
ಭಾರತದ ಹೆಗ್ಗುರುತನ್ನು ಸಾರುವ ಅದೆಷ್ಟೋ ಪವಾಡ ಸದೃಶಗಳು ನಮ್ಮ ದೇಶದಲ್ಲಿ ನಡೆದಿರುವುದು ಉಲ್ಲೇಖನೀಯ. ಅಂತಹದ್ದು ಭಾರತದ ಮಟ್ಟಿಗೆ ಸುಕೃತವೆಂದೆ ಭಾವಿಸಬಹುದು. ಭಾರತವು ವಿಶ್ವಕ್ಕೆ ಮಾದರಿಯಾಗಿ ಹಲವಾರು ಕಾಣಿಕೆಯನ್ನು ನೀಡಿರುವುದು ಸರಿಯಷ್ಟೆ, ಅಂತೆಯೇ ಭಾರತವು ಮನಸ್ಸನ್ನು ಸಾಂತ್ವಾನಗೊಳಿಸಬಲ್ಲ “ಯೋಗ” ಎಂಬುದನ್ನು ವಿಶ್ವಕ್ಕೆ ನೀಡಿದ ಕೊಡುಗೆಯಾಗಿದೆ. ವಿಶ್ವವೇ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಭಾರತದ ಅಗ್ಗಳಿಕೆಯೇ ಸರಿ. “ಯೋಗ” ಎಂದರೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗುವುದು ಎಂದರ್ಥ. ಮತ್ತೊಂದು ಬಗೆಯಲ್ಲಿ ಹೇಳುದಾದರೆ ಪ್ರತಿಯೊಬ್ಬ ವ್ಯಕ್ತಿಯ ಅಂತಶಕ್ತಿಯನ್ನು ಒಂದು ಬಗೆಯ ಸಂತುಲಿತ ಬಗೆಯಲ್ಲಿ ವೃದ್ಧಿಪಡಿಸಲು ರೂಢಿಸಿಕೊಳ್ಳುವ ವಿಧಾನವಾಗಿದೆ. ಸಂಸ್ಕೃತದ ಯೋಗ ಎಂಬ ಪದವು ನಿಯಂತ್ರಿಸು, ಐಕ್ಯವಾಗು ಅಥವಾ ಒಗ್ಗಟಾಗು ಎಂಬ ಇತರ ಅನೇಕ ಅರ್ಥಗಳನ್ನು ಹೊಂದಿದ್ದು, ಸಂಸ್ಕೃತದ ‘ಯುಜ್’ ಎಂಬುದರಿAದ ವ್ಯುತ್ಪತ್ತಿಯಾಗಿದೆ. ಇದರ ಭಾಷಾಂತರ ಪ್ರಕ್ರಿಯೆಯಲ್ಲಿ ಸೇರಿಸುವಿಕೆ ಜೊತೆಗೂಡುವಿಕೆ, ಸಂಯೋಗ, ಒಕ್ಕೂಟ, ಉಪಕರಣ ಅಥವಾ ನಿಮಿತ್ತ ಪದಗಳಾಗಿ ಬಳಕೆಯಲ್ಲಿವೆ. ಅಂದರೆ ಯೋಗವು ವೈಯಕ್ತಿಕ ಆತ್ಮವನ್ನು ಭಗವಂತನ ವಿಶ್ವಾತ್ಮದೊಂದಿಗೆ ಜೊತೆಯಾಗಿ ಬೆಸೆಯುವ ವಿಧಾನವಾಗಿದೆ. ಕೆಲವು ಕಡೆ ಯೋಗವನ್ನು ವ್ಯಾಯಾಮದ ಒಂದು ಭಾಗವೆಂದು ಪರಿಗಣಿಸುತ್ತಾರೆ. ಒಟ್ಟಾರೆಯಾಗಿ ಯೋಗವೆಂದರೆ ಮನಸ್ಸಿನ ಮೇಲೆ ಆಕ್ರಮಣ ಮಾಡುವ ಚಂಚಲತೆಯನ್ನು ನಿರ್ಬಂಧಗೊಳಿಸುವುದಾಗಿದೆ. ಯೋಗಭ್ಯಾಸ ಮಾಡುವವರನ್ನು ಯೋಗಿ-ಯೋಗಿನಿ ಎಂದು ಕರೆಯುತ್ತಾರೆ. ಹಿಂದೂ, ಜೈನ, ಬೌದ್ಧ ಧರ್ಮಗಳಲ್ಲಿ ಯೋಗವನ್ನು ಧ್ಯಾನ-ತಪಸ್ಸುಗಳ ರೀತಿಯಲ್ಲಿ ಬಳಸುತ್ತಾರೆ.
ಯೋಗದ ಬಗ್ಗೆ ಇರುವ ಪುರಾವೆಗಳು
ಯೋಗವು ಇಂದು-ನೆನ್ನೆಯದಲ್ಲ ಅದು ತನ್ನ ಅಂತರಂಗದಲ್ಲಿ ಬಹಳ ಪುರಾತನವಾದ ಘನ ಚರಿತ್ರೆಯನ್ನು ಗರ್ಭಿಕರಿಸಿಕೊಂಡಿದೆ. ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ವಿದ್ಯೆಯು ಇಂದು ಮೊದಲ ನಾಗರೀಕತೆಗಳ ಕುರುಹುಗಳು ಕಂಡು ಬರುವ ಸಿಂಧೂ ಬಯಲಿನ ನಾಗರೀಕತೆ ಈಗಿನ ಪಾಕಿಸ್ತಾನದ ಕೆಲವು ಸ್ಥಳಗಳಲ್ಲಿ ಯೋಗದ ಮುದ್ರೆ ಇರುವ ಚಿಹ್ನೆಗಳು ದೊರೆತಿವೆ. ಅಂತೆಯೇ ಜೋನಾಥನ್ ಮಾರ್ಕ್ ಕೆನಾಯರ್ ಅವರು ಯೋಗದ ಭಂಗಿಯಲ್ಲಿರುವ ಚಿತ್ರದ ಬಗ್ಗೆ ವರ್ಣಿಸಿದ್ದಾರೆ. ಹಾಗೆಯೇ ಕಾರಲ್ ವರ್ನರ್ ಅವರು ಆರ್ಯರಿಗಿಂತ ಹಿಂದೆ ಭಾರತದ ಜನರಿಗೆ ಯೋಗದ ನಿಯಮ-ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಿದ್ದರು ಎಂಬ ಉಲ್ಲೇಖವನ್ನು ನೀಡುತ್ತಾರೆ. ಗ್ಯಾವಿನ್ ಫ್ಲಡರ್ ಅವರು ಪಶುಪತಿಯು ಕುಳಿತಿರುವ ಚಿತ್ರದ ಭಂಗಿಯನ್ನು ಗಮನಿಸಿ ಯೋಗದ ಒಂದು ಭಂಗಿಯೇ ಅದು ಎಂದು ಅಭಿಪ್ರಾಯಿಸಿದ್ದಾರೆ. ಈ ಎಲ್ಲಾ ವಿದ್ವಾಂಸರ ಹೇಳಿಕೆಗಳು ಮತ್ತು ಸಂಶೋಧನೆಯ ಉಲ್ಲೇಖಗಳನ್ನು ಗಮನಿಸಿದಾಗ ಯೋಗದ ಪೂರ್ವ ಇತಿಹಾಸದ ಅರಿವು ನಮಗಾಗುತ್ತದೆ. ಅಲ್ಲದೆ ಮೊದಲು ಯೋಗಕ್ಕೆ ಒಳಪಟ್ಟವರೇ ಶಿವ ಎಂದು ಹೇಳುತ್ತಾರೆ ಆದ್ದರಿಂದ ಯೋಗದ ಮೊದಲ ಗುರು ಶಿವ. ಮಹಾಭಾರತ, ರಾಮಾಯಣಗಳಲ್ಲು ಹಲವಾರು ಋಷಿ-ಮುನಿಗಳು ಧ್ಯಾನ, ತಪಸ್ಸುಗಳಲ್ಲಿ ನಿರತವಾಗಿ ದೇವರನ್ನೆ ಹೊಲಿಸಿಕೊಂಡ ಎಷ್ಟೋ ವಿಚಾರಗಳು ತಿಳಿದು ಬರುತ್ತವೆ.
ಯೋಗದ ಅಗತ್ಯ ಮತ್ತು ಅದರ ಮಹತ್ವ
ಯೇಗದಾಗ ಎಲ್ಲಾ ಐತಿ ಎಂಬುದೊಂದು ಸೂಕ್ತಿ ಜನಜನಿತವಾಗಿದೆ. ಈ ಮಾತು ಅಕ್ಷರಶಃ ಸತ್ಯವಾದುದಾಗಿದೆ. ಬದುಕಿನ ಆನಂದ ಮತ್ತು ಆರೋಗ್ಯಕ್ಕೆ ಯೋಗವು ಅತ್ಯಗತ್ಯವಾಗಿದೆ. ಪ್ರಾಚೀನ ಭಾರತದ ಕೊಡುಗೆಯಾದ ಯೋಗದ ಅಭ್ಯಾಸದಿಂದ ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯವನ್ನು ಪಡೆದುಕೊಳ್ಳಬಹುದು. ಯೋಗ ಇಂದಿನ ಅವಶ್ಯಕತೆ, ನಾಳೆಯ ಅನಿವಾರ್ಯವಾಗಿದೆ. ಪ್ರಾಚೀನ ಭಾರತೀಯ ಭವ್ಯ ಪರಂಪರೆಯ ಭಾಗವಾದ ಯೋಗವು ವಿದೇಶಿಯರ ಪಾಲಾಗುತ್ತಿದ್ದು, ಅದನ್ನು ಉಳಿಸುವುದಷ್ಟೆ ಅಲ್ಲದೆ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಯೋಗದ ಮಹತ್ವವನ್ನು ಅರಿತಿರಬೇಕು. ಆಧುನಿಕ ಮಾನವ ಒತ್ತಡದ ಬದುಕಲ್ಲಿ ಬದುಕುತ್ತಿದ್ದಾನೆ. ಎಲ್ಲಾ ರೀತಿಯ ಮಾಲಿನ್ಯಕಾರಕಗಳು ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ವಿಷವನ್ನು ತಿಂದು ಬದುಕುವ ಅನಿವಾರ್ಯತೆಯಲ್ಲಿರುವ ಮಾನವ ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ಈ ಚಿಂತಾಜನಕ ಸ್ಥಿತಿ ಧಾವಂತ ಬದುಕಿನಲ್ಲಿ ಧಿಮಂತನAತೆ ನೆರವಾಗಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಒಂದೇ ಅಸ್ತçವೆಂದರೆ ಯೋಗ. ಯೋಗದಿಂದ ಮಾತ್ರ ಮನುಷ್ಯ ಯೋಗ್ಯನಾಗುತ್ತಾನೆ. ಕ್ರಿ.ಪೂ. ೩ನೇ ಶತಮಾನದಲ್ಲಿದ್ದ ಪತಂಜಲಿ ಎಂಬ ಋಷಿಯ ಚಿಂತನೆ ಫಲದಾಯಕದಲ್ಲಿ ಯೋಗವು ಕೇವಲ ಒಂದು ಶಾಸ್ತçವಾಗಿರದೆ ಆಚರಣೆ, ಅನುಸರಣೆಯಲ್ಲಿ ಹವ್ಯಾಸವಾಗಿ ಇಲ್ಲಿಯವರೆಗೆ ಅಂತರ ರಾಷ್ಟಿçÃಯವಾಗಿ ಬೆಳೆದು ಬಂದಿರುವುದೇ ಅದರ ಮಹತ್ವ ಮತ್ತು ಅದರ ಅಗತ್ಯವನ್ನು ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಷ್ಟೇ ಅಲ್ಲದೆ ಭಾವನಾತ್ಮಕ ಉನ್ನತಿಗೆ ಅಗತ್ಯವಾಗಿ ಯೋಗವು ಸಹಕಾರಿಯಾಗಿದೆ. ಯೋಗ ಮಾಡಲು ಇಂತವರೇ ಆಗಬೇಕು ಅಂತ ಏನಿಲ್ಲ. ಈ ಯೋಗವು ತನ್ನ ಆಚರಣೆ ಮತ್ತು ಅಳವಡಿಕೆಯಲ್ಲಿ ಯಾವುದೇ ಸಂಸ್ಕೃತಿ, ಜನಾಂಗ, ರಾಷ್ಟ್ರೀಯತೆ, ಜಾತಿ, ಮತ, ಲಿಂಗ, ದೈಹಿಕವಾದ ತರತಮ ಬೇಧ-ಭಾವವಿಲ್ಲದೆ ಮೇಲು-ಕೀಳು ಎನ್ನದೇ ಎಲ್ಲರನ್ನು ಸಾರ್ವತ್ರಿಕವಾಗಿ ಒಳಗೊಳ್ಳುವುದ್ದರಿಂದ ಪ್ರತಿಯೊಬ್ಬರು ಅನುಸರಿಸುವ ವಿಧಾನವಾಗಿದೆ. ಮನುಷ್ಯ ಮಾನಸಿಕ, ದೈಹಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಇದು ನೆರವಾಗಿದೆ. ಮಾನಸಿಕ ರೋಗ ರುಜಿನಗಳ ನಿವಾರಣೆ, ಮಾದಕ ವಸ್ತುಗಳಿಂದ ದೂರ ಇರುವಿಕೆಗೆ ಸಹಕಾರಿ, ವಿಸ್ಮೃತಿಯ ನಿವಾರಣೆ, ದೈಹಿಕ ಸದೃಢತೆಗಾಗಿ ಯೋಗವು ಅಗತ್ಯವಾಗಿದೆ.
ವಿಶ್ವಸಂಸ್ಥೆಯಲ್ಲಿ ದೇಶದ ಪ್ರಮುಖ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯಲ್ಲಿ ಭಾರತದ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿ ಅವರು ಸಹ ಪಾಲ್ಗೊಂಡು ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ವಿಶ್ವವೇ ರೋಗದಲ್ಲಿ ಬಳಲುತ್ತಿರುವಾಗ ಯೋಗದ ಮಹತ್ವವನ್ನು ಅರಿತು ಅಲ್ಲಿ ಭಾಗವಹಿಸಿದ್ದ ಹಲವು ದೇಶಗಳಲ್ಲಿ ಬಹುತೇಕವಾಗಿ ಸುಮಾರು ೧೯೧ ರಾಷ್ಟçಗಳು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿತು. ಒಂದು ರೀತಿಯಲ್ಲಿ ಹೇಳುವುದಾದರೆ ಎಲ್ಲರನ್ನೂ ಒಟ್ಟುಗೂಡಿಸಿ ಒಂದು ದಿನವನ್ನು ಮೀಸಲಾಗಿಡುವುದು ಸುಲಭ ಮಾತಲ್ಲ. ಆದರೆ ಯೋಗ ಬದುಕಿನ ಆರೋಗ್ಯದ ಯೋಗ ಎಂದು ಅರಿತು ಅಂತಹ ಮಹತ್ವ ಪೂರ್ಣವಾದ ದಿನವನ್ನು ನಿರ್ಧಾರವಾಯಿತು ಆಗೆ ಆಯ್ಕೆಯಾದ ಸುಯೋಗದ ದಿನವೇ ಜೂನ್ ೨೧ ಆಗಿದೆ. ವಿಶ್ವಸಂಸ್ಥೆಯು ಪ್ರತಿ ವರ್ಷದ ಜೂನ್ ೨೧ರಂದು ವಿಶ್ವಯೋಗ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ಯುಗ ಮಾನದಲ್ಲಿ ಮುಂಗಾರಿನ ಆಗಮನವಾಗಿ ಆಷಾಡದ ಗಾಳಿಯಿಂದ ಮೈ-ಮನ ಜಡ್ಡುಗಟ್ಟಿ ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ಕಾಲವಾಗಿದೆ.
