ಸಮುದಾಯದ ಕಾಂಗ್ರೆಸ್ ಮುಖಂಡರುಗಳಿಗೆ ಸೂಕ್ತ ಸ್ಥಾನಮಾನ ನೀಡಲು ಸಭೆಯಲ್ಲಿ ಒತ್ತಾಯ
ಚಾಮರಾಜನಗರ: ಕಳೆದ ೨೫ ವರ್ಷಗಳಿಂದ ಕಾಂಗ್ರೆಸ್ನಲ್ಲಿ ಪ್ರಾಮಾಣಿಕವಾಗಿ ಪಕ್ಷದ ಅಭಿವೃದ್ದಿಗೆ ಶ್ರಮಿಸಿಕೊಂಡು ಬಂದಿರುವ ಜಿಲ್ಲೆಯ ಆದಿಜಾಂಬವ ಸಮುದಾಯದ ಮುಖಂಡರುಗಳನ್ನು ಪಕ್ಷದ ವರಿಷ್ಠರು ಪರಿಗಣಿಸಿ ನಿಗಮ ಮಂಡಳಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅವಕಾಶ ಕಲ್ಪಿಸಿಕೊಡುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಮುಖಂಡರು ಚರ್ಚಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಆದಿಜಾಂಬವ ಸಮುದಾಯದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಆದಿಜಾಂಬವ ಕಾಂಗ್ರೆಸ್ ಮುಖಂಡರುಗಳಿಗೆ ಕಾಂಗ್ರೆಸ್ ಸರ್ಕಾರದ ನಿಗಮ ಮಂಡಳಿಗಳಲ್ಲಿ ಸೂಕ್ತಸ್ಥಾನ ದೊರೆತಿಲ್ಲ. ಪ್ರತಿ ಚುನಾವಣೆಯಲ್ಲಿ ಆದಿಜಾಂಬವ ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಸರ್ಕಾರ ಸಮುದಾಯವನ್ನು ರಿಗಣಿಸಿ ಸೂಕ್ತಸ್ಥಾನ ಮಾನ ನೀಡುವ ಮೂಲಕ ಸಮುದಾಯ ಅಭಿವೃದ್ದಿಗೆ ಒತ್ತು ನೀಡಿ ಮುಂಬರುವ ಚುನಾವಣೆಯಲ್ಲಿ ಸಮುದಾಯದ ಮತಗಳು ಕಾಂಗ್ರೆಸ್ ಗೆ ಹೆಚ್ಚು ಬರುವಂತೆ ಮಾಡಬೇಕು. ಆಗಾಗಿ ಮಂದಿನ ದಿನಗಳಲ್ಲಿ ಸಮುದಾಯದ ಮುಖಂಡರುಗಳಿಗೆ ಸೂಕ್ತಸ್ಥಾನಮಾನ ನೀಡುವ ಮೂಲಕ ಪಕ್ಷದ ಬೆಳೆವಣಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಬೇಕು ಎಂದು ಸುದೀರ್ಘವಾಗಿ ಚರ್ಚಿಸಲಾಯಿತು.
ಜಿಲ್ಲೆಯ ಸಮುದಾಯದ ಅಭಿವೃದ್ದಿ ಹಿತದೃಷ್ಠಿಯಿಂದ ಸಮುದಾಯದ ಮುಖಂಡರುಗಳಿಗೆ ಪಕ್ಷ ಮುಂದಿನ ದಿನಗಳಲ್ಲಿ ನಿಗಮ ಮಂಡಳಿಗಳಲ್ಲಿ, ಜಿ.ಪಂ., ತಾ.ಪಂ, ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅವಕಾಶ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದರು.
ಸಭೆಯಲ್ಲಿ ಹರವೆ ಮಹದೇವಯ್ಯ, ಉಗನೇದಹುಂಡಿ ರಾಚಯ್ಯ, ಶಿವಯ್ಯ, ಬಿ.ಲಿಂಗಯ್ಯ, ರಾಚಯ್ಯ, ಆರ್.ಕೆ.ಶಿವಕುಮಾರ್,ಕೊಳ್ಳೇಗಾಲ ಬಾಲರಾಜು, ನಂಜುಂಡಯ್ಯ, ಗ್ರಾ.ಪಂ.ಸದಸ್ಯ ಗೋವಿಂದಯ್ಯ, ಹನೂರು ಬೂದುಬಾಳು ಮಹದೇವು, ಪಾಳ್ಯ ರಾಚಪ್ಪ, ರಾಜಣ್ಣ, ಪಟ್ಟಣ್ಣ ಪಂಚಾಯಿತಿ ಸದಸ್ಯ ಸುದೇಶ್, ರಾಚಯ್ಯ, ಎಲ್ಲೇಮಾಳ ಮಹದೇವು, ಯಳಂದೂರು ನಾಗರಾಜು,ವ ಗುಂಡ್ಲುಪೇಟೆ ಸೋಮಶೇಖರ್, ಎಸ್ ಸಿ ಘಟಕದ ತಾಲೂಕು ಅಧ್ಯಕ್ಷ ಸಿದ್ದಯ್ಯ ಅಂಕಹಳ್ಳಿ, ವಕೀಲರಾದ ರಾಜೇಶ್, ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು.