ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಚುನಾವಣೆ : 7 ಮಂದಿ ಅವಿರೋಧ ಆಯ್ಕೆ : 6 ಸ್ಥಾನಗಳಿಗೆ ಚುನಾವಣೆ

ಚಾಮರಾಜನಗರ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ೧೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ೭ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಎರಡು ಸ್ಥಾನ ಖಾಲಿ ಇದೆ. ಇನ್ನುಳಿದ ೬ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನಾಮಪತ್ರ ವಾಪಸ್ ಪಡೆದುಕೊಳ್ಳಲು ಇಂದು ಕೊನೆಯ ದಿನವಾಗಿದ್ದು, ಅಂತಿಮವಾಗಿ ಏಳು ನಿರ್ದೇಶಕರ ಸ್ಥಾನಗಳಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಉಳಿದ ಆರು ಸ್ಥಾನಗಳಿಗೆ ೧೨ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಆ. ೨೪ ರಂದು ಈ ಆರು ಸ್ಥಾನಗಳ ನಿರ್ದೇಶಕರ ಆಯ್ಕೆಗೆ ಮತದಾನ ನಡೆಯಲಿದೆ.

ಅವಿರೋಧವಾಗಿ ಆಯ್ಕೆಯಾದರು : ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದಿಂದ ಒಕ್ಕೂಟದ ಹಾಲಿ ಅಧ್ಯಕ್ಷ ಮಲೆಯೂರು ನಾಗರಾಜು, ಲ್ಯಾಂಪ್ ಸೊಸೈಟಿಗಳ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರದಿಂದ ಮುದ್ದಯ್ಯ, ಯಳಂದೂರು ತಾಲೂಕು ಪ್ಯಾಕ್ಸ್‌ನಿಂದ ರವಿ, ಕೊಳ್ಳೇಗಾಲ ಫ್ಯಾಕ್ಸ್ ನಿಂದ ಪಿ. ಮಹದೇವಸ್ವಾಮಿ, ಕೊಳ್ಳೇಗಾಲ ತಾಲೂಕು ಡೇರಿಗಳ ಕ್ಷೇತ್ರದಿಂದ ರಾಯಪ್ಪ, ಕೊಳ್ಳೇಗಾಲ- ಯಳಂದೂರು ಮಹಿಳಾ ಡೇರಿಗಳ ಕ್ಷೇತ್ರದಿಂದ ಜಯಶೀಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

೧೨ ಮಂದಿ ಕಣದಲ್ಲಿ : ಚಾಮರಾಜನಗರ ತಾಲೂಕು ಪ್ಯಾಕ್ಸ್‌ನಿಂದ ಉಡಿಗಾಲ ಶಿವಕುಮಾರ್, ಅಮಚವಾಡಿ ನಾಗಸುಂದರ, ಗುಂಡ್ಲುಪೇಟೆ ಪ್ಯಾಕ್ಸ್‌ನಿಂದ ಬೊಮ್ಮನಹಳ್ಳಿ ಮಡಿವಾಳಪ್ಪ, ಅಂಕಹಳ್ಳಿ ರಾಜಶೇಖರಪ್ಪ, ಚಾ.ನಗರ ತಾಲೂಕು ಡೇರಿಗಳ ಕ್ಷೇತ್ರದಿಂದ ಹರದನಹಳ್ಳಿ ಎಚ್.ಎನ್. ಸುಂದರರಾಜ್, ಲಿಂಗಣಾಪುರ ಚನ್ನಬಸಪ್ಪ, ಗುಂಡ್ಲುಪೇಟೆ ತಾ. ಡೇರಿಗಳ ಕ್ಷೇತ್ರದಿಂದ ಚಾಮುಲ್ ನಿರ್ದೇಶಕ ಎಚ್.ಎನ್. ನಂಜುಂಡಪ್ರಸಾದ್, ಹಸಗೂಲಿ ಉಮೇಶ್, ಯಳಂದೂರು ತಾಲೂಕು ಡೇರಿಗಳ ಕ್ಷೇತ್ರದಿಂದ ಅಂಬಳೆ ಎಂ. ಶಿವಾನಂದಸ್ವಾಮಿ, ಮಲ್ಲಿಗಹಳ್ಳಿ ಎಂ. ಪ್ರಭುಸ್ವಾಮಿ, ಚಾ.ನಗರ- ಗುಂಡ್ಲುಪೇಟೆ ತಾಲೂಕು ಡೇರಿಗಳ ಮಹಿಳಾ ಕ್ಷೇತ್ರದಿಂದ ವಡ್ಡಗಲ್‌ಪುರ ಸುಜಾತ, ನವಿಲೂರು ದಾಕ್ಷಾಯಿಣಿ ಅಂತಿಮ ಕಣದಲ್ಲಿದ್ದಾರೆ. ಆ. ೨೪ರ ಗುರುವಾರ ಚಾನಗರ ಟಿಎಪಿಸಿಎಂಎಸ್ ಕಚೇರಿಯಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರಾದ ದಯಾನಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *