ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಾರಿಯಲ್ಲಿಒಂದು ಮಹತ್ವದ ಹೆಜ್ಜೆಎಂಬಂತೆ 2025-26ನೇ ಸಾಲಿನ ರೂ.4,09,ಲಕ್ಷಕೋಟಿಗಾತ್ರದಕರ್ನಾಟಕರಾಜ್ಯ ಬಜೆಟ್ ರೂಪಿಸಲಾಗಿದೆ. ಈ ಬಜೆಟ್ಆರ್ಥಿಕ ಮತ್ತು ಸಾಮಾಜಿಕ ವಿಕಾಸಕ್ಕೆ ಒತ್ತು ನೀಡಿದರೂ, ಅದನ್ನುಆದಾಯ-ವೆಚ್ಚ ಸಮತೋಲನ, ಹೂಡಿಕೆ ಸೃಷ್ಟಿ ಮತ್ತು ಬಂಡವಾಳ ವೆಚ್ಚದದೃಷ್ಟಿಯಿಂದ ವಿಶ್ಲೇಷಿಸುವ ಅಗತ್ಯವಿದೆ.
ರಾಜ್ಯದಆರ್ಥಿಕ ಬೆಳವಣಿಗೆ ಶೇಕಡಾ7.4 ದರವನ್ನುತಲುಪಿದ್ದು, ದೇಶದಒಟ್ಟಾರೆ ಬೆಳವಣಿಗೆ ದರ ಶೇಕಡಾ 6.4 ಕ್ಕಿಂತಉನ್ನತ ಮಟ್ಟದಲ್ಲಿದೆ. ಇದರಲ್ಲಿ ಸೇವಾ ವಲಯ ಪ್ರಮುಖ ಪಾತ್ರವಹಿಸಿದ್ದು, ಶೇಕಡಾ 8.9 ಬೆಳವಣಿಗೆ ಸಾಧಿಸಿತು.ಕೃಷಿ ವಲಯದಲ್ಲಿಒಟ್ಟಾರೆ ಬೆಳವಣಿಗೆ ಶೇಕಡಾ 4 ಇದ್ದರೂ, ಮಳೆ ಕೊರತೆ ಮತ್ತು ಹವಾಮಾನ ಬದಲಾವಣೆಯಿಂದ ಕೆಲವು ಪ್ರದೇಶಗಳು ಹಿನ್ನಡೆ ಅನುಭವಿಸಿವೆ.
ರಾಜ್ಯ ಸರ್ಕಾರವು ಸಮಾಜಮುಖಿ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಶೇಕಡಾ 42,018 ಕೋಟಿಅನುದಾನವನ್ನು ಮೀಸಲಿಟ್ಟಿದೆ. ಹಸಿರು ಆರ್ಥಿಕತೆ ಮತ್ತುಉದ್ಯೋಗ ಸೃಷ್ಟಿಯಕಡೆಗೂ ಗಮನ ಹರಿಸಲಾಗಿದ್ದು, ಎಲೆಕ್ಟ್ರಿಕ್ ಬಸ್ಗಳ ಸೇವೆ, ಹಸಿರು ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ಕೃಷಿ ಮತ್ತುಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹೆಚ್ಚಿನಒತ್ತು ನೀಡಿದ್ದು, ಕೃಷಿ ಯಾಂತ್ರೀಕರಣಕಾರ್ಯಕ್ರಮದಡಿಯಲ್ಲಿ 50 ಸಾವಿರರೈತರಿಗೆ ಸಹಾಯದನಒದಗಿಸಲುರೂ.428 ಕೋಟಿಅನುದಾನಮೀಸಲಿಡಲಾಗಿದೆ.ಆಗೇಯೆ 2 ಲಕ್ಷರೈತರಿಗೆಉಚಿತಸೌರಪಂಪ್, 50 ಸಾವಿರರೈತರಿಗೆತರಬೇತಿ, ಪಶುಪಾಲನೆಗೆರೂ.100 ಕೋಟಿಮೀಸಲಾಗಿದ್ದು, ಕೃಷಿಉದ್ಯೋಗದಸ್ಥಿರತೆಯತ್ತ ಗಮನಹರಿಸಲಾಗಿದೆ.ಉದ್ಯೋಗದ ಸಾಧ್ಯತೆ ಹೆಚ್ಚಿಸಲುರೂ.13,692ಕೋಟಿಹೂಡಿಕೆಪೆÇ್ರೀತ್ಸಾಹನೀಡಲಾಗಿದೆ, ಆದರೆಹೊಸ ಕೈಗಾರಿಕೆಗಳಆರಂಭಕ್ಕೆಬೇಕಾದಮೂಲಭೂತಸೌಲಭ್ಯಗಳನ್ನುಸುಧಾರಿಸಲುಹೆಚ್ಚಿನ ಗಮನನೀಡಬೇಕಾಗಿದೆ.
ರಸ್ತೆ ಮತ್ತು ಮೂಲಸೌಕರ್ಯಕ್ಕೆರೂ.8,000ಕೋಟಿ ನೀಡಲಾಗಿದ್ದು.ಮೆಟ್ರೋಯೋಜನೆ, ರೂ.5,200ಕೋಟಿ ನಗರರಸ್ತೆಅಭಿವೃದ್ಧಿಗೆ, ರೂ.4,800 ಕೋಟಿಗ್ರಾಮೀಣರಸ್ತೆ ಕಾಮಗಾರಿಗಳಿಗೆಅನುದಾನನೀಡಲಾಗಿದೆ. ಮಹಿಳಾಕಲ್ಯಾಣಕ್ಕಾಗಿರೂ.94,084ಕೋಟಿ ಮಿಸಲಿಟ್ಟದ್ದು, ಹೆಣ್ಣುಮಕ್ಕಳಶಿಕ್ಷಣ,ಅನಾಥಮಕ್ಕಳಕಲ್ಯಾಣ ಮತ್ತುಮಹಿಳಾ ಸ್ವಾವಲಂಬನಕ್ಕೆ ಪೆÇ್ರೀತ್ಸಾಹ ನೀಡಲಾಗಿದೆ. ಆದರೆ, ಮಹಿಳಾ ಸುರಕ್ಷತೆ ಮತ್ತುಅತ್ಯಾಚಾರ ಪ್ರಕರಣಗಳ ತಡೆಗಟ್ಟಲು ಬಜೆಟ್ನಲ್ಲಿ ಹೆಚ್ಚಿನ ಪ್ರಭಾವಶಾಲಿ ನಿರ್ಧಾರಗಳ ಕೊರತೆಇದೆಎಂಬುದು ಮೇಲ್ನೋಟಕ್ಕೆಕಾಣುತ್ತಿದೆ.
2025-26ನೇ ಸಾಲಿನ ಬಜೆಟ್ಆರ್ಥಿಕ ಬೆಳವಣಿಗೆಯೊಂದಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನುಉತ್ತೇಜಿಸುವ ಪ್ರಯತ್ನಗಳು ಗಮನಾರ್ಹವಾಗಿದ್ದರೂ, ಅನೇಕ ಸವಾಲುಗಳಿಗೂ ದಾರಿ ಮಾಡಿಕೊಟ್ಟಿದೆ.ಬಜೆಟ್ನಲ್ಲಿ ಸಮಾಜಕಲ್ಯಾಣ, ಕೃಷಿ, ಶಿಕ್ಷಣ ಮತ್ತುಆರೋಗ್ಯಕ್ಕೆ ಸಾಕಷ್ಟುಒತ್ತು ನೀಡಲಾಗಿದ್ದು, ಹೂಡಿಕೆಆಕರ್ಷಣೆ, ಉದ್ಯೋಗ ಸೃಷ್ಟಿ, ಹಸಿರು ಆರ್ಥಿಕತೆ ಮತ್ತು ನಾಗರಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನಅನುದಾನ ಮೀಸಲಾಗಿರುವುದುರಾಜ್ಯದ ಮುಂದಿನ ಬೆಳವಣಿಗೆಗೆ ಒಳ್ಳೆಯ ಬೆಳಕು ನೀಡುತ್ತದೆ.
ಆದರೆ, ಕೇಂದ್ರ ಸರ್ಕಾರದಿಂದರಾಜ್ಯಕ್ಕೆತಲುಪಬೇಕಾದಅನುದಾನದಕೊರತೆ,ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ರೂ.51,034ಕೋಟಿಅನುದಾನ ಹಂಚಿಕೆ ಸಂದರ್ಭದಲ್ಲಿಇತರೆ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆಮತ್ತುರಾಜ್ಯದಆದಾಯವನ್ನು ಹೆಚ್ಚಿಸುವ ಹೊಸ ಮಾರ್ಗಗಳ ಕೊರತೆಯು ಬಜೆಟ್ನ ಸಮರ್ಪಕ ಅನುಷ್ಠಾನಕ್ಕೆ ತೊಟಕ್ಕುಂಟುಮಾಡಬಹುದು. ಈ ಬಜೆಟ್ಆರ್ಥಿಕ ಪ್ರಗತಿಗೆ ಪೂರಕವಾದರೂ, ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪಾರದರ್ಶಕ ವೆಚ್ಚ ನಿರ್ವಹಣೆ, ಬಂಡವಾಳ ಹೂಡಿಕೆ ನಿರ್ವಹಣೆ, ಮತ್ತು ನೀತಿಅನುμÁ್ಠನದ ವೇಗ ಹೆಚ್ಚಿಸುವಅಗತ್ಯವಿದೆ.ಆದಾಯ ಮತ್ತು ವೆಚ್ಚದ ನಡುವಿನ ಸಮತೋಲನ ಸಾಧಿಸಲು ಸರ್ಕಾರಇನ್ನಷ್ಟು ಹೊಸ ಆದಾಯದ ಮಾರ್ಗಗಳನ್ನು ಅನ್ವೇಷಿಸಬೇಕು.ಸರಿಯಾದ ನೀತಿ ನಿರ್ಧಾರಗಳೊಂದಿಗೆ ಈ ಅಡಚಣೆಗಳನ್ನು ನಿವಾರಿಸಲು ಸಾಧ್ಯವಿದೆ.ಸಮಗ್ರವಾಗಿ, ಈ ಬಜೆಟ್ರಾಜ್ಯದ ಭವಿಷ್ಯದಆರ್ಥಿಕ ಸಮತೋಲನ ಮತ್ತು ದೀರ್ಘಕಾಲಿಕಅಭಿವೃದ್ಧಿಗೆ ಸೂಕ್ತ ದಾರಿಯನ್ನುಒದಗಿಸಬಹುದು.
