ಚಾಮರಾಜನಗರ: ನಗರದ ಗುಂಡ್ಲುಪೇಟೆ ಸರ್ಕಲ್ನಲ್ಲಿ ನೂತನವಾಗಿ ಆರಂಭವಾದ ೪೬ನೇ ನಂದಿನಿ ಕ್ಷೀರ ಕೇಂದ್ರ ಹಾಗೂ ನಂದಿನಿ ಸಿಹಿ ಉತ್ಸವ ಮೇಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿ, ೪ ಸಾವಿರಕ್ಕು ಹೆಚ್ಚು ಮೌಲ್ಯದ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ಸಂಸ್ಥೆಯನ್ನು ಎಲ್ಲರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅವರು ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾಗಿದೆ. ಅಂದು ನಮ್ಮ ಸರ್ಕಾರ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಮೈಸೂರಿನಿಂದ ಒಕ್ಕೂಟವನ್ನು ಪ್ರತ್ಯೇಕ ಗೊಳಿಸಿ, ಜಿಲ್ಲೆಯ ಕುದೇರಿನಲ್ಲಿ ಘಟಕ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯ ಐದು ತಾಲೂಕುಗಳ ಒಳಗೊಂಡು ಡೇರಿಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ನಂದಿನಿ ಹಾಲು ಮೊಸರು, ಮಜ್ಜಿಗೆ ಹಾಗೂ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀಸುವ ಮೂಲಕ ಒಕ್ಕೂಟದ ಪ್ರಗತಿಗೆ ಎಲ್ಲರು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ನಗರಸಭಾ ಸದಸ್ಯರಾದ ರಾಜಪ್ಪ, ಅಬ್ರಾರ್ ಅಹಮದ್, ಖಲೀಲ್ವುಲ್ಲಾ, ಅಪ್ಸರ್ ಪಾಷಾ, ಮಹೇಶ್, ಆಯುಕ್ತ ರಾಮದಾಸ್, ಮುಖಂಡರಾದ ಸಿ.ಎಸ್. ಅರೀಪ್, ಇರ್ಷಾಧ್, ಉದ್ಯಮಿ ಜಭಿವುಲ್ಲಾ, ನಗರಸಭಾ ಮಾಜಿ ಉಪಾಧ್ಯಕ್ಷೆ ಹಾಗೂ ಪಾರ್ಲರ್ ಮಾಲೀಕರಾದ ವಾಹಿದ್ ಖಾನಂ, ನಜೀಮ್ ಪಾಷಾ, ಇತರರು ಇದ್ದರು.