ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ನಿವಾಸಿ ಕೆಇಬಿ ನೌಕರರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ನಿವೃತ್ತ ಕೆಇಬಿ ಅಧಿಕಾರಿ ಸಿ.ಎಸ್. ಕೃಷ್ಣಮೂರ್ತಿ(೭೧ ) ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾದರು.

ಮೃತರು ಪತ್ನಿ ನಿವೃತ್ತಿ ಶಿಕ್ಷಕಿ ನೇತ್ರಾವತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಹಿರಿಯ ಅಣ್ಣ ನಗರಸಭಾ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬುಧವಾರ ಮಧ್ಯಾಹ್ನ ಕರಿನಂಜನಪುರ ಬಳಿ ಇರುವ ಅವರ ತೋಟದಲ್ಲಿ ನೇರವೇರಲಿದೆ ಎಂದು ಕುಟುಂಬದವರನ್ನು ತಿಳಿಸಿದ್ದಾರೆ.
ಕೃಷ್ಣಮೂರ್ತಿ ನಿಧನದ ಸುದ್ದಿ ತಿಳಿದು ನಿವಾಸಕ್ಕೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಮುಖಂಡರಾದ ಕೆ. ಶಿವರಾಂ, ಎಸ್. ಮಹದೇವಯ್ಯ, ವೆಂಕಟರಮಣಸ್ವಾಮಿ ( ಪಾಪು) ನಗರಸಭಾ ಆಯುಕ್ತ ರಾಮದಾಸ್, ಸೆಸ್ಕಾಂ ನ ಎಇಇ ವಸಂತಕುಮಾರ್, ಇಂಜಿನಿಯರ್ಸ್ಗಳು ನೌಕರರು ತೆರಳಿ ಅಂತಿಮ ದರ್ಶನ ಪಡೆದರು.