ಕಟ್ನವಾಡಿಯಲ್ಲಿ  ಗಾಳಿಮಳೆಗೆ ಮರ, ವಿದ್ಯುತ್ ಕಂಬ ಬಿದ್ದು  2 ಮನೆಗೆ ಹಾನಿ

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ, ವೈಯಕ್ತಿಕ ಪರಿಹಾರ ವಿತರಣೆ,  ಹೊಸ ಮನೆ ಭರವಸೆ

ಚಾಮರಾಜನಗರ:  ಬುಧವಾರ  ಸಂಜೆ ಬಿದ್ದ ಗಾಳಿಮಳೆಗೆ ತಾಲೂಕಿನ  ಕಟ್ನವಾಡಿ ಗ್ರಾಮದಲ್ಲಿ  ಮರ, ವಿದ್ಯುತ್ ಕಂಬ ಬಿದ್ದ 2 ಮನೆಗಳಿಗೆ ಹಾನಿಯಾಗಿದೆ.
ಗ್ರಾಮದ ಚೆಲುವರಾಜು ಮನೆಗೆ ಮರವೊಂದು ಬುಡಸಮೇತ ಬಿದ್ದು ಹಾನಿ ಮಾಡಿದ್ದು. ಪಕ್ಕದಲ್ಲೇ  ಅಂಬಿಕಾ ಅವರ ಮಳೆ ಗೆ ವಿದ್ಯುತ್ ಕಂಬ ಮುರಿದು ಬಿದ್ದು ಹಾನಿ ಉಂಟು ಮಾಡಿದೆ  ಯಾವುದೇ ತೊಂದರೆ ಯಾಗಿಲ್ಲ.
   ಶಾಸಕ ಭೇಟಿ,:  ವಿಷಯ ತಿಳಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿ ,  ಮನೆ ಹಾನಿಗೊಳಗಾದ  ಚೆಲುವರಾಜು ಅವರಿಗೆ 10 ಸಾವಿರ, ಅಂಬಿಕಾ ಅವರಿಗೆ 5 ಸಾವಿರ ರೂ. ವೈಯುಕ್ತಿಕ
ಪರಿಹಾರ ವಿತರಿಸಿದರು. ಅಧಿಕಾರಿಗಳೊಂದಿಗೆ ಮಾತನಾಡಿ, ಸರ್ಕಾರದಿಂದ ಸಿಗುವ ಸವಲತ್ತುಗಳು, ಒಳ್ಳೆಯ ಮನೆ ಕೊಡಿಸಿಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡಿಗಾಲ ನಂಜಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆಕೆ ಹುಂಡಿ ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ದೊರೆಸ್ವಾಮಿ, ‌ಗುರುಸ್ವಾಮಿ, ಪ್ರಭುಸ್ವಾಮಿ,  ವಿಷ್ಣುಪ್ರಸಾದ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *