಾನತೆ, ಮಕ್ಕಳ ಅಧೈರ್ಯ ಮತ್ತು ದಾಖಲೆ ಸಮಸ್ಯೆಗಳ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಅಲ್ಲದೆ, ಕೋಟ್ಟಿಗೆಕವಲ್ನಲ್ಲಿ ಶೇ.40ರಷ್ಟು ಜನರಿಗೆ ಇನ್ನೂ ಅಧಾರ್ ಕಾರ್ಡ್ ಇಲ್ಲ ಎಂಬ ವಿಚಾರ ಚರ್ಚೆಯ ವೇಳೆ ಬೆಳಕಿಗೆ ಬಂತು.
ಕಾರ್ಯಕ್ರಮದಲ್ಲಿ ಡಾ. ನಂಜುಂಡ ಅವರು ಆಶ್ರಮ ಶಾಲೆಗಳ ಮಹತ್ವವನ್ನು ವಿವರಿಸಿ, ಇವು ಅಧಿವಾಸಿ ಮಕ್ಕಳಿಗೆ ಶಿಕ್ಷಣದ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ ಎಂದು ಹೇಳಿದರು.
ಈ ವೇಳೆ ಡೀಡ್ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀಕಾಂತ್ ಅವರು, ಅಧಿವಾಸಿ ಸಮುದಾಯದ ಹಕ್ಕುಗಳನ್ನು ಸರ್ಕಾರದ ಮಟ್ಟದಲ್ಲಿ ಎತ್ತಿ ಹಿಡಿಯುವುದು ಮತ್ತು ಮಾಹಿತಿ ಹಂಚಿಕೊಳ್ಳುವುದು ಹೇಗೆ ಅಗತ್ಯವಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದರು. ಸರ್ಕಾರದ ಯೋಜನೆಗಳ ಫಲವನ್ನು ಪಡೆಯಲು ಬುಡಕಟ್ಟು ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಕರ್ಯಕ್ರಮಗಳ ಆಯೋನೆ ಮಾಡುವುದು ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಂವಾದ ಕಾರ್ಯಕ್ರಮದಲ್ಲಿ, ಕೋಟ್ಟಿಗೆಕವಲ್ ಹಾಗೂ ಸುತ್ತಮುತ್ತಲಿನ ಬುಡಕಟ್ಟು ಜನರು ಭಾಗವಹಿಸಿ, ತಮಗೆ ಸರಕಾರದ ಯೋಜನೆಗಳು ತಲುಪದಿರುವುದರ ಪರಿಣಾಮಗಳು ಹಾಗೂ ನಿತ್ಯಜೀವನದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ಸಂವಾದ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕರಾದ ಡಾ. ಸಿದ್ದರಾಜು ವಿ.ಜಿ, ಡಾ. ನಂಜುಂಡ, ಡಾ. ಶ್ರೀಕಾಂತ್, ಬುಡಕಟ್ಟು ಜನರ ಪ್ರತಿನಿಧಿಗಳಾದ ಮಾಸ್ತಮ್ಮ, ಗೌರಮ್ಮ, ವಿಠಲ್, ನಾಗರಾಜು, ಕಲ್ಲೂರಯ್ಯ, ಶಿವಣ್ಣ, ಮುನಿರಾಮಯ್ಯ, ಸುಬ್ಬಮ್ಮ, ಜಯಪ್ಪ ಮತ್ತು ಕೇಂದ್ರದ ಸಂಶೋಧಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.