ಸೂರ್ಯನ ಪ್ರಖರತೆ ಒಂದೊಂದು ಕಾಲಕ್ಕೆ ಒಂದೊಂದು ಪ್ರದೇಶಕ್ಕೆ ಭಿನ್ನ ರೀತಿಯಾಗಿದ್ದರೂ ಈ ಕಾಲದಲ್ಲಿ ಮಾತ್ರ ಅನೇಕ ರಾಷ್ಟçಗಳಲ್ಲಿ ಜಡತ್ವ ಕಳೆದು ಹೊಸ ಚೈತನ್ಯದ ಹುರುಪು ತುಂಬುವ ಕಾಲ ಜೂನ್ ೨೧. ಈ ದಿನ ದೀರ್ಘಕಾಲ ಹಗಲು ಹೊಂದಿರುವ ದಿನವೂ ಸಹ ಆಗಿದೆ. ಅಲ್ಲದೆ ಸೂರ್ಯಭಿಮುಖವಾಗಿ ದೃಷ್ಠಿ ನೆಟ್ಟು ಧೀಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನವು ಇದಾಗಿದೆ. ಈ ಎಲ್ಲಾ ವಿಶೇಷಗಳನ್ನು ಗಮನದಲ್ಲಿರಿಸಿಕೊಂಡು ಈ ದಿನವನ್ನೇ ವಿಶ್ವಯೋಗ ದಿನವಾಗಿ ಆಚರಿಸುತ್ತಾರೆ. ಈ ದಿನ ಭಾರತೀಯರ ಪಾಲಿಗೆ ದೊಡ್ಡಹಬ್ಬವೇ ಸರಿ. ವಿಶ್ವಸಂಸ್ಥೆ ಎಂದು ಯೋಗಕ್ಕೆ ವಿಶ್ವ ಮನ್ನಣೆಯನ್ನು ನೀಡಿತೊ ಅಂದಿನಿAದ ಪ್ರತಿ ವರ್ಷವು ಜಗತ್ತಿನಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಶಿಕ್ಷಕರು, ಸಂಘ-ಸಂಸ್ಥೆಗಳ ಬಂಧುಗಳು, ರಕ್ಷಣ ಸಿಬ್ಬಂದಿ, ಸೈನಿಕರು ಹೀಗೆ ಪ್ರತಿಯೊಬ್ಬರು ಒಮ್ಮನಸ್ಸಿನಿಂದ ಒಂದೆಡೆ ಕಲೆತು ಯೋಗದಲ್ಲಿ ಪಾಲ್ಗೊಂಡು ವಿಶ್ವಯೋಗ ದಿನವನ್ನು ಯಶಸ್ವಿಗೊಳಿಸುತ್ತಿದ್ದಾರೆ. ಅಲ್ಲದೆ ಯೋಗದಲ್ಲಿಯೇ ದಾಖಲೆ ಬರೆಯಬೇಕೆಂದು ಲಕ್ಷಾಂತರ ಮಂದಿ ಒಂದೇ ಮೈದಾನದಲ್ಲಿ ಯೋಗವನ್ನು ಆಚರಿಸಿದ ಬಗೆಯನ್ನು ಅವಲೋಕಿಸಿದರೆ ಯೋಗದ ಪ್ರಖರತೆ, ಪ್ರಭಾವ, ಪ್ರೇರಣೆ, ಜನರ ಮನಸ್ಥಿತಿ ಅರಿವಾಗದೆ ಇರದು. ಈ ಬಗೆಯಲ್ಲಿ ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ನಿಜವಾಗಿಯು ಅಭಿನಂದನಾರ್ಹರು.
ಯೋಗೇನ ಚಿತ್ತಸ್ಯ ಪದೇನ ವಾಚಾಮ್
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಮ್ ಮುನೀನಾಮ್
ಪತಂಜಲಿಮ್ ಪ್ರಂಜಲಿರಾತೋಸ್ಮಿ
ಅಲ್ಲದೆ ಯೋಗವನ್ನು ಮಾಡುವಾಗ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಸಂಸ್ಕೃತದಲ್ಲಿ ಹಲವು ಶ್ಲೋಕಗಳು ರಚನೆಗೊಂಡಿವೆ. ಪ್ರಮುಖ ಶ್ಲೋಕವನ್ನು ನೋಡುವುದಾದರೆ
೧. ಯೋಗ ಚಿತ್ತವೃತ್ತಿ ನಿರೋಧಃ:- ಅಂದರೆ ಮನಸ್ಸಿನಲ್ಲಾಗುವ ಚಿತ್ತವೃತ್ತಿಗಳನ್ನು ನಿರೋಧಿಸುತ್ತದೆ.
೨. ಯೋಗ ಕರ್ಮಸು ಕೌಶಲಮ್ :-ಅಂದರೆ ಯೋಗದಿಂದಾಗಿ ಮಾಡುವ ಕೆಲಸ ಕೌಶಲಗಳಿಂದ ಕೂಡಿರುತ್ತದೆ.
೩. ಭವಾತಾಪೇನ ತಪ್ತಾನಾಮ್ ಯೋಗೋ ಹಿ ಪರಮೌಷಧಮ್:- ಅಂದರೆ ಭೂಮಿ ಮೇಲೆ ಜನ್ಮತಾಳಿ ಎದುರಾಗುವ ಎಲ್ಲ ಕಷ್ಟ-ನಷ್ಟಗಳಿಗೆ, ನೋವುಗಳಿಗೆ, ದುಃಖ-ದುಮ್ಮಾನಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ದಿವ್ಯ ಔಷಧವೆಂದರೆ ಯೋಗ ಒಂದೇ.
ಯೋಗದಲ್ಲಿ ಸಾಧನೆಗೈದವರು:
ಯೋಗವು ಸರ್ವರನ್ನು ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿರುವುದಲ್ಲದೆ, ಕೆಲವರಂತು ಯೋಗವನ್ನು ಬದುಕಿನ ಭಾಗವೆಂದೆ ಪರಿಗಣಿಸಿದವರು ಇದ್ದಾರೆ. ಅಂತವರು ಕಠೋರವಾದ ಪರಿಣತಿ ಹೊಂದಿ ಯೋಗದಲ್ಲಿ ಯೋಗ್ಯತೆಗಳಿಸಿಕೊಂಡವರಾಗಿದ್ದಾರೆ. ಬಾಬಾ ರಾಮದೇವ್, ಆರ್ಟ್ ಆಫ್ ಲೀವಿಂಗ್ನ ರವಿಶಂಕರ್ ಗುರೂಜಿ, ಭರತ್ ಠಾಕೂರ್, ಬೆಂಗಳೂರಿನ ಎಚ್ ನಾಗೇಂದ್ರ, ಬಿ.ಕೆ.ಎಸ್.ಐಯ್ಯಂಗಾರ್ ಹೀಗೆ ಸಾಕಷ್ಟು ಮಂದಿ ಯೋಗದಲ್ಲಿ ಪರಿಣತಿ ಪಡೆದು ಸಾಧನೆಯ ಸಿದ್ಧಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಅಷ್ಟಾಂಗ ಯೋಗ (ಎಂಟು ಅಂಗಗಳ ಯೋಗ)
ಯೋಗ ಎಂಬ ಶಬ್ಧವನ್ನು ಕೇಳದಾಗ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಪತಾಂಜಲಿ ಮಹರ್ಷಿಗಳು. ಅವರ ಗ್ರಂಥಗಳನ್ನು “ಅಷ್ಟಾಂಗ ಯೋಗ”ವೆಂದು ಕರೆಯುತ್ತಾರೆರಿವರ ಗ್ರಂಥಗಳು ಅಷ್ಟಾಂಗ ಯೋಗದ ವ್ಯವಸ್ಥೆಗೆ ಬುನಾದಿಯಾಗಿವೆ. ಆದ್ದರಿಂದಲೇ ಪತಾಂಜಲಿ ಋಷಿಗಳನ್ನು ಯೋಗದ ಪಿತಮಹಾ ಎಂದು ಕರೆಯುತ್ತಾರೆ. ರಾಜ ಯೋಗದ ಜೀವಾಳವು ಇವೆ ಆಗಿವೆ. ಯಾವುದೇ ಯೋಗವನ್ನು ಮಾಡಲು ಇವು ಅತಿ ಅಗತ್ಯವಾದ ಮೂಲ ನಿಯಮಗಳಾಗಿವೆ. ಅಂತಹ ಅಷ್ಟಾಂಗಗಳು ಯಾವುವೆಂದರೆ
ಅಷ್ಟಾಂಗಗಳು
೧.ಯಮ:- ಇದು ಐದು ಬಗೆಯಲ್ಲಿರುತ್ತದೆ. ಅವುಗಳೆಂದರೆ ಅಹಿಂಸೆ, ಸತ್ಯಪಾಲನೆ, ಅತಿ ಆಸೆ ಪಡದಿರುವುದು, ಇಂದ್ರಿಯ ನಿಗ್ರಹ ಹಾಗೂ ಸ್ವಾಧೀನತೆಯ ನಿಗ್ರಹ
೨. ನಿಯಮ:- ಇದು ಐದು ಬಗೆಯಲ್ಲಿರುತ್ತದೆ. ಅವುಗಳೆಂದರೆ ಶುದ್ಧತೆ, ಸಂತೃಪ್ತಿ, ಸಂಯಮ, ಅಧ್ಯಯನ ಹಾಗೂ ದೇವರಿಗೆ ಸಮರ್ಪಣ ಭಾವ
೩. ಯೋಗಾಸನ :- ಈ ಪದದ ಅರ್ಥ ಪೀಠ, ಕುಳಿತುಕೊಳ್ಳುವುದು, ಪತಂಜಲಿಯವರು ತಮ್ಮ ಸೂತ್ರದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿ ಎನ್ನುವ ಅರ್ಥದಲ್ಲಿ ಈ ಪದವನ್ನು ವಿವರಿಸಿದ್ದಾರೆ.
೪. ಪ್ರಾಣಾಯಾಮ:- ಪದದ ಅರ್ಥ ಉಸಿರನ್ನು ರೇಚಕ ಪೂರಕದಿಂದ ನಿಯಂತ್ರಿಸುವುದು. ಪ್ರಾಣ, ಉಸಿರು, ಆಯಾಮ, ನಿಯಂತ್ರಣ/ನಿಲ್ಲಿಸುವುದು. ಜೀವಶಕ್ತಿಯನ್ನು ನಿಯಂತ್ರಿಸುವುದು ಎಂಬ ಅರ್ಥವು ಸಹ ಇದೆ.
೫. ಪ್ರತ್ಯಾಹಾರ:- ಪದದ ಅರ್ಥ ಆಮೂರ್ತವಾಗಿರುವಿಕೆ ಅಂದರೆ ಯಾವುದೇ ರೀತಿಯ ಬಾಹ್ಯ ವಸ್ತುಗಳಿಂದ ಇಂದ್ರಿಯಗಳನ್ನು ದೂರ ಇಡುವಿಕೆಯಾಗಿದೆ.
೬. ಧಾರಣ:- ಪದದ ಅರ್ಥ ಮನಸ್ಸನ್ನು ಏಕಾಗ್ರ ಚಿತ್ತಗೊಳಿಸುವುದು ಅಂದರೆ ಯಾವುದೇ ಒಂದು ವಸ್ತುವಿನ ಮೇಲೆಯೇ ಗಮನವನ್ನು ಕೇಂದ್ರಿಕರಿಸುವುದು.
೭. ಧ್ಯಾನ:- ಪದದ ಅರ್ಥ ತಪಸ್ವಿಯಾಗಿ ಧ್ಯಾನದಲ್ಲಿ ಮಗ್ನನಾಗುವುದು ಅಂದರೆ ಧ್ಯಾನದ ಗುರಿಯ ಸ್ವಭಾವದತ್ತ ಅತೀವ ಚಿಂತನೆ ಮಾಡುವುದು.
೮. ಸಮಾಧಿ:- ಲೌಕಿಕ ಜಗತ್ತನ್ನು ಮರೆತು ಧ್ಯಾನದ ಗುರಿಯಲ್ಲಿ ತನ್ನನ್ನು ಮಗ್ನನಾನಾಗುವುದು. ಈ ಎಂಟು ನಿಯಮಗಳನ್ನು ಸಮರ್ಪಕವಾಗಿ ಯಾರು ಆಚರಣೆಗೆ ತರುತ್ತಾರೋ ಅವರಿಗೆ ಸಿದ್ಧಿಯ ಯೋಗ ಲಭಿಸುತ್ತದೆ.
ಭಗವದ್ಗೀತೆಯು ಸಹ ಯೋಗವನ್ನು ವಿಶೇಷವಾಗಿ ಬಳಸಿ ವ್ಯಾಪಕವಾದ ಅರ್ಥದಲ್ಲಿ ಬಳಸಲಾಗಿದೆ. ಇದರಲ್ಲಿ ಒಂದು ಅಧ್ಯಾಯವನ್ನೆ ಮೀಸಲಿಟ್ಟು ಸಾಂಪ್ರದಾಯಕ ಯೋಗವನ್ನು ಧ್ಯಾನದೊಂದಿಗೆ ವಿವರಿಸಲಾಗಿದೆ. ಅಲ್ಲದೆ ಯೋಗದ ಮೂರು ಪ್ರಧಾನ ವಿಧಗಳನ್ನು ಪರಿಚಯವನ್ನು ಮಾಡಲಾಗಿದೆ.
