ಚಾಮರಾಜನಗರ : ಚಾಮರಾಜನಗರದ ಗಡಿಭಾಗ ಪುಣಜನೂರು, ತಮಿಳುನಾಡಿನ ಅಸನೂರ ಬಳಿ ಕಾಡಾನೆಯೊಂದು ದಿನಸಿ ಅಂಗಡಿ ಬಾಗಿಲು ಮುರಿದಿರುವ ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ವೆಂಕಟೇಶ್ ಎಂಬುವರಿಗೆ ಸೇರಿದಂತಹ ಅಂಗಡಿಯ ಶಟರ್ ಮುರಿದ ಕಾಡಾನೆ, ಬಾಳೆಗೊನೆ, ಟೊಮೆಟೊ ಸೇರಿದಂತೆ ಇತರ ತರಕಾರಿಗಳನ್ನು ತಿಂದಿದೆ.
ಈ ವೇಳೆ ಸ್ಥಳೀಯರು ಕಿರುಚಾಡಿ ಆನೆಯನ್ನು ಸ್ಥಳದಿಂದ ಓಡಿಸಿದ್ದಾರೆ. ಸಿಸಿಟಿವಿ ಹಾಗೂ ಮೊಬೈಲ್ಗಳಲ್ಲಿ ಆನೆ ದಾಂಧಲೆ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.