ಜೆಎಸ್ಎಸ್ನಲ್ಲಿ ತಾಲೂಕು ಮಟ್ಟದ ಭಜನಾ ಸ್ಪರ್ಧೆ ಉದ್ಗಾಟನೆ
ಚಾಮರಾಜನಗರ: ವಿದೇಶಿಯ ಸಂಗೀತ ಮತ್ತು ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಭಜನೆ ಕಲೆ ಅವನತಿಯ ಅಂಚಿನಲ್ಲಿದೆ. ಈ ಕಲೆಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ ತಿಳಿಸಿದರು.
ನಗರದ ಜೆಎಸ್ಎಸ್ ಸೆಮಿನಾರ್ ಹಾಲ್ನಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಹಕಾರ ಸಂಘ, ಸಂಗಮ ಗೃಹ ನಿರ್ಮಾಣ ವೇದಿಕೆ ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಶ್ರೀ ಶಿವರಾತ್ರಿರಾಜೇಂದ್ರಸ್ವಾಮೀಜಿಗಳ ೧೦೮ನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ತಾಲೂಕು ಮಟ್ಟದ ಭಜನಾ ಸ್ಪರ್ಧೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಭಜನಾ ಕಲೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಭಜನೆಗಳ ಮೂಲಕ ದೇವರು ಹಾಗೂ ಗುರು ಪರಂಪರೆಯನ್ನು ಸ್ಮರಿಸುವ ಜೊತೆಗೆ ಭಜನೆಯ ಮೂಲಕ ಮನಸ್ಸಿಗೆ ನವೋಲ್ಲಾಸವನ್ನು ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕಲೆಯು ನಾಶಿಸಿ ಹೋಗುತ್ತಿದೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ರಾಜೇಂದ್ರಶ್ರೀಗಳ ಜಯಂತಿ ಮಹೋತ್ಸವದ ಅಂಗವಾಗಿ ತಾಲೂಕು ಮಟ್ಟದ ಭಜನಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದರು.
ತಾಲೂಕಿನಾದ್ಯಂತ ೧೨ಕ್ಕು ಹೆಚ್ಚು ಭಜನಾ ತಂಡಗಳು ಸ್ಪರ್ದೆಯಲ್ಲಿ ಭಾಗವಹಿಸುವೆ. ಈ ಕಲೆ ನಿಮ್ಮ ಜೊತೆಗೆ ಮುಂದಿನ ತಲೆಮಾರಿಗು ಹೋಗಬೇಕು. ಈ ನಿಟ್ಟಿನಲ್ಲಿ ತಾವೆಲ್ಲರು ಯುವಕರಿಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು, ಶರಣರ ಪರಂಪರೆಯಲ್ಲಿ ಭಜನೆಗೆ ವಿಶೇಷ ಅದ್ಯತೆ ಇದೆ. ಭಜನಾಯ ಮೂಲಕ ಬಸವಾಧಿಶರಣರ ಜೀವನ ಚರಿತ್ರೆ ಮತ್ತು ಅವರ ವಚನಗಳನ್ನು ತಾಳವಾಧ್ಯಗಳನ್ನು ಬಳಸಿ ಹಾಡುವುದರಿಂದ ಹೆಚ್ಚು ಜನರಿಗೆ ತಲುಪುತ್ತದೆ. ಇಂಥ ಕಲೆ ಉಳಿಯಬೇಕು ಮತ್ತು ಬೆಳೆಯಬೇಕು ಎಂಬುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ಶ್ರೀ ರಾಜೇಂದ್ರಶ್ರಿಗಳ ೧೦೮ನೇ ಜಯಂತಿ ಮಹೋತ್ಸವವವನ್ನು ಜಿಲ್ಲಾ ಕೇಂದ್ರದಲ್ಲಿ ಬಹಳ ಅದ್ದೂರಿಯಾಗಿ ಅಕ್ಟೋಬರ್ ೩ ರಂದು ಆಚರಣೆ ಮಾಡಲಾಗುತ್ತಿದೆ. ಇದರ ಅಂಗವಾಗಿ ಭಜನಾ ಸ್ಪರ್ಧೆಯನ್ನು ಆಯೋಜನೆ ಮಾಡುವ ಚಿಂತನೆಯೊಂದಿಗೆ ಶ್ರೀಗಳ ಅಶೀರ್ವಾದ ಪಡೆದುಕೊಂಡು ಕಡಿಮೆ ಅವಧಿಯಲ್ಲಿ ತಾಲೂಕು ಮಟ್ಟದ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಭಜನಾ ಮೇಳವನ್ನು ನಾಲ್ಕು ಸಂಘಗಳಿಂದ ಆಯೋಜನೆ ಮಾಡುವ ಚಿಂತನೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಹಿರಿಯ ಭಜನಾ ಕಲಾವಿದರು ಹಾಗೂ ತೀರ್ಪುಗಾರರಾದ ಮಹದೇವಪ್ಪ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ಕೊಟ್ಟರು.
ಬಳಿಕ ನಡೆದ ಭಜನಾ ಸ್ಪರ್ಧೆಯಲ್ಲಿ ಮಹಿಳಾ ತಂಡಗಳು ಸೇರಿ ೧೨ ತಂಡಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಕಟ್ನವಾಡಿ ಭಜನಾ ಮತ್ತು ಸಾಂಸ್ಕೃತಿಕ ಕಲಾಸಂಘ ಪ್ರಥಮ, ಯಾನಗಹಳ್ಳಿಯ ಶ್ರೀ ಗುರುಮಲ್ಲೇಶ್ವರ ಭಜನಾ ಸಂಘ ದ್ವೀತೀಯ ಮತ್ತು ಉಡಿಗಾಲದ ಗುರುಮಲ್ಲೇಶ್ವರ ಭಜನಾ ಸಂಘ ತೃತೀಯ ಬಹುಮಾನ ಪಡೆದುಕೊಂಡಿತ್ತು. ಮಹಿಳಾ ವಿಭಾಗದಲ್ಲಿ ಉಡಿಗಾಲ ಶರಣೆ ನೀಲಾಂಬಿಕ ಭಜನಾ ಸಂಘ ಪ್ರಥಮ, ಚಾ.ನಗರ ಕದಳಿ ಮಹಿಳಾ ವೇದಿಕೆ ದ್ವಿತೀಯ ಹಾಗೂ ಚಾ.ನಗರ ಶ್ರೀ ಸಿದ್ದಮಲ್ಲೇಶ್ವರ ಭಜನಾ ಸಂಘ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ. ಈ ಎಲ್ಲಾ ತಂಡಗಳಿಗೆ ಅ. ೩ ರಂದು ನಡೆಯುವ ಡಾ. ರಾಜೇಂದ್ರಶ್ರೀಗಳ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು, ರೋಟರಿ ಅಧ್ಯಕ್ಷ ಚಂದ್ರಪ್ರಭಜೈನ್, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ರವಿಕುಮಾರ್, ತೀರ್ಪುಗಾರರಾದ ಪಂಚಾಕ್ಷರಿ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ವಸಂತಮ್ಮ,ಸಂಗಮ ಗೃಹ ನಿರ್ಮಾಣ ಸಂಘ ನಿರ್ದೇಶಕಿ ಶಶಿಕಲಾ, ನೌಕರರ ಸಂಘದ ಉಪಾಧ್ಯಕ್ಷರಾದ ಮಹದೇವಸ್ವಾಮಿ ಐಟಿಐ, ಉಡಿಗಾಲ ಮಹೇಶ್, ಕಾರ್ಯದರ್ಶಿ ಅರ್ಕಪ್ಪ, ಡಾ. ಪರಮೇಶ್ವರಪ್ಪ, ಯೋಗೇಶ್, ನಾಗರಾಜು, ಯೋಗಪ್ರಕಾಶ್, ಜಯಶಂಕರಮೂರ್ತಿ, ಬಸವರಾಜಪ್ಪ, ಸೋಮಶೇಖರಮೂರ್ತಿ, ಶೋಭಾ ಸಿದ್ದರಾಜು, ನಾಗಮಣಿ ಮೊದಲಾದವರು ಇದ್ದರು.