ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೇಸಿಗೆ ತರಬೇತಿ ಶಿಬಿರವನ್ನು ಏಪ್ರಿಲ್ 15ರಿಂದ ಮೇ 15 ರವರೆಗೆ ಹಮ್ಮಿಕೊಳ್ಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಲಕ, ಬಾಲಕಿಯರಿಗೆ ವಿವಿಧ ಆಟೋಟ ಮತ್ತು ಕ್ರೀಡಾ ತರಬೇತಿಯನ್ನು ವೈಜ್ಞಾನಿಕ ರೀತಿಯಲ್ಲಿ ನುರಿತ ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಹಾಗೂ ಜಿಲ್ಲೆಯ ಕ್ರೀಡಾ ಸಂಸ್ಥೆಗಳ ರಾಷ್ಟ್ರೀಯ ಕ್ರೀಡಾಪಟುಗಳಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಹಾಗೂ ತಾಲ್ಲೂಕು ಕ್ರೀಡಾಂಗಣಗಳಲ್ಲಿ ಮತ್ತು ವಿವಿಧ ಆಟದ ಮೈದಾನಗಳಲ್ಲಿ ಬೆಳಿಗ್ಗೆ 6.30 ರಿಂದ 8.30 ಮತ್ತು ಸಂಜೆ 4.30 ರಿಂದ 6.30 ಗಂಟೆಯವರೆಗೆ ತರಬೇತಿ ಶಿಬಿರ ನಡೆಯಲಿದೆ.
ತರಬೇತಿ ಶಿಬಿರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆಸರಾದ ಕ್ರೀಡಾಪಟುಗಳು ಅಥವಾ ಸೆಲೆಬ್ರಿಟಿಗಳಿಂದ ಸಂದರ್ಶನ, ಸಂವಾದ ಹಾಗೂ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ವೀಕ್ಷಣೆಯನ್ನು ಏರ್ಪಡಿಸಲಾಗುವುದು.
ಚಾಮರಾಜನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ಗೆ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಕೆ.ಎಂ. ನಾಗರಾಜು (ಮೊ.ಸಂ 9449778537) ಅವರು ತರಬೇತುದಾರರಾಗಿದ್ದು ತರಬೇತಿ ನೀಡಲಿದ್ದು, ಪ್ರವೇಶ ಶುಲ್ಕ 300 ರೂ. ನಿಗದಿ ಮಾಡಲಾಗಿದೆ.
ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಚಾ.ರಂ ಶ್ರೀನಿವಾಸಗೌಡ (ಮೊ.ಸಂ. 8660044567) ಅವರು ತರಬೇತುದಾರರಾಗಿದ್ದು ತರಬೇತಿ ನೀಡಲಿದ್ದು, ಪ್ರವೇಶ ಶುಲ್ಕ 300 ರೂ. ನಿಗದಿ ಮಾಡಲಾಗಿದೆ.
ಬ್ಯಾಡ್ಮಿಂಟನ್ಗೆ ಹಿರಿಯ ರಾಷ್ಟ್ರೀಯ ಕ್ರೀಡಾಪಟು ವಿ. ಶ್ರೀನಿವಾಸ ಪ್ರಸಾದ್ (ಮೊ.ಸಂ 8660422976) ಅವರು ತರಬೇತುದಾರರಾಗಿದ್ದು ತರಬೇತಿ ನೀಡಲಿದ್ದು, ಪ್ರವೇಶ ಶುಲ್ಕ 500 ರೂ. ನಿಗದಿ ಮಾಡಲಾಗಿದೆ.
ಫುಟ್ಬಾಲ್ಗೆ ತರಬೇತುದಾರರಾಗಿ ಗೋಪಾಲ್ ಬಿ.ಕೆ. (ಮೊ.ಸಂ. 9945615695) ಅವರು ತರಬೇತಿ ನೀಡಲಿದ್ದು, ಪ್ರವೇಶ ಶುಲ್ಕ 300 ರೂ., ಅರ್ಚರಿಗೆ ವಿ. ರಘು (ಮೊ.ಸಂ 7892002795) ಅವರು ತರಬೇತುದಾರರಾಗಿದ್ದು, ಪ್ರವೇಶ ಶುಲ್ಕ 500 ರೂ ಆಗಿರುತ್ತದೆ.
