ಮೈಸೂರು: ಅಂತರಾಷ್ಟ್ರೀಯ ಭರತ ನಾಟ್ಯ ಪ್ರದರ್ಶನದಲ್ಲಿ ಮೈಸೂರಿನ ಪ್ರತಿಭೆ ಮಿಂಚಿದ್ದಾರೆ ಇತ್ತೀಚೆಗೆ ನಡೆದ ಇಂಡೋ-ಥಾಯ್ ಸಾಂಸ್ಕೃತಿಕ ವಿಶ್ವ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ. ಮೈಸೂರಿನ ಚಾಮುಂಡಿ ಪುರಂನ ಸೌಮ್ಯ ನೃತ್ಯ ಶಾಲೆಯ ವಿದ್ಯಾರ್ಥಿ ಮಹಾಲಕ್ಷ್ಮಿ.ಎಂ.ಪಿ ಪ್ರದರ್ಶನ ನೀಡಿ ಎಲ್ಲಾರ ಗಮನ ಸೆಳೆದರು.

ಮಹಾಲಕ್ಷ್ಮಿ ಅವರು ಮೂಲತಃ ಮೈಸೂರು ಕೆ.ಸಿ.ಲೇಔಟ್ನ ಪ್ರಶಾಂತ್ ಹಾಗು ಪರಿಮಳ ದಂಪತಿ ಪುತ್ರಿ. ಇವರು ಬಾಲ್ಯದಿಂದಲೂ ಭರತನಾಟ್ಯದಲ್ಲಿ ಆಸಕ್ತಿಯಿದ್ದು, ಚಾಮುಂಡಿಪುರಂ ನಲ್ಲಿರುವ ಸೌಮ್ಯ ನೃತ್ಯ ಶಾಲೆಯಲ್ಲಿ ಸತತ 10 ವರ್ಷಗಳಿಂದ ನೃತ್ಯಾಭ್ಯಾಸ ಹಾಗೂ ಸಂಗೀತಾಭ್ಯಾಸವನ್ನು ಸಹ ಮಾಡುತ್ತಿದ್ದು, ಮೈಸೂರಿನ ಅರಿವು ಶಾಲೆಯ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರು ಮೈಸೂರಿಗೆ ಹಾಗೂ ಶಾಲೆಗೆ ಕೀರ್ತಿತಂದಿದ್ದಾರೆ.
ಥೈಲಾಂಡ್ನಲ್ಲಿ ಭರತನಾಟ್ಯ ಅಸೋಸಿಯೇಶನ್ ವತಿಯಿಂದ ಗೌರವ ಸನ್ಮಾನ ಮಾಡಿ ಗೌರವಿಸಿದ್ದಾರೆ. ಮಹಾಲಕ್ಷ್ಮಿಅವರ ಸಾಧನೆ ಮತ್ತಷ್ಟು ಉತ್ತುಂಗಕ್ಕೆಏರಲಿ ಎಂದುಕುಟುಂಬದವರು ಸ್ನೇಹಿತರು ಹಾರೈಸಿದ್ದಾರೆ.