ಸತ್ಯಯುಗ ಬರುವ ಮುನ್ಸೂಚನೆ ನೀಡುವ ಮಹಾನ್ ಪರ್ವವೇ ಯುಗಾದಿ

ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಭವಿಷ್ಯ
ಚಾಮರಾಜನಗರ: ಇಂದು ಜಗತ್ತು ಪರಿವರ್ತನಾ ನಾಗಲೋಟದಲ್ಲಿದ್ದು, ಈ ಕಲಹದ ಕಲಿಯುಗವು ತನ್ನ ಚರಮ ಸೀಮೆಯನ್ನು ತಲುಪಿದೆ. ಸತ್ಯಯುಗವೂ ಬರಲಿರುವ ಸೂಚನೆಯನ್ನು ತಿಳಿಸುವಂತಹ ಈ ಮಹಾನ್ ಪರ್ವವೇ ಯುಗಾದಿಯಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ,ಮನೋಬಲ ತರಬೇತುದಾರರು ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀ ಜೀಯವರು ಭವಿಷ್ಯ ನುಡಿದರು.

ಅವರು ಪಟ್ಟಣದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ದ ಬೇವು ಬೆಲ್ಲ ಸಿಹಿ ಕಹಿ ಯುಗಾದಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಯುಗಾದಿ ಎಂದರೆ ಯುಗದ ಆದಿ ವರ್ತಮಾನ ಕಲ್ಯಾಣಕಾರಿ ಪುರುಷೋತ್ತಮ ಸಂಗಮಯುಗ. ಕಲಿಯುಗ ಇನ್ನೂ ಹೋಗಿಲ್ಲ ಸತ್ಯಯುಗ ಇನ್ನೂ ಬಂದಿಲ್ಲ ಇದರ ಮದ್ಯ ಇರುವುದೇ ಸಂಗಮಯುಗ, ಪರಮಾತ್ಮ ಸಂಗಮೇಶ್ವರ ಬಂದಿರುವಂತಹ ಯುಗ ಆಗಲೇ 9 ದಶಕಗಳು ಕಳೆಯುತ್ತಿವೆ. ಯುಗಾದಿಯು ಕಲಿಯುಗದ ಪರಿವರ್ತನೆ ಮತ್ತು ಶ್ರೇಷ್ಟಾಚಾರ ಸತ್ಯಯುಗದ ಆರಂಭದ ದ್ಯೋತಕವಾಗಿದೆ.

ನಾವು ಈ ಕಣ್ಣಿಗೆ ಕಾಣುವ ದೇಹವಲ್ಲ ಮತ್ತು ನಾವು ಸ್ವಯಂ ಪ್ರಕಾಶಿಸುವ ಆತ್ಮಗಳು ಎಂದು ಅರಿತುಕೊಂಡು ಸರ್ವ ಆತ್ಮರ ಪಿತನಾದ ಪರಮಾತ್ಮ ಶಿವನನ್ನು ಸ್ಮರಿಸಿದಾಗ ಶಾಂತಿ ಸಮೃದ್ಧಿ ಮತ್ತು ಸಂತೋಷವು ಯಾವಾಗಲೂ ನಮ್ಮೊಂದಿಗೆ ಇರುವ ಸಮೃದ್ಧ ಸುವರ್ಣ ಯುಗಕ್ಕೆ ನಾವು ಹೋಗುತ್ತೇವೆ ಎಂದು ಯುಗಾದಿಯ ಸಾರವು ಹೇಳುತ್ತದೆ. ಸತ್ಯಯುಗ ಅಥವ ಕೃತಯುಗ ಎಂದರೆ ಅಲ್ಲಿ ಒಂದೇ ರಾಜ್ಯ ಒಂದೇ ಭಾಷೆ ಒಬ್ಬರ ಕೈಯಲ್ಲಿ ಆಡಳಿತವಿರುತ್ತದೆ. ಅದು ಚಿನ್ನದ ಯುಗವಾಗಿರುಗಿರುತ್ತದೆ.

ಎಲ್ಲರಿಗೂ ಚಿನ್ನದ ಅರಮನೆ ಗಳಿರುತ್ತವೆ ಯಥಾ ಮಹಾರಾಜ ರಾಣಿ ತಥಾಪ್ರಜಾ ಇದನ್ನೇ ಗಾಂಧೀಜಿಯವರು ರಾಮ ರಾಜ್ಯದ ಕನಸನ್ನ ಕಂಡಿದ್ದರು ಅದು ಪರಮಾತ್ಮನ ಗುಪ್ತ ಕಾರ್ಯದಿಂದ ಸಾಕಾರಗೊಳ್ಳಲಿದೆ 800ಕೋಟಿ ಜನಸಂಖ್ಯೆಯಿಂದ 9 ಲಕ್ಷ ಜನಸಂಖ್ಯೆ ಇಳಿದು ಜಗತ್ತಿನಲ್ಲಿ ಮೌಲ್ಯಾದಾರಿತ ಸಮಾಜ ಅಥವಾ ದೇವಾನು ದೇವತೆಗಳ ಜಗತ್ತಾಗಲಿದೆ ಎಂದು ಭವಿಷ್ಯ ನುಡಿದರು ಸದ್ಗುಣಗಳನ್ನು ಹೊಂದಿರುವ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವವರ ರಾಶಿ ಚಕ್ರವು ಯಾವಾಗಲೂ ಹೊಳೆಯುತ್ತಿರುತ್ತದೆ. ಅವಮಾನಗಳನ್ನು ಅವಕಾಶವನ್ನವಾಗಿ ಮಾಡಿಕೊಳ್ಳುವ ಪುಣ್ಯಾತ್ಮರಿಗೆ ಶ್ರೇಷ್ಠ ಪೂಜ್ಯ ಸ್ಥಾನವು ಸದಾ ಜೊತೆ ಇರುತ್ತದೆ ಆಗ ಅವಮಾನವ ಶೂನ್ಯವಾಗುತ್ತದೆ.

ಗತಕಾಲದ ದುಃಖದ ನೆನಪುಗಳನ್ನು ಬೆಂಕಿಯಲ್ಲಿ ಹಾಕಿ, ಇತರರ ಮನಸ್ಸನ್ನು ಸಂತೋಷಪಡಿಸುವ ಮಾತುಗಳಿಂದ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮಹತ್ಕಾರ್ಯಗಳನ್ನು ಮಾಡುವವರಿಗೆ ಯಾವಾಗಲೂ ಸಹ ಉತ್ತಮ ಭವಿಷ್ಯವಿದೆ. ಜೀವನವು ಸುಖ-ದುಃಖಗಳು ನಿಂದನೆ ಮತ್ತು ಹೊಗಳಿಕೆಗಳು, ಲಾಭ ಮತ್ತು ನಷ್ಟಗಳ ಸಮ್ಮಿಶ್ರಣ ಎಂದು ಅರ್ಥ ಮಾಡಿಕೊಳ್ಳುವವರಿಗೆ ದೇವರು ಸ್ನೇಹಿತನಾಗುತ್ತಾನೆ ಎಂದು ತಿಳಿಸಿ ಎಲ್ಲರಿಗೂ ಬೇವು ಬೆಲ್ಲವನ್ನು ಹಂಚಿದರು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ ನಗರಸಭಾ ಆರೋಗ್ಯ ಅಧಿಕಾರಿ ಪುಷ್ಪ ಗೀತಾ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಇಂಜಿನಿಯರ್ ಮಹೇಶ್, ಲಕ್ಷ್ಮಿನರಸಿಂಹ ಪ್ರಸಾದ್, ಆಶಾ ಗುರುಸಿದ್ದಯ್ಯ ಸುಂದರ್ ಹಾಜರಿದ್ದರು.

Leave a Reply

Your email address will not be published. Required fields are marked *