ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಮಧ್ಯಮ ವರ್ಗದ ಖರ್ಚು ಶಕ್ತಿಯನ್ನು ಹೆಚ್ಚಿಸುವುದು, ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವುದು ಹಾಗೂ ಆರ್ಥಿಕ ವೃದ್ಧಿಗೆ ಗತಿ ನೀಡುವುದು ಪ್ರಮುಖ ಉದ್ದೇಶಗಳಾಗಿವೆ.
ಈ ಬಜೆಟ್ ನವೀಕರಿಸಿದ ತೆರಿಗೆ ನೀತಿಯೊಂದಿಗೆ ಕೃಷಿ, ನಗರಾಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಶಕ್ತಿ ಉತ್ಪಾದನೆ, ಹಣಕಾಸು ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಮಹತ್ವದ ಅನುದಾನವನ್ನು ನೀಡಿದೆ. ಹೊಸ ತೆರಿಗೆ ನೀತಿಯ ಪ್ರಕಾರ, ಇನ್ನು ಮುಂದೆ 12 ಲಕ್ಷದ ವರೆಗೆ ಯಾವುದೇ ಆದಾಯ ತೆರಿಗೆ ವಿಧಿಸಲಾಗದು, ಇದರಿಂದಾಗಿ ಮಧ್ಯಮ ವರ್ಗದ ಜನರು ಹೆಚ್ಚಿನ ಖರ್ಚು ಮಾಡಬಹುದಾದ ಪರಿಸ್ಥಿತಿ ಉಂಟಾಗಲಿದೆ. ತೆರಿಗೆ ಕಾಯ್ದೆಯನ್ನು ಸರಳೀಕರಿಸಲು ಹೊಸ ಆದಾಯ ತೆರಿಗೆ ಮಸೂದೆ ತರಲಾಗುತ್ತಿದ್ದು, ಇದು ಪ್ರಸ್ತುತ ನಿಯಮಾವಳಿಗಳನ್ನು ಕಡಿಮೆ ಮಾಡಲಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಪ್ರಮುಖ ಪ್ರಸ್ತಾವನೆಗಳಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಸಾಯನಿಕ ಸಲಫಟ್ ಕಾರ್ಖಾನೆ ಸ್ಥಾಪನೆಗೊಳ್ಳಲಿದ್ದು, ಈ ಮೂಲಕ ರಸಗೊಬ್ಬರ ಉತ್ಪಾದನೆಯನ್ನು ದಿಟ್ಟ ಗುರಿ ಹೊಂದಲಾಗಿದೆ. ರೈತರ ಅಭಿವೃದ್ಧಿಗಾಗಿ ಕೃಷಿ ಸಾಲ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ, ಇದರಿಂದ 7.07 ಕೋಟಿ ರೈತರು ಲಾಭಪಡೆಯಲಿದ್ದಾರೆ. ಸುಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯದಲ್ಲಿ ಬಂಡವಾಳ ಮತ್ತು ವ್ಯವಹಾರ ಮಿತಿಗಳನ್ನು ದ್ವಿಗುಣಗೊಳಿಸುವ ಮೂಲಕ ಉದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗಿದೆ. ಸ್ಟರ್ಟ್ಅಪ್ಗಳಿಗಾಗಿ ಹೆಚ್ಚುವರಿ 10,000 ಕೋಟಿ ಮೊತ್ತದ ‘ಫಂಡ್ ಆಫ್ ಫಂಡ್ಸ್’ ಘೋಷಿಸಲಾಗಿದೆ.
ಮಹಿಳಾ ಸಬಲೀಕರಣದ ಭಾಗವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಐದು ಲಕ್ಷ ಮಹಿಳಾ ಉದ್ಯಮಿಗಳಿಗೆ ಐದು ವರ್ಷ ಗಡಿವರೆಗಿನ ವ್ಯವಹಾರ ಸಾಲ ನೀಡಲಾಗುವುದು. ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹವಾಗಿ ಐದು ರಾಷ್ಟ್ರೀಯ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ 75,000 ಹೊಸ ವೈದ್ಯಕೀಯ ಆಸನಗಳನ್ನು ಹೆಚ್ಚಿಸಲಾಗುತ್ತಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಯೋಜನೆ ಜಾರಿಗೆ ಬರಲಿದೆ. ನಗರಾಭಿವೃದ್ಧಿಗಾಗಿ 1 ಲಕ್ಷ ಕೋಟಿ ಮೊತ್ತದ ನಗರ ಚಲವಳಿ ನಿಧಿ ಘೋಷಣೆಯಾಗಿದೆ, ಇದು ನಗರಗಳನ್ನು ಆರ್ಥಿಕ ಪ್ರಗತಿಯ ಕೇಂದ್ರಗಳಾಗಿ ರೂಪಿಸಲಿದೆ.
ಯಾವುದೇ ಉದ್ಯಮೋದ್ಯಮಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ Uಆಂಓ ಯೋಜನೆಯ ನವೀಕರಣದೊಂದಿಗೆ ಹೊಸ 120 ಗುರಿ ಪ್ರದೇಶಗಳನ್ನು ಒಳಗೊಳ್ಳಲಾಗಿದ್ದು, ಅದರಿಂದ ನಾಲ್ಕು ಕೋಟಿ ಪ್ರಯಾಣಿಕರಿಗೆ ಲಾಭವಾಗಲಿದೆ. 2025-26ನೇ ಆರ್ಥಿಕ ವರ್ಷದ ಘೋಷಿತ ಹಣಕಾಸು ಕೊರತೆ 4.4% ರಷ್ಟಾಗಿದ್ದು, ಸರ್ಕಾರ ಹಣಕಾಸು ಶಿಸ್ತು ಪಾಲಿಸುವತ್ತ ಗಮನ ಹರಿಸಿದೆ. ಅದೇ ವೇಳೆ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು 74% ನಿಂದ 100% ಕ್ಕೆ ಹೆಚ್ಚಿಸಿ, ಹೆಚ್ಚಿನ ಹೂಡಿಕೆ ಆಕರ್ಷಿಸಲು ನಿರ್ಧರಿಸಲಾಗಿದೆ.
ಒಟ್ಟಾರೆ, 2025-26ನೇ ಸಾಲಿನ ಕೇಂದ್ರ ಬಜೆಟ್ ದೇಶದ ಆರ್ಥಿಕ ಬೆಳವಣಿಗೆಗೆ ಬಲ ನೀಡಲು ಹಾಗೂ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಮಧ್ಯಮ ವರ್ಗದ ಮೇಲೆ ಹೆಚ್ಚು ಒತ್ತು ನೀಡಿದೆ. ಇದರಿಂದ ಆರ್ಥಿಕ ಸಮಗ್ರತೆ ಹೆಚ್ಚಿಸಿ, ಉದ್ಯೋಗ ಸೃಷ್ಟಿ ಮತ್ತು ಶಕ್ತಿ ಉತ್ಪಾದನೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ.

ಡಾ.ಸಿದ್ದರಾಜು ವಿ.ಜಿ.
ಆರ್ಥಿಕ ತಜ್ಞರು
ಮೈಸೂರು. ಮೊ:9480771681