ಮೈಸೂರು: ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ನಗರದ ಜಯಲಕ್ಷ್ಮೀಪುರಂನಲ್ಲಿರುವ ಸಂತಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ರೆವರೆಂಡ್ ಫಾದರ್ ವಿಜಯ್ಕುಮಾರ್, ಆಡಳಿತಾಧಿಕಾರಿಗಳಾದ ರೆವರೆಂಡ್ ಫಾದರ್ ಅವಿನಾಶ್, ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಹೆಚ್.ಎನ್, ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಗಿರೀಶಕೆ.ಎನ್, ಘಟಕದ ಸಹ ಕಾರ್ಯಕ್ರಮಾಧಿಕಾರಿ ಮಹೇಶ ಎ.ಎಸ್, ಹರೀಶ್ಕುಮಾರ್, ಶ್ರೀಮತಿ ಸ್ವಾತಿ, ಕು.ನವ್ಯ, ಶ್ರೀಮತಿ ವಾಣಿ ಮತ್ತು ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕ-ಸೇವಕಿಯರು ಭಾಗವಹಿಸಿದ್ದರು.