ಕಾಂಗ್ರೆಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ

ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವವು ಕನ್ನಡಿಗರ ಅಭಿಮಾನದ ಸಂಕೇತವಾಗಿದ್ದು, ನಾಡು, ನುಡಿ, ಜಲಕ್ಕಾಗಿ ಶ್ರಮಿಸಿದ ಕನ್ನಡ ಸಾಧಕರನ್ನು ನೆನೆಸಿಕೊಳ್ಳುವ ಸುದಿನವಾಗಿದೆ. ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಆದಿಯಾಗಿ ಎಲ್ಲ ಕನ್ನಡ ಹೋರಾಟಗಾರರು, ಚಳುವಳಿಗಾರರು, ಸಾಹಿತಿಗಳನ್ನು ಸ್ಮರಿಸಿ ಅವರು ಹಾಕಿಕೊಟ್ಟ ಭಾಷಾ ರಕ್ಷಣೆಯ ಹಾದಿಯಲ್ಲಿ ಪ್ರತಿಯೊಬ್ಬ ಕನ್ನಡಿಗರು ನಡೆಯಬೇಕಿದೆ.

ಕನ್ನಡ ನಾಡು, ನುಡಿ, ಭಾಷೆಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಹ ಜಬಾಬ್ದಾರಿ ನಮ್ಮ ಮೇಲಿದ್ದು ನುಡಿ ಕನ್ನಡ, ತನು ಕನ್ನಡ ಎಂಬಂತೆ ಕನ್ನಡ ಸಾಹಿತ್ಯವನ್ನು ಓದಿ ಇಂದಿನ ಯುವ ಜನತೆ ಓದಿ ಕನ್ನಡದ ಉಳಿವಿಗಾಗಿ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ,ಕೆರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷ, ಲತಾರಾಜಶೇಖರ್‍ಜತ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಚಿಕ್ಕ ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್‍ಮುನ್ನಾ, ಜಿ,ಪಂ ಮಾಜಿ ಸದಸ್ಯರಾದ ಕೆರಹಳ್ಳಿ ನವೀನ್, ರಮೇಶ್, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್‍ಕುಮಾರ್ ತಾ,ಪಂ ಮಾಜಿ ಸದಸ್ಯರಾದ ಕಾಗಲವಾಡಿಶಿವಸ್ವಾಮಿ, ರಾಜು, ಕಾಗಲವಾಡಿ ಚಂದ್ರು, ನಸ್ರುಲ್ಲಾಖಾನ್ದೂ ರೆ ಮುತ್ತಿಗೆ, ಚೂಢಾ ಮಾಜಿ ಅಧ್ಯಕ್ಷ ಸುಹೇಲ್‍ ಅಲೀಖಾನ್, ಮರಿಯಾಲದ ಹುಂಡಿಕುಮಾರ್, ಪಾಟೇಲ್‍ ಮಹದೇವಸ್ವಾಮಿ, ಕರನಂಜನಪುರಸ್ವಾಮಿ, ನಗರಸಭಾ ಮಾಜಿ ಸದಸ್ಯ ರಾದ ಮಹದೇವಯ್ಯ ಪುಟ್ಟಸ್ವಾಮಿ, ಕರಿನಂಜನಪುರಸ್ವಾಮಿ, ಸೇವಾದಳದ ಜಿಲ್ಲಾಧ್ಯಕ್ಷ ಜಯರಾಜು, ಸುರೇಶ್, ಸೈಯದ್‍ನಮೀದ್, ಅಬ್ಬಾಸ್, ಸೇರಿದಂತ ಪಕ್ಷದಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *