ಯುವಕರ ದಾದಿ ರತನ್ ಮೋಹಿನೀಜೀಯವರಿಗೆ ಪ್ರಕಾಶ ಭವನದಲ್ಲಿ ನುಡಿ ನಮನ

ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬು ರಾಜಸ್ಥಾನದ ಮುಖ್ಯ ಆಡಳಿತ ಅಧಿಕಾರಿಣಿ ದಿವಂಗತ ರಾಜಯೋಗಿನಿ ಬ್ರಹ್ಮಾಕುಮಾರಿ ರತನ್ಮೋಹಿನಿಜೀಯವರಿಗೆ ಪುಷ್ಪ ನಮನ ಹಾಗೂ ನುಡಿ ನಮನವನ್ನು ನಗರದ ಪ್ರಕಾಶ ಭವನದಲ್ಲಿ ಅರ್ಪಿಸಲಿಸಲಾಯಿತು.

ಪಟ್ಟಣದ ಸಂಸ್ಥೆಯ ಮುಖ್ಯ ಸಂಚಾಲಕರು, ಮನೋಬಲ ತರಬೇತುದಾರರು,ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರ ರಾಜ್ಯ ಪ್ರಶಸ್ತಿ ಪುರಸ್ಕೃತರು, ಆದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀಯವರು ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿ ನಮ್ಮ ಸಂಸ್ಥೆಯ ಪ್ರಮುಖ ಆಡಳಿತಾಧಿಕಾರಣಿಯಾಗಿದ್ದ ದಾದಿ ರತನ್ಮೋಹಿನೀಜೀಯವರು 101 ವರ್ಷಗಳ ವಯೋವೃದ್ದರೂ, ಇವರು ಸಂಸ್ಥೆಯ ಬಹು ಅಮೂಲ್ಯ ರತ್ನವಾಗಿದ್ದರು. ದಾದೀಜೀಯವರು ಲಕ್ಷಾಂತರ ಜನರ ಹೃದಯದಲ್ಲಿ ಪ್ರೀತಿ-ವಿಶ್ವಾಸ ಗೌರವವನ್ನು ಪಡೆದಿದ್ದಾರೆ.

3000 ಕಿಲೋಮೀಟರುಗಳ ಬಹಳ ವಿಶೇಷವಾದ ವಿಶ್ವದ ಯುವ ರ್ರ್ಯಾಲಿ, ಸ್ವರ್ಣ ಭಾರತದ ಯುವ ಪಾದಯಾತ್ರೆಯೂ ಲಿಮ್ಕಾ ಬುಕ್ ನಲ್ಲಿ ರೆಕಾರ್ಡ್ ಆಗಿದೆ ಇಂತ ದಾದಿ ಜೀವನದ ಪ್ರೇರಣೆ ಜೀವನ ನೋಡಿ 2014ರಲ್ಲಿ ಡಾಕ್ಟರೇಟ್ ಪದವಿ ಕೊಟ್ಟು ಸನ್ಮಾನಿಸಲಾಗಿದೆ ಹಾಗೆ ಯೂತ್ ಡೆವಲಪ್ಮೆಂಟ್ ಕ್ಯಾಂಪೈನ್ ನಡೆಸಲು ಮಹತ್ವಪೂರ್ಣ ಯೋಗದಾನ ಮಾಡಿ ವಿಶ್ವಶಾಂತಿ ತರಲು ನಿಯಮಿತ ರೂಪದಲ್ಲಿ ಸದಾ ಕಾಲ ಸಕ್ರಿಯವಾಗಿ ಭಾಗವಹಿಸಿದ್ದರು 2015 ರಂದು ದಾದೀಜಿ ಅವರಿಗೆ ಭಾರತದ ಗೌರವ ಅವಾರ್ಡ್ ನಿಂದ ಸನ್ಮಾನಿಸಲಾಯಿತು.

ಸಮಾಜದ ಉತ್ಕೃಷ್ಟ ಕಾರ್ಯದಲ್ಲಿದ್ದ ದಾಧೀಜಿಯವರನ್ನು ಕೇಂದ್ರೀಯ ಮಾನವತಾ ಅಧಿಕಾರಿಗಳ ಸಂಘಟನೆಯ ಕಡೆಯಿಂದ ಮಾನವತಾಧಿಕಾರಿ ರತ್ನವನ್ನು ಪ್ರಧಾನ ಮಾಡಿದರು. ಇಂಟರ್ನ್ಯಾಷನಲ್ ಬುಕ್ ಆಫ್ ಹಾನರ್ ಅಲ್ಲಿ ದಾದಿಜಿ ಅವರಿಗೆ ಸನ್ಮಾನ ಮಾಡಲಾಗಿದೆ ಇಂತಹ ಅನೇಕ ವಿಶಿಷ್ಟಗಳಿಂದ ಕೂಡಿದ ನೂರೊಂದು ವರ್ಷಗಳ ದಾದೀಜಿಯವರು ಸ್ವಯಂ ಭಗವಂತನ ಯಜ್ಞದ ಕಿರೀಟಪ್ರಾಯ ಆಗಿದ್ದರು.

ಈಗ ನಾವು ಅಂತ ದಾದೀಜಿಯವರ ಚತ್ರ ಚಾಯೆಯಲ್ಲಿ ಸದಾ ಬೆಳೆಯುತ್ತಿದ್ದೇವೆ ಹೀಗೆ ಭಗವಂತನ ಅಪೂರ್ವ ರತ್ನವಾದ ರತ್ನಗಳ ಗಣಿಯೇ ಆಗಿದ್ದ ಪೂಜ್ಯ ದಾದೀಜಿಯವರು 1996 ರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶಾಖೆಯ ಬೆಳ್ಳಿಹಬ್ಬದಲ್ಲಿ ಪಾಲ್ಗೊಂಡಿದ್ದರು ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್ನ ಬಿಕೆ ಆರಾಧ್ಯ ಆರೋಗ್ಯ ಇಲಾಖೆಯ ಗೀತಾ, ಪುಷ್ಪ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಶಿಕ್ಷಣ ಇಲಾಖೆಯ ನಾಗರಾಜ್, ಪ್ರಮೀಳಾ ಉದಗಡ್ಡಿ, ಲಕ್ಷ್ಮಿನರಸಿಂಹ ಪ್ರಸಾದ್, ಸುಬ್ರಹ್ಮಣ್ಯ, ಸುವರ್ಣ, ಮರ್ಗತಕ್ಕ, ಸುನೀತಕ್ಕ, ನಿರ್ಮಲ, ಜೈ ಲಕ್ಷ್ಮಿ ಹಾಜರಿದ್ದರು.

Leave a Reply

Your email address will not be published. Required fields are marked *