೧. ಕರ್ಮಯೋಗ :- ಮನಸ್ಸು ಮತ್ತು ದೇಹವನ್ನು ಕಾರ್ಯಪ್ರವೃತ್ತಿಯಾಗಿ ಮಾಡುವ ಯೋಗ
೨. ಭಕ್ತಿ ಯೋಗ :- ಸಮರ್ಪಣ ಭಾವದಿಂದ ದೇವರ ಅಡಿಯಲ್ಲಿ ಎರಗುವ ಯೋಗ
೩. ಜ್ಞಾನ ಯೋಗ :- ವಿವಿಧ ಮಾರ್ಗಗಳಿಂದ ಜ್ಞಾನವನ್ನು ಸಂಪಾದಿಸುವ ಯೋಗ
ಯೋಗದ ಧ್ಯೇಯ ವಾಕ್ಯಗಳು:
ಯೋಗವು ವಿಶ್ವಮಾನ್ಯತೆಗೆ ಒಳಗಾಗಿ ವಿಶ್ವಯೋಗದಿನ ಎಂದು ಘೋಷಣೆಯಾದ ೨೦೧೪ ರಿಂದ ಇದುವರೆಗೆ ಪ್ರತಿ ವರ್ಷವು ಒಂದೊAದು ಧ್ಯೇಯವಾಕ್ಯವನ್ನು ಹೊಂದಿ ಯೋಗದಿನವನ್ನು ಆಚರಣೆ ಮಾಡಲಾಗುತ್ತಿದೆ. ೨೦೧೫ರಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ, ೨೦೧೬ರಲ್ಲಿ ಯುವಕರನ್ನು ಸಂಪರ್ಕಿಸಿ, ೨೦೧೭ರಲ್ಲಿ ಆರೋಗ್ಯಕ್ಕಾಗಿ ಯೋಗ, ೨೦೧೮ರಲ್ಲಿ ಶಾಂತಿಗಾಗಿ ಯೋಗ, ೨೦೧೯ರಲ್ಲಿ ಹೃದಯಕ್ಕಾಗಿ ಯೋಗ, ೨೦೨೦ರಲ್ಲಿ ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ, ೨೦೨೧ರಲ್ಲಿ ಯೋಗಕ್ಷೇಮಕ್ಕಾಗಿ ಯೋಗ, ೨೦೨೨ರಲ್ಲಿ ಒಟ್ಟಿಗೆ ಯೋಗ. ೨೦೨೩ರಲ್ಲಿ ಮಾನವೀಯತೆಗಾಗಿ ಯೋಗ, ೨೦೨೪ರಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಯೋಗ” ೨೦೨೫ರ “ಒಂದು ಭೂಮಿಗೆ ಯೋಗ, ಒಂದು ಆರೋಗ್ಯ”
ಹೀಗೆ ಯೋಗವು ತನ್ನ ಯೋಗದ ಬಲದಿಂದ, ಋಷಿ, ಸಂತರ ಸುಕೃತದಿಂದ ಕೇವಲ ಭಾರತಕ್ಕೆ ಸೀಮಿತಗೊಂಡ ಯೋಗವನ್ನು ಅಂತರ ರಾಷ್ಟ್ರೀಯವಾಗಿ ಬಲಗೊಳ್ಳುಂತೆ ಮಾಡಿದ್ದು ಭುವನದ ಭಾಗ್ಯವೇ ಸರಿ. ಯಂತ್ರಗಳು ಮಾನವನಾಗುತ್ತಾ ಮಾನವ ಯಂತ್ರವಾಗುತ್ತಾ ಸಾಗುತ್ತಿರುವ ಇಂದಿನ ಮಲಿನಕಾರಕವಾದ ಯುಗಮಾನಕ್ಕೆ ಧ್ಯಾನ, ಏಕಾಗ್ರಗೊಂಡ ಮನಸ್ಸು, ಪರಿಶುದ್ಧ ಆಲೋಚನೆ, ಶುಚಿತ್ವದ ಮಾತು, ಬದ್ಧತೆಯ ನಡೆಗೆ ಯೋಗವು ಅನಿವಾರ್ಯವಾಗಿದೆ. ಯೋಗೋ ರಕ್ಷತಿ ರಕ್ಷಿತಃ ಎಂಬುದನ್ನು ರೂಢಿಕೊಂಡು ಎಲ್ಲರೂ ಯೋಗವನ್ನು ಮಾಡೋಣ.

ಪರಮೇಶ ಕೆ. ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕರು
ಹಿಂದೂಸ್ಥಾನ್ ಕಾಲೇಜು ಹಾಗೂ
ಹವ್ಯಾಸಿ ಬರಹಗಾರರು, ಮೈಸೂರು