ಕಳೆದು ಹೋದ ಹೊತ್ತು ನೀನು
ಜಾರಿ ಬಿದ್ದ ತುತ್ತು ನೀನು
ಅದೇ ಆಸೆ ಅದೇ ಹಸಿವು
ಶಮನಗೊಳಿಸು ತೋರಿ ಕಸುವು
ಕೊರಗಿನಲ್ಲೇ ಸೊರಗಿ ಕಲ್ಲಾದ ಎದೆಯ
ಕರಗಿಸಬಹುದು ನಿನ್ನಪ್ಪುಗೆ ಬಿಡಿಯುಸಿರ ಶಾಖ
ನಿನ್ನ ತೋಳುಗಳ ಬಂಧನವ ಬಯಸಿಹ ಜೀವವ ಚೇತನಗೊಳಿಸಬಹುದು ನಿನ್ನೊಪ್ಪಿಗೆ ಸಹಕಾರದ ನಾಕ
ಎದೆಯ ಕಪಾಟಿನಲ್ಲಿ ಅಡಗಿಸಿಟ್ಟಿದ್ದ
ಕಾಮನೆಗಳೆಲ್ಲ ರೆಕ್ಕೆ ಬಿಚ್ಚ ಹತ್ತಿವೆ ನಿನ್ನ ನೆನೆದು
ಸಮ್ಮತಿಯ ಕೀಲಿಯಿಂದ ಬಾಗಿಲು ತೆಗೆದುಬಿಡು
ನಿನ್ನೆದೆಯಾಗಸದ ಅವುಗಳಾವಾಸದಿ ಹಾರಾಡಲಿ ತೊನೆದು
ನಿನ್ನ ನೆನಹ ವಿರಹ ಕ್ಷಣಗಳ
ತಹತಹಿಕೆಗಳ ಪರಿಹರಿಸಿಬಿಡು ಬಂದು
ಮೈಗೆ ಮೈ ಸೋಕಿಸಿ ಸೊಕ್ಕಿದಾಸೆಹಸಿವುಗಳ
ಅಮಲಿಳಿಸಿ ಸಹಕರಿಸಿಬಿಡು ಬಂಧು

ಹೇಮಚಂದ್ರ ದಾಳಗೌಡನಹಳ್ಳಿ