ಉಪ್ಪಾರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ವತಿಯಿಂದ 2022-23ನೇ ಸಾಲಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ನೀಡಲಿರುವ ಪ್ರತಿಭಾ ಪುರಸ್ಕಾರಕ್ಕೆ ಉಪ್ಪಾರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಉಪ್ಪಾರ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ಜೊತೆಗೆ ಒಂದು ಫೋಟೋ ನೀಡಬೇಕು. ಅರ್ಜಿಯ ಮೇಲೆ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಕಡ್ಡಾಯವಾಗಿ ಬರೆದು ಜುಲೈ ೨೫ರೊಳಗೆ ಸಲ್ಲಿಸಬೇಕು.

ಚಾಮರಾಜನಗರ ವ್ಯಾಪ್ತಿಗೆ ಸೋಮಣ್ಣ ಶಿಕ್ಷಕರು ಮೊ: 9886824852, ಯಳಂದೂರು ವ್ಯಾಪ್ತಿಗೆ ರೇಚಣ್ಣ ಶಿಕ್ಷಕರು ಮೊ: 9964156517, ಗುಂಡ್ಲುಪೇಟೆ ವ್ಯಾಪ್ತಿಗೆ ಮಲ್ಲು ಶಿಕ್ಷಕರು ಮೊ:9164898310, ಹನೂರು ಮತ್ತು ಕೊಳ್ಳೇಗಾಲ ವ್ಯಾಪ್ತಿಗೆ ಮಾದೇಶ್ ಶಿಕ್ಷಕರು ಮೊ: 9972835089 ಇವರಿಗೆ ತಲುಪಿಸುವುದು.

ಅಂಚೆ ಮೂಲಕ ಕಳುಹಿಸುವವರು ಎಂ.ಚಿಕ್ಕಮಹದೇವ, ಗಿರಿಪ್ರಸಾದ್ ನಿಲಯ, ಭಗೀರಥ ನಗರ, ಚಾಮರಾಜನಗರ ಟೌನ್, ವಾರ್ಡ್ ನಂ.25, ಚಾಮರಾಜನಗರ ಇಲ್ಲಿಗೆ ಕಳುಹಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಪಿ.ಗೋವಿಂದರಾಜು ಶಿಕ್ಷಕರು ಮೊ: 9945898796, ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಚಿಕ್ಕಮಹದೇವ ಮೊ: 9902039341 ಇವರನ್ನು ಸಂಪರ್ಕಿಸಲು ಜಿಲ್ಲಾ ಉಪ್ಪಾರ ಸಂಘದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *