ವಿಶ್ವ ಆಹಾರ ಸುರಕ್ಷತಾ ದಿನ: ಬಳಸುವಾಗ ಕಾಳಜಿ ಅಗತ್ಯ


ಇತ್ತೀಚಿಗೆ ತಾನೇ ವಿಶ್ವ ಪರಿಸರ ದಿನಾಚರಣೆಯನ್ನು ನಾವು ಆಚರಿಸಿದ್ದೇವೆ. ಈಗ ನಮ್ಮ ಮುಂದೆ ವಿಶ್ವ ಆಹಾರ ಸುರಕ್ಷತಾ ದಿನವೂ ಕೂಡ ಬಂದಿದೆ. ಇದು ಅತ್ಯಂತ ಮಹತ್ವವಾದದ್ದು. ಏಕೆಂದರೆ ನಾವು ಆಹಾರವನ್ನು ಹೇಗೆ ಸೇವಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ ಇಂದು ಆಹಾರ ಎಲ್ಲರಿಗೂ ಸುಲಭವಾಗಿ ಸಿಗುತ್ತಿಲ್ಲ. ಆದರೆ ಸಿಕ್ಕರೂ ಕೂಡ ಅದು ಕಲಬೆರಿಕೆಯಾಗಿರುತ್ತದೆ. 
            ನಾವು ದಿನನಿತ್ಯ ಮನೆಯಲ್ಲಿ ಒಂದಲ್ಲ ಒಂದು ರೀತಿಯ ಆಹಾರ ಪದಾರ್ಥಗಳನ್ನು ಮಾಡಿ ತಿನ್ನುತ್ತೇವೆ. ಆದರೆ ಅದು ಮಿತಿಯಲ್ಲಿರಬೇಕು ಆ ದಿನ ನಾವು ಎಷ್ಟು ಆಹಾರವನ್ನು ಸೇವಿಸುತ್ತೇವೆ? ಎಷ್ಟು ಜನರಿಗೆ ಆಹಾರದ ಅವಶ್ಯಕತೆ ಇದೆ? ಎನ್ನುವುದನ್ನು ಮೊದಲೇ ಯೋಚಿಸಿ ಅಷ್ಟೇ ಅಡುಗೆ  ಮಾಡಿ ಬಳಸುವಂತಾಗಬೇಕು.
         ಎಷ್ಟೋ ಜನರಿಗೆ ದಿನದ ಒಂದು ಹೊತ್ತಿಗೂ ಕೂಡ ಆಹಾರ ಸಿಗದೇ ಹಸಿವಿನಿಂದ ಕಾಲ ಕಳೆಯುವವರು ಮಂದಿ ಹೆಚ್ಚಾಗಿ ಇದ್ದಾರೆ. 
           ಈ ನಡುವೆ ನಾವು ಆಹಾರವನ್ನು ಸುರಕ್ಷಿತವಾಗಿ ಬಳಸುವುದರ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಬಳಸುವಂತಾಗಬೇಕು. ಜೊತೆಗೆ ಹಸಿದವರಿಗೆ ಆಹಾರವನ್ನು ನೀಡುವಂತಾಗಬೇಕು. ಆಗಿದ್ದಲ್ಲಿ ಮಾತ್ರ ನಾವು ಆಹಾರದ ಪ್ರಾಮುಖ್ಯತೆಯನ್ನು ಹಲವರಿಗೆ ತಿಳಿಸಬಹುದಾಗಿದೆ. 
        ಸಕಲ ಜೀವಕೋಟಿ ರಾಶಿಗಳಿಗೂ ಕೂಡ ಆಹಾರ, ನೀರು, ಗಾಳಿ, ಅವಶ್ಯಕವಾಗಿ ಬೇಕು. ಇದು ಮೂಲಭೂತ ವ್ಯವಸ್ಥೆಯಾಗಿದೆ. ಆಹಾರ ಸರಪಳಿಯ ಎಲ್ಲಾ ಹಂತಗಳಲ್ಲಿ ಆಹಾರ ಶಿಷ್ಟಾಚಾರ ಮತ್ತು ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ವಿಶ್ವಸಂಸ್ಥೆ ವಿಶ್ವ ಆಹಾರ ಸುರಕ್ಷತಾ ದಿನವನ್ನು ಸ್ಥಾಪಿಸಿತು.
         ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ..... ನಾವು ಸೇವಿಸುವ ಆಹಾರವು ಉತ್ಪಾದನೆಯ ಹಂತದಿಂದ  ನಮ್ಮ ಬಾಯಿಗೆ ತಲುಪುವ ಮೊದಲು ಏನೆಲ್ಲ ಕ್ರಮ, ಸಮಸ್ಯೆ, ನೋವು ಅನುಭವಿಸುತ್ತೇವೆ! ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. 
          ಎಲ್ಲವೂ ಕೂಡ ಬೆಳೆಯುವ ರೈತನಿಗೆ ಗೊತ್ತು. ಆರ್ಥಿಕತೆಯ ಬೆನ್ನೆಲುಬಾದ  ರೈತ ಇಂದು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಬೆಳೆದು, ಇಡೀ ದೇಶಕ್ಕೆ ಅನ್ನ ನೀಡುತ್ತಾನೆ. ಇದರಿಂದಾಗಿ ರೈತನನ್ನು "ಅನ್ನದಾತ" ಎಂದೂ ಕೂಡ ಕರೆಯುತ್ತಾರೆ. ಆದರೆ ಅನ್ನದಾತನ ಶ್ರಮಕ್ಕೆ ಈಗ ಬೆಲೆ ಇಲ್ಲದಂತಾಗಿದೆ. ಏಕೆಂದರೆ ನಾವು ಆಹಾರವನ್ನು ಬಳಸುವಾಗ ಎಚ್ಚರಿಕೆ ವಹಿಸುವುದೇ ಇಲ್ಲ. ಹೆಚ್ಚಾಗಿ ಹಾಕಿಸಿಕೊಂಡು ತಟ್ಟೆಯಲ್ಲಿ ಬಿಡುವ ಸಂಸ್ಕೃತಿಯನ್ನು ನಾವು ಬೆಳೆಸಿಕೊಂಡಿದ್ದೇವೆ.
           ನೋಡಿ ಒಬ್ಬ ರೈತ ಆಹಾರವನ್ನು ಬೆಳೆಯುವುದರಿಂದ ಹಿಡಿದು ಅಂದರೆ ಅವುಗಳ ಕೊಯ್ಲು, ಸಂಸ್ಕರಣೆ, ಸಂಗ್ರಹಣೆ, ವಿತರಣೆ ಮತ್ತು ತಯಾರಿಕೆ ಈ  ಪ್ರಕ್ರಿಯೆಗಳನ್ನು ನಡೆಸಲೇಬೇಕು. ಹಾಕಿದ ಬಿತ್ತನೆ ಸರಿಯಾಗಿ ಮೊಳಕೆ ಹೊಡೆಯಲು ಮಳೆ ಬರಬೇಕು.... ಮಳೆ ಬಂದರೂ ಅದಕ್ಕೆ ಸರಿಯಾಗಿ ಗೊಬ್ಬರ ಹಾಕಬೇಕು.... ಕಳೆ ತೆಗೆದು ಮತ್ತೆ ಉಳುಮೆ ಮಾಡಬೇಕು..... ನಂತರ ಬೆಳೆದ ಬೆಳೆಯನ್ನು ಸರಿಯಾದ ಸಮಯಕ್ಕೆ ಕಟಾವು ಮಾಡಬೇಕು..   . ಕಟಾವು ಮಾಡಿದ ಬೆಳೆಯನ್ನು ಒಕ್ಕಣೆ ಮಾಡಿ, ಶೀಘ್ರವಾಗಿ ಮಾರುಕಟ್ಟೆಗೆ ತಲುಪಿಸುವಂತಹಾಗಬೇಕು. ... ಇಲ್ಲದಿದ್ದರೆ ಬೆಳೆದ ಬೆಳೆ ನಾಶವಾಗುತ್ತದೆ!. ಇವುಗಳೆಲ್ಲದರ ಜೊತೆಗೆ ಜೊತೆಗೆ  ದಲ್ಲಾಳಿಗಳ ಕಾಟ ಬೇರೆ!. ಮತ್ತೆ ನಿಗದಿಯಾಗದ ಬೆಂಬಲ ಬೆಲೆ, ಹೀಗೆ ಒಂದೇ ಎರಡೇ? ನೂರಾರು ಸಮಸ್ಯೆಗಳು ರೈತನಿಗೆ ತಲೆದೋರುತ್ತವೆ. 
        ಈ ದೀರ್ಘ ಸರಪಣಿ ಯಲ್ಲಿ ಆಹಾರ ಮಾಲಿನ್ಯದ ಹಲವಾರು ಸಾಧ್ಯತೆಗಳು ಕೂಡ ನಮ್ಮಲ್ಲಿ ಕಂಡುಬರುತ್ತವೆ. ಆಹಾರ ಅಸುರಕ್ಷತೆ ನಾವು ಊಹಿಸುವುದಕ್ಕಿಂತ ಹೆಚ್ಚು ಘೋರವಾಗಿದೆ. ಒಂದು ಅಂಕಿ ಅಂಶದ ಪ್ರಕಾರ ವಾರ್ಷಿಕವಾಗಿ ಅಂದಾಜು 600 ಮಿಲಿಯನ್ ನಷ್ಟು ಆಹಾರದಿಂದ ಬರುವ ಕಾಯಿಲೆಗಳು ದಾಖಲಾಗುತ್ತವೆ. 
          ಆದ್ದರಿಂದಾಗಿ ಆಹಾರ ಸುರಕ್ಷತೆಯು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದ ಪರಿಕಲ್ಪನೆಯಾಗಿದೆ. ನಾವು ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುವಲ್ಲಿ ಸುರಕ್ಷಿತ ಆಹಾರವು ಒಂದು ಪ್ರಮುಖವಾದ ಅಂಶವಾಗಿದೆ. ಆಹಾರ ಸುರಕ್ಷತಾ ಕಾರ್ಯವಿಧಾನಗಳ ಬಳಕೆಯ ಮೂಲಕ ಆಹಾರ ವಿಷವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. 
            ನಾವು ಯಾವುದೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಅದರ ಅವಧಿ ಮುಗಿದಿದೆಯೇ ಎಂದು ಪರಿಶೀಲಿಸಬೇಕು. ಕಡಿಮೆಗೆ ಸಿಗುತ್ತದೆ ಎಂದು ನಾವು ಆಸೆಪಟ್ಟು ಕೊಂಡುಕೊಳ್ಳಬಾರದು.
          ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಓ) ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಓ) ಹಾಗು ಆಹಾರ ಮತ್ತು ಔಷಧ ಆಡಳಿತ (ಎಫ್ ಡಿ ಎ) ಇತ್ಯಾದಿ ಸಂಸ್ಥೆಗಳನ್ನು ಆಹಾರ ಸುರಕ್ಷತಾ ಪ್ರಕ್ರಿಯೆಗಳು ಮತ್ತು ಕಾನೂನುಗಳನ್ನು ನಿಯಂತ್ರಿಸಲು ಸ್ಥಾಪಿಸಲಾಗಿದೆ. 
          ನಮ್ಮ ಆಹಾರವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆಗಳು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಕೂಡ ಅವುಗಳಿಗೆ ಹೆಚ್ಚಿನವರು ನೀಡದೆ ನಾವು ಕೂಡ ಆ ಕಾರ್ಯಕ್ಕೆ ಎಲ್ಲರ ಸಹಕಾರ ಕಾಳಜಿ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿ ಆಗಬೇಕಾಗಿದೆ. 
           ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕೂಡ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. 
         ಇಲ್ಲಿ ನಾನು ಮೊದಲೇ ಹೇಳಿದಂತೆ ಗಮನಿಸಬೇಕಾದ ಅಂಶವೆಂದರೆ........ ಪ್ರತಿದಿನವೂ ಏನಾದರೂ ಒಂದು ದಿನಾಚರಣೆ ಇದ್ದೇ ಇರುತ್ತದೆ. ಆದರೆ ಆ ದಿನದಂದು ನಾವು ಆ ವಿಷಯದ ಬಗ್ಗೆ ಯೋಚಿಸಿ, ನಂತರ ಅದನ್ನು ಮರೆಯುತ್ತೇವೆ. 
          ಈ ರೀತಿ ವಿಶ್ವ ಆಹಾರ ಸುರಕ್ಷಿತ ದಿನ ಆಗಬಾರದು. ಅದರಿಂದ ಹೊರಬಂದು ನಾವು ಆದಷ್ಟು ಪ್ರತಿದಿನವೂ ನಾವು ಬಳಸುವ ಆಹಾರ ಎಷ್ಟು ಸುರಕ್ಷತೆ ಇದೆ ಎಂಬುದನ್ನು ಪರಿಶೀಲಿಸುತ್ತಿರಬೇಕು. 
         ಮನೆಯಲ್ಲಿ ಮಹಿಳೆಯರು ಆಹಾರವನ್ನು ತಯಾರು ಮಾಡುವಾಗ ಬಹಳ ಮುನ್ನೆಚ್ಚರಿಕೆ ವಹಿಸಲೇಬೇಕು. ಏಕೆಂದರೆ ಅಡುಗೆ ಮನೆಯಲ್ಲಿ ಜಿರಳೆ, ಹಲ್ಲಿ ಮುಂತಾದವುಗಳು ಅದರಲ್ಲಿ ಸೇರಿ ಆಹಾರವೇ ವಿಷವಾಗಬಹುದು. ಈ ರೀತಿ ಅನೇಕ ಉದಾಹರಣೆಗಳು ಈಗಾಗಲೇ ನಡೆದಿವೆ. 
         ಅದರಿಂದಾಗಿ ನಾವು ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ, "ಅಡುಗೆ ಮನೆಯೇ ಮೊದಲ ಸ್ವಚ್ಛತೆಯ ತಾಣವಾಗಬೇಕು"- ಏಕೆಂದರೆ ಅಲ್ಲಿ ಉತ್ಪತ್ತಿಯಾಗುವ ಆಹಾರವನ್ನು ಮನೆ ಮಂದಿಯಲ್ಲಾ ಸೇವಿಸಬೇಕಾಗುತ್ತದೆ.
           ನಾವು ಮಾರುಕಟ್ಟೆಯಿಂದ ತರುವ ತರಕಾರಿ, ಹಣ್ಣು ಹಂಪಲ ಎಲ್ಲವನ್ನು ಕೂಡ ಸ್ವಚ್ಛವಾಗಿ ತೊಳೆದು, ನಂತರ ಉಪಯೋಗಿಸಬೇಕು. ಅದೇ ರೀತಿ ಯಾವುದೇ ಪದಾರ್ಥಗಳನ್ನು ಖರೀದಿ ಮಾಡಿದಾಗಲೂ ಅವುಗಳನ್ನು ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ, ಸುರಕ್ಷಿತವಾಗಿ ಬಳಸುವಂತಾಗಬೇಕು. 
         ಆಹಾರವನ್ನು ನಿಯಮಿತವಾಗಿ ಬೇಯಿಸಬೇಕು ಹೆಚ್ಚು ಬೇಯಿಸಿ ಅದು ಕರಗಲು ಆದಾಗ ಆ ಪದಾರ್ಥವು ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಜೊತೆಗೆ ನಮ್ಮ ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಗದಿತ ಸ್ಥಳದಲ್ಲಿ ಕೂಡ ಅದನ್ನು ಹಾಕಿ ಅವನ್ನು ಮತ್ತಷ್ಟು ಪ್ರಾಣಿ- ಪಕ್ಷಿಗಳು ಸುರಕ್ಷಿತವಾಗಿ ತಿಂದು ಹೋಗುವಂತೆ ನೋಡಿಕೊಳ್ಳಬೇಕು. ಅವು ಕೂಡ ಬದುಕುತ್ತವೆ ಅಲ್ಲವೇ?.
          ಈ ರೀತಿ  ಮನೆಯಲ್ಲೇ ನಾಲ್ಕೈದು ದಿನಗಳಲ್ಲಿ ಬಳಸಿ ಅದು ಗಬ್ಬು ನಾರುತ್ತಿರುವ ವ್ಯವಸ್ಥೆಯಲ್ಲಿ ಇರುವಾಗ ಅದನ್ನು ನಾವು ಪ್ರಕೃತಿಗೆ ಸೇರಿಸಿದರೆ ಅವನ್ನೂ ತಿಂದ ಪ್ರಾಣಿ- ಪಕ್ಷಿಗಳು ಕೂಡ ಸಾವನ್ನಪ್ಪಿರುವ ಘಟನೆಗಳು ಕೂಡ ನಡೆದಿವೆ.
         ಸಂಜೀವಿನಿ ಯಂತಿರುವ ಆಹಾರ ಕ್ಷಣ ಮಾತ್ರದಲ್ಲಿ ವಿಷಮಯವಾಗುತ್ತದೆ.     
         ಇನ್ನೊಂದು ಪ್ರಮುಖವಾಗಿ ಹೇಳಲೇಬೇಕಾದ ಅಂಶವೆಂದರೆ...... ಇಂದಿನ ಯಾಂತ್ರಿಕ ಜೀವನದಲ್ಲಿ, ಒತ್ತಡದ ಜೀವನದಲ್ಲಿ ನಾವು ಆಹಾರವನ್ನು ತಯಾರು ಮಾಡುವಾಗ ಯಾವುದೇ ರೀತಿ ಎಚ್ಚರಿಕೆ ವಹಿಸುತ್ತಿಲ್ಲ. ಆತುರಾತುರವಾಗಿ ಆಹಾರವನ್ನು ತಯಾರು ಮಾಡಿ, ಆತುರ ಆತುರವಾಗಿ ತಿನ್ನುತ್ತಾ ಬರುತ್ತಿದ್ದೇವೆ. ಇದು ಒಂದೆಡೆಯಾದರೆ....... ಮತ್ತೊಂದೆಡೆ ಮೇಲಿನ ಸಮಸ್ಯೆಯಿಂದಾಗಿ ಅವರು ಆಹಾರವನ್ನು ತಯಾರು ಮಾಡಲು ಕೂಡ ಸಮಯ ಸಿಗುತ್ತಿಲ್ಲ!. ಇದರಿಂದಾಗಿ ಹೆಚ್ಚಾಗಿ ನಾವು ಹೋಟೆಲ್ಗಳಿಗೆ ಮೊರೆಹೋಗಿದ್ದೇವೆ. 
            ಈಗಂತೂ ಬೀದಿ ಬೀದಿಗೆ ಒಂದು ಫಾಸ್ಟ್ ಫುಡ್ ಅಂಗಡಿಗಳು ಕೈಬೀಸಿ ಕರೆಯುತ್ತವೆ. ಅವರೆಲ್ಲ ಹಣದಾಸೆಗಾಗಿ ಕಳಪೆ ಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ಅವಕ್ಕೆ ಟೇಸ್ಟಿ ಪೌಡರ್, ಇನ್ನಿತರ ಬಣ್ಣ ಬಣ್ಣದ ರಾಸಾಯನಿಕ ಪದಾರ್ಥಗಳನ್ನು ಹೆಚ್ಚು ಹೆಚ್ಚು ಹಾಕುತ್ತಾರೆ. ಈ ರೀತಿಯಾಗಿ ಗ್ರಾಹಕರನ್ನು ಸೆಳೆಯುವ ಮಟ್ಟವನ್ನು ತಲುಪಿದೆ.
        ಜೊತೆಗೆ ಅವರು ಆಹಾರ ತಯಾರು ಮಾಡುವಲ್ಲೂ ಕೂಡ ಶುಚಿಯಾದ ವಾತಾವರಣ ನಿರ್ಮಾಣವಾಗಿರುವುದಿಲ್ಲ. ಆಹಾರವನ್ನು ಮಾಡಲು ಬಳಸುವ ಪಾತ್ರೆಗಳು, ನೀರು, ಆ ಸ್ಥಳ, ವ್ಯಕ್ತಿ ಎಲ್ಲರೂ ಕೂಡ ಆಹಾರ ವಿಷವಾಗಲು ಪರೋಕ್ಷವಾಗಿ ನೆರವಾಗುತ್ತಿದ್ದಾರೆ. 
        ಪರಿಸ್ಥಿತಿ ಹೀಗಿರುವಾಗ ನಾವು ಹೋಟೆಲ್ಗಳಲ್ಲಿ ಸುರಕ್ಷತೆಯ ಆಹಾರವನ್ನು ಸೇವಿಸುತ್ತಾ ಇದ್ದೇವೆಯೇ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಹಲವು ಹೋಟೆಲ್ ಗಳು ಶುಚಿತ್ವಕ್ಕೆ ಆದ್ಯತೆ ಕೊಡುತ್ತವೆ. ಆದರೂ ಕೂಡ ಸೇವಿಸಿದರೆ ಅದು ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತವೆ. ಬಾಯಿ ಚಪಲಕ್ಕೆ ಆಹಾರವನ್ನು ಸೇವಿಸಿದ ನಾವು ವೈದ್ಯರ ಬಳಿಗೆ ಹೋಗಿ ಹೆಚ್ಚು ಹಣ ತೆರಬೇಕಾಗುತ್ತದೆ. ಮತ್ತೆ ನಾವು ಮಾತ್ರೆ, ಇಂಜೆಕ್ಷನ್ ಎಂಬ ಮತ್ತಷ್ಟು ವಿಷಕಾರಿ ಅಂಶಗಳನ್ನು ಕೂಡ ದೇಹಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. 
          ಇವನ್ನೆಲ್ಲ ಗಮನಿಸುತ್ತಾ ಹೋದರೆ ನಾವು ಬಾಣಲಿಯಿಂದ ಬೆಂಕಿಗೆ ಬೀಳುತ್ತಿದ್ದೇವೆ ಏನೋ ಎಂದನಿಸುತ್ತದೆ!.
       ಅತಿಯಾದರೆ ಅಮೃತವು ವಿಷ!. ನಾವು ಬಳಸುವ ಆಹಾರ ವಿಷವಾಗಿ ಪರಿಣಮಿಸಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಾವು ಯಾವುದೇ ಆಸ್ಪತ್ರೆಗೆ ಹೋದರೆ ಮೊದಲು ಹೇಳುವುದೇ ವೈದ್ಯರು ಆಹಾರ ಮತ್ತು ನೀರನ್ನು ಸರಿಯಾಗಿ, ಶುಚಿಯಾಗಿ ಸೇವಿಸಿ ಇದರಿಂದ ನಾವು ಅನೇಕ ಸಮಸ್ಯೆಗಳಿಂದ ದೂರ ಸರಿಸಬಹುದು ಎಂದು ಸಲಹೆ ಸೂಚನೆ ನೀಡುತ್ತಾರೆ.
            ಈ ದಿನಗಳಲ್ಲಿ

“ಆಹಾರ ಸುರಕ್ಷತೆ, ಪ್ರತಿಯೊಬ್ಬರ ವ್ಯವಹಾರ” ಎಂಬ ಘೋಷಣೆಯಡಿಯಲ್ಲಿ, ಕ್ರಿಯಾ-ಆಧಾರಿತ ಅಭಿಯಾನವು ಜಾಗತಿಕ ಆಹಾರ ಸುರಕ್ಷತೆಯ ಜಾಗೃತಿಯನ್ನು ಉತ್ತೇಜಿಸುತ್ತದೆ. ಮತ್ತು ದೇಶಗಳು ಮತ್ತು ನಿರ್ಧಾರ ತಯಾರಕರು, ಖಾಸಗಿ ವಲಯ, ನಾಗರಿಕ ಸಮಾಜ, UN ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಕ್ರಮ ಕೈಗೊಳ್ಳಲು ಕರೆ ನೀಡುತ್ತದೆ.
ಆಹಾರವನ್ನು ಉತ್ಪಾದಿಸುವ, ಸಂಗ್ರಹಿಸುವ, ನಿರ್ವಹಿಸುವ ಮತ್ತು ಸೇವಿಸುವ ವಿಧಾನವು ನಮ್ಮ ಆಹಾರದ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಆಹಾರ ಮಾನದಂಡಗಳನ್ನು ಅನುಸರಿಸುವುದು, ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಸೇರಿದಂತೆ ಪರಿಣಾಮಕಾರಿ ನಿಯಂತ್ರಕ ಆಹಾರ ನಿಯಂತ್ರಣ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಶುದ್ಧ ನೀರಿನ ಪ್ರವೇಶವನ್ನು ಒದಗಿಸುವುದು, ಉತ್ತಮ ಕೃಷಿ ಪದ್ಧತಿಗಳನ್ನು ಅನ್ವಯಿಸುವುದು (ಭೂಮಿಯ, ಜಲಚರ, ಜಾನುವಾರು, ತೋಟಗಾರಿಕೆ), ಆಹಾರ ವ್ಯಾಪಾರ ನಿರ್ವಾಹಕರಿಂದ ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆಗಳ ಬಳಕೆಯನ್ನು ಬಲಪಡಿಸುವುದು , ಮತ್ತು ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಲು ಗ್ರಾಹಕರ ಸಾಮರ್ಥ್ಯವನ್ನು ನಿರ್ಮಿಸುವುದು ಸರ್ಕಾರಗಳು, ಅಂತರಾಷ್ಟ್ರೀಯ ಸಂಸ್ಥೆಗಳು, ವಿಜ್ಞಾನಿಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವು ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ಕೆಲವು ವಿಧಾನಗಳಾಗಿವೆ.
ಆಹಾರ ಸುರಕ್ಷತೆಯು ಸರ್ಕಾರಗಳು, ಉತ್ಪಾದಕರು ಮತ್ತು ಗ್ರಾಹಕರ ನಡುವಿನ ಹಂಚಿಕೆಯ ಜವಾಬ್ದಾರಿಯಾಗಿದೆ. ನಾವು ಸೇವಿಸುವ ಆಹಾರವು ಸುರಕ್ಷಿತವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರ ಪಾತ್ರವು ಇರುತ್ತದೆ. ವಿಶ್ವ ಆಹಾರ ಸುರಕ್ಷತಾ ದಿನದ ಮೂಲಕ, WHO ಮತ್ತು FAO ಸಾರ್ವಜನಿಕ ಕಾರ್ಯಸೂಚಿಯಲ್ಲಿ ಆಹಾರ ಸುರಕ್ಷತೆಯ ಮುಖ್ಯವಾಹಿನಿಯ ಪ್ರಯತ್ನಗಳನ್ನು ಅನುಸರಿಸುತ್ತದೆ ಮತ್ತು ಜಾಗತಿಕವಾಗಿ ಆಹಾರದಿಂದ ಹರಡುವ ರೋಗಗಳ ಹೊರೆಯನ್ನು ಕಡಿಮೆ ಮಾಡುತ್ತದೆ.
ಮತ್ತೊಂದು ಅಂಕಿ ಅಂಶಗಳ ಪ್ರಕಾರ ಒಂದು ದಿನದಲ್ಲಿ ಸರಾಸರಿ 1 600 000 ಜನರು ಅಸುರಕ್ಷಿತ ಆಹಾರದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ಪ್ರತಿ ದಿನ ಸರಾಸರಿ 340
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಡೆಗಟ್ಟಬಹುದಾದ ಆಹಾರದಿಂದ ಹರಡುವ ರೋಗಗಳಿಂದ ಸಾಯುತ್ತಾರೆ.
ಅಸುರಕ್ಷಿತ ಆಹಾರದಿಂದ ಉಂಟಾಗುವ 200
ರೋಗಗಳು, ಅತಿಸಾರದಿಂದ ಹಿಡಿದು ಕ್ಯಾನ್ಸರ್‌ಗಳವರೆಗೆ ಒಂದಲ್ಲ ಒಂದು ರೋಗಗಳಿಗೆ ಕಾರಣವಾಗುತ್ತದೆ.
