ಚಾಮರಾಜನಗರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಹಿಂದುಳಿದ ಸಮಾಜಗಳ ಅಧ್ಯಕ್ಷರುಗಳ ಜಂಟಿ ಆಶ್ರಯದಲ್ಲಿ ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು

ಸುನಿಲ್ ಬೋಸ್ ಗೆಲ್ಲಿಸಿ ಅಭಿಯಾನ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸುನಿಲ್ ಬೋಸ್ ಗೆಲ್ಲಿಸಿ ಅಭಿಯಾನ ಕುರಿತು ಪತ್ರಿಕಾಗೋಷ್ಠಿಯನ್ನದ್ದೇಶಿಸಿ ಕರ್ನಾಟಕ ರಾಜ್ಯ ಜಾಗೃತ ವೇದಿಕೆ ರಾಜ್ಯಾಧ್ಯಕ್ಷರಾದ ಕೆಎಸ್ ಶಿವರಾಂ ರವರು ಪೋಸ್ಟರ್ ಚಾಲನೆ ನೀಡಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿ ಎಂದು ಕರೆಕೊಟ್ಟರು.
ಈ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಯೋಗೀಶ ಉಪ್ಪಾರ ರವರು ಮಾತನಾಡಿ, ಸುಳ್ಳು ಭರವಸೆ ನೀಡಿ ದೇಶಕ್ಕೆ ಮೋಸ ಮಾಡಿದ ಬಿಜೆಪಿ ಪಕ್ಷಕ್ಕೆ ಸರಿಯಾಗಿ ಬುದ್ದಿ ಕಲಿಸಿ ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಸ್ತ ಹಿಂದುಳಿದ ಸಮಾಜಗಳು ಎಚ್ಚತ್ತು ಕೊಂಡು ಕಾಂಗ್ರೆಸ್ ಬೆಂಬಲಿಸಿಬೇಕು ಎಂದು ಮನವಿ ಮಾಡಿದರು.
ಕುಂಬಾರರ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್ ಎಸ್ ಪ್ರಕಾಶ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ರವೀನಂದನ್ ಮಾತನಾಡಿದರು,ಲೋಕೇಶ್ ಕುಮಾರ್ ಮಾದಾಪುರ, ಚಾಮರಾಜನಗರ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷರಾದ ಸ್ವಾಮಿ ಕುಂಬಾರರ ಸಂಘದ ಗೌರಧ್ಯಕ್ಷರಾದ ಕೇಶವ ಉಪಸ್ಥಿತರಿದ್ದರು.