ಅಟಲ್ ಬಿಹಾರಿ ವಾಜಪೇಯಿ ಜಯಂತಿ : ವೈದ್ಯಕೀಯ ಭೋದನಾ ಅಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ
ಚಾಮರಾಜನಗರ: ಆಜಾತಶತ್ರು ಹಾಗೂ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಅರಣ್ಯಾಧಿಕಾರಿ ಡಾ. ಆರ್. ರಾಜು ತಿಳಿಸಿದರು.

ನಗರದ ಹೊರ ವಲಯದಲ್ಲಿರುವ ವೈದ್ಯಕೀಯ ಕಾಲೇಜಿನ ಭೋದನಾ ಅಸ್ಪತ್ರೆಯಲ್ಲಿರುವ 300ಕ್ಕು ಹೆಚ್ಚು ಒಳ ರೋಗಿಗಳಿಗೆ ಮಾಜಿ ಪ್ರಧಾನಿ ದಿ. ವಾಜಪೇಯಿ ಅವರ 99ನೇ ಜನ್ಮ ದಿನÀದ ಅಂಗವಾಗಿ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಜನ ಸಂಘದ ಮೂಲಕ ರಾಜಕೀಯಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ಅವರು ಬಹುಮುಖ ವ್ಯಕ್ತಿತ್ವವುಳ್ಳರಾಗಿದ್ದರು. ಸರಳ ಸಜ್ಜನಿಕೆಯನ್ನು ರೂಡಿಸಿಕೊಂಡಿದ್ದ ವಾಜಪೇಯಿ ರಾಷ್ಟ್ರವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬಿಜೆಪಿಯನ್ನು ತಳ ಮಟ್ಟದಿಂದ ಸಂಘಟನೆ ಮಾಡಿದ ಪ್ರಮುಖರಲ್ಲಿ ಅಟಲ್ ಜೀ ಅವರು ಮೊದಲಿಗರು.
ಕೇಂದ್ರ ಸರ್ಕಾರ ಅವರ ಹುಟ್ಟಿದ ದಿನವನ್ನು ಅಭಿವೃದ್ದಿ ದಿನ ಎಂದು ಘೋಷಣೆ ಮಾಡುವ ಜೊತೆಗೆ ದೇಶದ ಅಭಿವೃದ್ದಿಗೆ ವಿಶೇಷ ಒತ್ತು ನೀಡುತ್ತಿದೆ. ಅದರ ಅಂಗವಾಗಿ ಇಂದು ವೈದ್ಯಕೀಯ ಕಾಲೇಜು ಅಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿರುವುದಾಗಿ ರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಅಸ್ಪತ್ರೆಯ ಡೀನ್ ಡಾ. ಮಂಜುನಾಥ್, ಸ್ಥಾನಿಕ ವೈದಾಧಿಕಾರಿ ಡಾ. ಮಹೇಶ್,ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಮುಖಂಡರಾದ ಬಸವರಾಜು,ವಿ. ಶ್ರೀನಿವಾಸಪ್ರಸಾದ್, ಮಂಜು, ತೊರವಳ್ಳಿ ಕುಮಾರ್, ಆರ್.ರಾಜಪ್ಪ ಇತರರು ಇದ್ದಾರೆ.