ನೆಟ್ ಬಾಲ್ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮಹದೇವಪ್ರಸಾದ್ (ಮೊ.ಸಂ 9980129067) ಅವರು ತರಬೇತುದಾರರಾಗಿದ್ದು, ಪ್ರವೇಶ ಶುಲ್ಕ 300 ರೂ, ಸ್ಕೆಟಿಂಗ್ ಗೆ ಫುರ್ಖನ್ ಪಾಷ (ಮೊ.ಸಂ 7975854988) ಅವರು ತರಬೇತುದಾರರಾಗಿದ್ದು, ಪ್ರವೇಶ ಶುಲ್ಕ 500 ರೂ, ಬ್ಯಾಸ್ಕೆಟ್ ಬಾಲ್ಗೆ ಹಿರಿಯ ಕ್ರೀಡಾಪಟು ಆರ್. ಶಿವಪ್ರಸಾದ್ (ಮೊ.ಸಂ 9448150825) ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 500 ರೂ, ಖೋ-ಖೋ ಗೆ ಹಿರಿಯ ಕ್ರೀಡಾಪಟು ರಾಜು ಹೊಸೂರು (ಮೊ.ಸಂ 9008784045) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ, ಯೋಗಕ್ಕೆ ಯೋಗಪಟು ಪ್ರಕಾಶ್ (ಮೊ.ಸಂ 9035043827) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ. ನಿಗದಿಪಡಿಸಲಾಗಿದೆ.
ಕೊಳ್ಳೇಗಾಲದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ಗೆ ಕ್ರೀಡಾಪಟು ಧವಲಿತ್ (ಮೊ.ಸಂ 6362470624) ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ., ಹ್ಯಾಂಡ್ ಬಾಲ್ ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಪಿ. ಸುಮನ್ (ಮೊ.ಸಂ 8660151257) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ. ಹಾಗೂ ಎಂ.ಜಿ.ಎಸ್.ವಿ. ಕಾಲೇಜು ಮೈದಾನದಲ್ಲಿ ಬ್ಯಾಸ್ಕೆಟ್ ಬಾಲ್ಗೆ ಕ್ರೀಡಾಪಟು ಮೋಯಿನ್ ಖಾನ್ (ಮೊ.ಸಂ 8105725710) ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ. ನಿಗದಿ ಮಾಡಲಾಗಿದೆ.
ಗುಂಡ್ಲುಪೇಟೆಯ ಡಿ. ದೇವರಾಜು ಅರಸು ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಯು. ಭರತ್ (ಮೊ.ಸಂ. 9035578778) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 500 ರೂ., ಖೋ-ಖೋ ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸ್ವಾಮಿ (ಮೊ.ಸಂ 9741821583) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ., ಕಬ್ಬಡಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದಶೆಟ್ಟಿ (ಮೊ.ಸಂ. 9204962677) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ. ನಿಗದಿಪಡಿಸಲಾಗಿದೆ.
ಸಂತೇಮರಹಳ್ಳಿಯ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ನಿಲಯದಲ್ಲಿ ಫೆನ್ಸಿಂಗ್ ಪಿ.ವಿ. ವಿವೇಕ್ ಮತ್ತು ಪವನ್ ಕುಮಾರ್ (ಮೊ.ಸಂ. 9809684102) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 500 ರೂ.ಗಳಾಗಿವೆ.
ಹನೂರಿನ ಶ್ರೀ ಮಲೈ ಮಹದೇಶ್ವರ ಕ್ರೀಡಾಂಗಣದಲ್ಲಿ ವಾಲಿಬಾಲ್ಗೆ ಕ್ರೀಡಾಪಟು ಉಮೇಶ್ ಮತ್ತು ವಿಶ್ವಾಸ್ (ಮೊ.ಸಂ. 9980397622) ಅವರು ತರಬೇತುದಾರರಾಗಿದ್ದು ಪ್ರವೇಶ ಶುಲ್ಕ 300 ರೂ.ಗಳಾಗಿರುತ್ತದೆ.
ಬಿ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ಪ್ರವೇಶ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ.
ತರಬೇತಿ ಪಡೆಯಲು ಪ್ರವೇಶ ಶುಲ್ಕವನ್ನು ಇತ್ತೀಚಿನ ಭಾವಚಿತ್ರದೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಠಡಿ ಸಂಖ್ಯೆ 118/119, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ಏಪ್ರಿಲ್ 10ರೊಳಗೆ ನಿಗದಿತ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು. ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಇಲಾಖಾ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.ಸಂ 08226-224932 ಅಥವಾ ಮೊ.ಸಂ 9916466659, 9945615695, 9880211027 ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Like this:
Like Loading...
Related