ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಾ.ಮೋಹನ್ ಎನ್ ಎಸ್ ಸ್ನೇಹ ಬಳಗದಿಂದ ೭೭ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನದ ಕಚೇರಿಯಲ್ಲಿ ಸ್ನೇಹಬಳಗದ ನಡೆದ ಕಾರ್ಯಕ್ರಮದಲ್ಲಿ ಡಾ. ಮೋಹನ್ ರಾ?ದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ತ್ಯಾಗ ಬಲಿದಾನ ಹಾಗೂ ಅಹಿಂಸಾ ಮಾರ್ಗವಾಗಿ ಬಂದಿರುವ ಸ್ವಾತಂತ್ರ್ಯವನ್ನು ಸಮಾನತೆಯ ಮೂಲಕ ಸದ್ಬಳಕೆ ಮಾಡಿಕೊಳ್ಳೋಣ. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ ಮಹನೀಯರು ಸ್ಮರಣೆ ಮಾಡಿಕೊಳ್ಳುವ ಜೊತೆಗೆ ದೇಶದ ಅಭಿವೃದ್ದಿ ಹಾಗೂ ಭದ್ರತೆಗೆ ಹೆಚ್ಚಿನ ಒತ್ತು ನೀಡಿ, ದೇಶದ ಪ್ರಗತಿಗೆ ಎಲ್ಲರು ಕೈಜೋಡಿಸೋಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ದಿಗಾಗಿ ಕಳೆದ ೯ ವರ್ಷಗಳಿಂಧ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರು ಕೆಂಪುಕೋಟೆಯಲ್ಲಿ ೧೦ನೇ ಧ್ವಜಾರೋಹಣ ನೆರವೇರಿಸಿ ದೇಶದ ಜನರನ್ನುದ್ದೇಶಿ ಮಾತನಾಡುವ ಮೂಲಕ ದೇಶದ ಅಭಿವೃದ್ದಿ ಮತ್ತು ಸುಭದ್ರತಾ ಆಡಳಿತವೇ ನಮ್ಮ ಗುರಿ. ಸಮಸ್ತ ಭಾರತ ನವ ನಿರ್ಮಾಣ ಮಾಡುವ ಮೂಲಕ ದೇಶವನ್ನು ವಿಶ್ವ ಗುರುವನ್ನಾಗಿಸಲಿ ಭಾರತೀಯರು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ಅದರಂತೆ ನಾವೆಲ್ಲರು ನಾಡು ಕಟ್ಟು ಕೆಲಸದಲ್ಲಿ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಲೋಕೇಶ್ ಕೆ ಆರ್, ಮಾಜಿ ನಗರ ಸಭಾ ಸದಸ್ಯ ಬಸವರಾಜು, ಮುಖಂಡರಾದ ರಾಜು ಪಣ್ಯದ ಹುಂಡಿ, ರಂಗಪ್ಪ, ಹೀರೆಬೇಗೂರು ಸೋಮಶೇಖರ್ , ಕಾಡಳ್ಳಿ ಕುಮಾರ್ ಇತರರು ಇದ್ದರು.