ಚಾಮರಾಜನಗರ: ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಅರಿಶಿಣ
ಖರೀದಿಗೆ ರೈತರ ನೋಂದಣಿ ಕೇಂದ್ರ ಪ್ರಾರಂಭವಾಗಿದ್ದು ನೋಂದಣಿ ಖರೀದಿ
ಕೇಂದ್ರ, ಅರಿಶಿಣ ಖರೀದಿಗೆ ನಿಗದಿಪಡಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ವಿವರ, ಖರೀದಿ
ಪ್ರಕ್ರಿಯೆ ಮಾಹಿತಿಗಾಗಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು
ಸಂಪರ್ಕಿಸಬಹುದಾಗಿದೆ.
ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ
ಮಹಾ ಮಂಡಳ ನಿಯಮಿತ ಇಲಾಖೆಯ ರವೀಂದ್ರ (ಮೊ.ಸಂ 9449864455),
ತೋಟಗಾರಿಕೆ ಇಲಾಖೆಯ ಎನ್.ಸಿ. ಸಿದ್ದರಾಜು (ಮೊ.ಸಂ 9008394393), ಕೃಷಿ ಮಾರಾಟ
ಇಲಾಖೆಯ (ಎಪಿಎಂಸಿ) ಕಾರ್ಯದರ್ಶಿ (ದೂ.ಸಂ 08226-222103) ಅವರನ್ನು
ಸಂಪರ್ಕಿಸಬಹುದು.
ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ
ಮಹಾ ಮಂಡಳ ನಿಯಮಿತದ ಸಂತೋಷ್. ಕೆ.ಬಿ (ಮೊ.ಸಂ 9591563770),
ತೋಟಗಾರಿಕೆ ಇಲಾಖೆಯ ಬಿ.ಎಸ್. ರಾಜು (ಮೊ.ಸಂ 9742127555), ಕೃಷಿ ಮಾರಾಟ
ಇಲಾಖೆಯ (ಎಪಿಎಂಸಿ) ಶ್ರೀಧರ್ (ಮೊ.ಸಂ 9844211885) ಅವರನ್ನು
ಸಂಪರ್ಕಿಸಬಹುದು.
ಕೊಳ್ಳೇಗಾಲ ತಾಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ
ಮಹಾ ಮಂಡಳ ನಿಯಮಿತದ ರವಿ. ಪಿ (ಮೊ.ಸಂ 9845661618), ತೋಟಗಾರಿಕೆ
ಇಲಾಖೆಯ ಬಿ. ಭಾಸ್ಕರ್ (ಮೊ.ಸಂ 8139973339), ಕೃಷಿ ಮಾರಾಟ ಇಲಾಖೆಯ (ಎಪಿಎಂಸಿ)
ನಾಗೇಶ್ (ಮೊ.ಸಂ 9686707090) ಅವರನ್ನು ಸಂಪರ್ಕಿಸಬಹುದು.
ಹನೂರು ತಾಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ
ಮಂಡಳ ನಿಯಮಿತದ ಗುರುರಾಜ ಗೌಡ ಪಾಟೀಲ್. ಎಂ (ಮೊ.ಸಂ 9980408234),
ತೋಟಗಾರಿಕೆ ಇಲಾಖೆಯ ಬಿ. ಭಾಸ್ಕರ್ (ಮೊ.ಸಂ 8139973339), ಕೃಷಿ ಮಾರಾಟ
ಇಲಾಖೆಯ (ಎಪಿಎಂಸಿ) ನಾಗೇಶ್ (ಮೊ.ಸಂ 9686707090) ಅವರನ್ನು
ಸಂಪರ್ಕಿಸಬಹುದು.
ಯಳಂದೂರು ತಾಲೂಕಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯ ರಾಜು.
ಜಿ.ಎಸ್. (ಮೊ.ಸಂ 8660999354) ಸಂಪರ್ಕಿಸಬಹುದು.
ಖರೀದಿ ಸಂಬಂಧ ನೋಡಲ್ ಅಧಿಕಾರಿಯಾಗಿ ಸಹಾಯಕ ತೋಟಗಾರಿಕೆ
ನಿರ್ದೇಶಕರಾದ ನಾಗೇಶ್ ರಾವ್ (ಮೊ.ಸಂ 9663396426) ಅವರನ್ನು ನೇಮಕ
ಮಾಡಲಾಗಿದ್ದು ಸಂಪರ್ಕ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ
ಪ್ರಕಟಣೆ ತಿಳಿಸಿದೆ.