ಆಹಾರದ ಮಾನದಂಡಗಳು ಜೀವಗಳನ್ನು ಉಳಿಸುತ್ತವೆ
ವಿಶ್ವ ಆಹಾರ ಸುರಕ್ಷತಾ ದಿನವು ಆಹಾರದ ಗುಣಮಟ್ಟವನ್ನು ಗಮನ ಸೆಳೆಯುತ್ತದೆ. ಆಹಾರದಿಂದ ಹರಡುವ ರೋಗಗಳು ಪ್ರತಿ ವರ್ಷ ವಿಶ್ವಾದ್ಯಂತ 10 ಜನರಲ್ಲಿ 1 ಜನರನ್ನು ಬಾಧಿಸುತ್ತವೆ ಮತ್ತು ನಾವು ತಿನ್ನುವುದನ್ನು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ಆಹಾರದ ಮಾನದಂಡಗಳು ನಮಗೆ ಸಹಾಯ ಮಾಡುತ್ತವೆ.
ಜೊತೆಗೆ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು, ಪರಾವಲಂಬಿಗಳು ಅಥವಾ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ.
ಬನ್ನಿ ಇವತ್ತಿನಿಂದಾದರೂ ಕೂಡ ನಾವು ಈ “ವಿಶ್ವ ಆಹಾರ ಸುರಕ್ಷತಾ ದಿನ”-ದಂದು ಸಂಕಲ್ಪ ಮಾಡೋಣ. ಏಕೆಂದರೆ ನಮ್ಮ ಹಳೆಯ ಆಹಾರ ಪದ್ಧತಿಗಳನ್ನು ಗಮನಿಸಿದರೆ ಹಳೆಯ ಕಾಲದವರೆಲ್ಲ ಹಲವರು ಶತಾಯುಷಿಗಳಾದರು!. ಜೊತೆಗೆ ದೀರ್ಘಾಯುಷ್ಯವನ್ನು ಕೂಡ ಪಡೆದಿದ್ದಾರೆ. ಯಾವುದೇ ರೋಗರುಜಿನಗಳು ಕೂಡ ಬಂದಿಲ್ಲ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಹಲವರು ಆಸ್ಪತ್ರೆ ಮೆಟ್ಟಿಲು ಹತ್ತಿರುವುದಿಲ್ಲ. ಆದರೆ ಈಗ ಚಿಕ್ಕವಯಸಿನಲ್ಲೇ ನಾವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದೇವೆ. ಏನಾದರೂ ಸಮಸ್ಯೆಗಳಾದರೆ ಮನೆಯಲ್ಲೇ ತಾವು ಬೆಳೆಯುವ, ತಮ್ಮ ಸುತ್ತಮುತ್ತ ಸಿಗುವ ಪದಾರ್ಥಗಳಿಂದ ರೋಗ ಗುಣಪಡಿಸಿಕೊಳ್ಳುತ್ತಿದ್ದರು. ಆದರೆ ಈಗ ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಆದರೆ ಸಾಕು ನಾವು ವೈದ್ಯರ ಬಳಿಗೆ ಓಡುತ್ತೇವೆ. ನಾವು ಮನೆಯಲ್ಲೇ ಸಣ್ಣಪುಟ್ಟ ಮದ್ದುಗಳನ್ನು ಮಾಡಿಕೊಂಡು ನಂತರ ಹೆಚ್ಚಿನ ಒಂದು ತಪಾಸಣೆಗೆ ವೈದ್ಯರುಗಳಿಗೆ ಹೋಗಬೇಕು.
ಆದಷ್ಟು ನಾವು ಮನೆಯಲ್ಲಿ ಮಾಡಿದ ಪದಾರ್ಥಗಳನ್ನು ಉಪಯೋಗಿಸೋಣ. ಈ ಮಸಾಲೆ ಪದಾರ್ಥ, ಜಂಕ್ ಫುಡ್, ಫಾಸ್ಟ್ ಫುಡ್ ಗಳಿಂದ ದೂರವಿರೋಣ. ದಿನಕ್ಕೆ ನಿಯಮಿತವಾಗಿ ಯೋಗ, ವ್ಯಾಯಾಮ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿ ಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಇದು ನಮ್ಮ ಕೈಯಲ್ಲಿರುತ್ತದೆ.


-ಕಾಳಿಹುಂಡಿ ಶಿವಕುಮಾರ್, ಮೈಸೂರು

Leave a Reply

Your email address will not be published. Required fields are marked *