ಅಭಿವೃದ್ಧಿಯ ಹೊಸ ಆಯಾಮಗಳೊಂದಿಗೆ ಮೈಸೂರಿಗೆ ವಿಶೇಷ ಘೋಷಣೆಗಳು: 2025-26ನೇ ಕರ್ನಾಟಕರಾಜ್ಯ ಬಜೆಟ್ನಲ್ಲಿ ಮೈಸೂರುಜಿಲ್ಲೆಗೆ ಪ್ರಮುಖಅನುದಾನ ಘೋಷಣೆಗಳಾಗಿವೆ. ಮೈಸೂರಿನಲ್ಲಿ ವಿಶ್ವ ಮಟ್ಟದ ಚಲನಚಿತ್ರ ನಗರಿಅಭಿವೃದ್ಧಿಗೆರೂ.500 ಕೋಟಿಅನುದಾನಹಾಗೂ 150 ಎಕರೆಭೂಮಿಮೀಸಲಾಗಿಸಿದೆ.ಇದುರಾಜ್ಯದ ಚಲನಚಿತ್ರಉದ್ಯಮ, ಪ್ರವಾಸೋದ್ಯಮಮತ್ತುಉದ್ಯೋಗಸೃಷ್ಟಿಗೆಉತ್ತೇಜನನೀಡಲು ಸಹಾಯವಾಗಲಿದೆ.ರೇμÉ್ಮ ಕೃಷಿಗೆ ನಬಾರ್ಡ ಸಹಯೋಗದೊಂದಿಗೆ ಮೈಸೂರಿನಲ್ಲಿ ಹೊಸ ರೇಷ್ಮೆ ಮಾರ್ಕೆಟ್ ಸ್ಥಾಪನೆ, ಪೆÇ್ರ. ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆ, ತಗಡೂರು ಸಮುದಾಯಆರೋಗ್ಯಕೇಂದ್ರವನ್ನು 100 ಹಾಸಿಗೆಯೊಂದಿಗೆ ವಿಸ್ತರಣೆ, ಮತ್ತು ಮೈಸೂರಿನಲ್ಲಿ ಪ್ರಾದೇಶಿಕ ಎಂಡೋಕ್ರಿನೋಲಜಿಕೇಂದ್ರ ಸ್ಥಾಪನೆಗೆ ಘೋಷಿಸಲಾಗಿದೆ.ಅಲ್ಲದೆ ಮೈಸೂರು ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ 100 ಕೋಟಿ ವೆಚ್ಚದಲ್ಲಿ ಸ್ಥಾಪನೆ, ಮೈಸೂರುವಿಮಾನನಿಲ್ದಾಣವಿಸ್ತರಣೆಗೆರೂ.319 ಕೋಟಿ, ಮೈಸೂರಿನಲ್ಲಿರಾಜ್ಯ ಬುಡಕಟ್ಟು ಸಂಶೋಧನಕೇಂದ್ರದಲ್ಲಿ ಬುಡಕಟ್ಟು ಸಂಸ್ಕøತಿಯನ್ನು ಪರಿಚಯಿಸಲು ಬುಡಕಟ್ಟು ಸಂಗ್ರಹಾಲಯ ಸ್ಥಾಪನೆ, 7 ಕೋಟಿ ವೆಚ್ಚದಲ್ಲಿಕ್ರೀಡಾ ವಿಜ್ಞಾನಕೇಂದ್ರದ ಸ್ಥಾಪನೆ ಮತ್ತು ಹೂಸ ಅಗ್ನಿಶಾಮಕಠಾಣೆ ನಿರ್ಮಾಣಕ್ಕೆರೂ.3 ಕೋಟಿಅನುದಾನಒದಗಿಸಲಾಗಿದೆ. ಮೈಸೂರುಜಿಲ್ಲೆಯಶಿಕ್ಷಣ, ಆರೋಗ್ಯ, ಸಂಶೋಧನೆ, ಕ್ರೀಡೆ, ಪ್ರವಾಸೋದ್ಯಮಮತ್ತುಮೂಲಸೌಕರ್ಯಗಳಅಭಿವೃದ್ಧಿಗೆಪೂರಕ ಯೋಜನೆಗಳನ್ನುಘೋಷಣೆ ಮಾಡಿದ್ದು, ಇದು ಸೂಕ್ತ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ.

ಡಾ.ಸಿದ್ದರಾಜು ವಿ.ಜಿ.
ಆರ್ಥಿಕತಜ್ಞರು ಮತ್ತು ಸಹ-ಪ್ರಾಧ್ಯಾಪಕರು
ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನಕೇಂದ್ರ
ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು. ಮೊ:9480771681