ಚಾಮರಾಜನಗರ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ರಾಜ್ಯದಾದ್ಯಂತ ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಅವರು, ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜೊತೆಗೆ ನಗದು ರಹಿತವಾದ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಿಸಬೇಕು. ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಸ್ವಚ್ಛತಾ ಪಾಲಕರು,. ವಾಹನ ಚಾಲಕರು, ಲೋಡರ್ಸ್ಗಳು, ಮೇಲ್ವಿಚಾರಕರು ಇವರುಗಳಿಗೆ ವೇತನವನ್ನು ನೇರಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಪೌರ ನೌಕರರು ಇಡೀ ಸಮಾಜದ ಸ್ವಸ್ಥವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು. ಅವರ ಜೀವನ ಶೈಲಿಯ ಗುಣಮಟ್ಟವನ್ನು ಕಾಪಾಡುವಲ್ಲಿ ನೆರವು ನೀಡಬೇಕೆಂದು ಹೇಳಿದರು.
ಲೆಕ್ಕಾ ದಿ ಕಾರಿ ಜಯಾನಾಯಕ್. ಯೋಜನಾ ಅಧಿಕಾರಿ ವೆಂಕಟ್ ನಾಯಕ್. ಅಭಿಯಂತರರು ಆರಾಧ್ಯ. ಪ್ರೋಗ್ರಾಮ್ ರ್ ಸಿದ್ದಪಾಜಿ. ಹೆಲ್ತ್ ಅಧಿಕಾರಿ ಗಳಾದ ರೂಪ. ಸುಷ್ಮಾ. ಮಂಜುನಾಥ್. ಪುಷ್ಪ ನಾಗು. ರಾಜಪ್ಪ. ಇನ್ನಿತರು ಇದ್ದರು