ಸಾರನಾಥ ಬೌದ್ದ ವಿಹಾರದಲ್ಲಿ 206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
ಚಾಮರಾಜನಗರ: ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ 206ನೇ ಭೀಮಾ ಕೋರೆಗಾವ್ ವಿಜಯೋತ್ಸವ ಆಚರಿಸಲಾಯಿತು.
ಜನವರಿ 1-1818 ರಲ್ಲಿ ಮಹಾರಾಷ್ಟ್ರ ರಾಜ್ಯದ ಪೂನಾದ ಭೀಮಾ ಕೋರೆಗಾವ್ ಯುದ್ಧದಲ್ಲಿ ಮಡಿದ 22 ಮಹರ್ ವೀರ ಸೈನಿಕರಿಗೆ ಗೌರವ ವಂದನೆ ಸಲ್ಲಿಸಲಾಯಿತು

ಭಾರತೀಯ ಬೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು ಭೀಮಾ ಕೋರೆಗಾಂವ್ ವಿಜಯ ಸ್ತಂಭ ಕ್ಕೆ ಪುಷ್ಷಾರ್ಚನೆ ಮಾತನಾಡಿ, ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣು ಇವುಗಳಿಗಾಗಿ ಅನೇಕ ಯುದ್ದಗಳು ನಡೆದಿದೆ ಆದರೆ ಅಸ್ಪೃಶ್ಯತೆ ವಿರುದ್ದ ಸಮಾನತೆಗಾಗಿ 500 ಮಹರ್ ಸೈನಿಕರು 28 ಸಾವಿರ ಪೇಶ್ವೆ ಸೈನಿಕರ ನ್ನು ಸೋಲಿಸಿದರು. ಇದು ಭೀಮಾ ಕೋರೆಗಾಂವ್ ಯುದ್ದವೆಂದು ಜಗತ್ತಿನಲ್ಲೇ ಚರಿತ್ರೆ ನಿರ್ಮಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಕೃಷ್ಣಕುಮಾರ್ ಭೀಮಾ ಕೋರೆಗಾವ್ ವಿಜಯೋತ್ಸವ ಮತ್ತು ಮಹರ್ ಸೈನಿಕರ ಶೌರ್ಯದ ಯಶೋಗಾಥೆಯ ಕುರಿತು ಮಾತನಾಡಿ, ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಭೀಮಾ ಕೋರೆಗಾಂವ್ ಯುದ್ದವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಡಾ.ಬಿ.ಅರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಆರ್. ಬಸವರಾಜು, ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ, ಸಮತಾ ಸೈನಿಕ ದಳದ ಉಪಾಧ್ಯಕ್ಷ ಮಲಿಕ್ ಯಲ್ಲಕ್ಕೂರು, ಪ್ರವಾಸ ಮತ್ತು ಪ್ರಚಾರ ವಿಭಾಗ ಉಪಾಧ್ಯಕ್ಷ ಉಮೇಶ್ ಕುದರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ , ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ , ರಮಾಬಾಯಿ ಫೌಂಡೇಶನ್ ಅಧ್ಯಕ್ಷೆ ಪುಷ್ಷಮರಿಸ್ವಾಮಿ, ಸಿದ್ದರಾಜಪ್ಪ , ಪುಟ್ಟಸ್ವಾಮಿ ,ಡಿ. ಸೋಮಣ್ಣ, ವಕೀಲರಾದ ನಾಗರಾಜು, ರಾಮಸಮುದ್ರ ನಾಗಣ್ಣ ಇತರರು ಹಾಜರಿದ್ದರು.