ಪಿಎಲ್‍ಡಿ ಬ್ಯಾಂಕ್‍ಗೆ 1.47 ಕೋಟಿ ರೂ. ನಿವ್ವಳ ಲಾಭ : ಎನ್‍ರಿಚ್ ಮಹದೇವಸ್ವಾಮಿ

ಸರ್ಕಾರ ಬಡ್ಡಿ ಮನ್ನಾ ಯೋಜನೆಯಿಂದ ಹೆಚ್ಚು ಸಾಲ ಮರುಪಾವತಿ ಪರಿಣಾಮ ಬ್ಯಾಂಕ್‍ಗೆ ಅನುಕೂಲ
ಚಾಮರಾಜನಗರ: ಪಿಎಲ್‍ಡಿ ಬ್ಯಾಂಕ್‍ನಿಂದ ಧೀರ್ಘ ಹಾಗು ಅಲ್ಪಾವಧಿ ಸಾಲ ಪಡೆದುಕೊಂಡು ಸುಸ್ತಿದಾರರದಿಂದ ಬಡ್ಡಿ ಮನ್ನಾ ಯೋಜನೆಯಡಿಯಲ್ಲಿ ಅಸಲು ಪಾವತಿಸಿಕೊಂಡು ಸಾಲ ವಸೂಲಾತಿ ಮಾಡಿದ ಪರಿಣಾಮ ನಮ್ಮ ಬ್ಯಾಂಕ್ 1.47 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಲು ಸಾಧ್ಯವಾಯಿತು ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ತಿಳಿಸಿದರು.

ನಗರದ ಜೆ.ಎಸ್‍ಎಸ್. ಸೆÀಮಿನಾರ್ ಹಾಲ್‍ನಲ್ಲಿ ಭಾನುವಾರÀ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷದಲ್ಲಿ ವಿವಿಧ ಯೋಜನೆಗಳಾದ ಕುರಿ ಸಾಕಾಣಿಕೆ, ಭೂ ಅಭಿವೃದ್ದಿ, ತಂತಿ ಬೇಲಿ ಹಾಗು ನೀರಾವರಿಗಾಗಿ ಸಾಲವನ್ನಾಗಿ ಒಂದು ಕೋಟಿ ಸಾಲ ನೀಡಲಾಗಿದೆ. ಇನ್ನು 3 ಕೋಟಿ ರೂ.ಗಳ ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ರಿಯಾಯಿತಿ ದರದ ಬಡ್ಡಿ ಯೋಜನೆಯಲ್ಲಿ ಸಾಲ ಮರು ಪಾವತಿ ಮಾಡಿದರೆ ಬ್ಯಾಂಕಿನ ಇನ್ನು ಹೆಚ್ಚಿನ ಮಂದಿಗೆ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕಿನಿಂದ ವಿವಿಧ ಯೋಜನೆಯಡಿಯಲ್ಲಿ ಸಾಲ ಪಡೆದು ಸುಸ್ತಿದಾರಾಗಿದ್ದ 508 ಮಂದಿ ರೈತರ ಪೈಕಿ 337 ಮಂದಿ ರೈತರು ಸರ್ಕಾರದ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದು ಅಸಲು ಪಾವತಿ ಮಾಡಿದರು. ಇದರಿಂದ ನಮ್ಮ ಬ್ಯಾಂಕ್ ಶೇಕಡ 61 ರಷ್ಟು ವಸೂಲಾತಿಯನ್ನು ಹೊಂದಿದೆ. ಅಸಲು ಪಾವತಿ ಮಾಡಿದರಿಂದ ಕೇಂದ್ರ ಬ್ಯಾಂಕಿನಿಂದ ಹೆಚ್ಚಿನ ಸಾಲವನ್ನು ಸಹ ನೀಡಿದ್ದು, ಹೊಸದಾಗಿ 1 ಕೋಟಿ ರೂ. ಸಾಲ ನೀಡಿದೆ. ಸಂಘದ ಸದಸ್ಯತ್ವ ಪಡೆದುಕೊಂಡಿರುವ 1310 ಮಂದಿ ರೈತರಿಗೂ ಸಂಘದಿಂದ ವಿವಿಧ ರೀತಿಯ ಸಾಲ ನೀಡಬೇಕೆಂಬುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದರು.

ಸಹಕಾರಿ ಬೈಲಾ ಪ್ರಕಾರ ಹಾಗೂ ಭೂಗೋಳಿಕ ಪ್ರದೇಶವವನ್ನು ಆಧರಿಸಿ, ಆಡಳಿತ ಮಂಡಲಿಯ ಚುನಾವಣೆ ನಡೆಸಲು ಮೀಸಲಾತಿಯನ್ನು ನಿಗಧಿ ಪಡಿಸಲಾಗಿದೆ. ಅಡಳಿತ ಮಂಡಲಿಯ ಸಭೆಯಲ್ಲಿ ಮೀಸಲಾತಿಯನ್ನು ವರ್ಗೀಕರಣ ಮಾಡಿ ಅನುಮೋದನೆ ಪಡೆದುಕೊಂಡು ವರ್ಗೀಕರಣ ಮಾಡಿ, ಸರ್ವ ಸದಸ್ಯರ ಸಭೆ ಅನುಮೋದನೆ ಮಂಡಿಸಲಾಗಿದೆ. ಸದಸ್ಯರು ಒಪ್ಪಿಗೆ ನೀಡಬೇಕು ಎಂದರು.

ಸಂಘದಲ್ಲಿ ವ್ಯವಹಾರ ಮಾಡಿರುವ ಒಂದು ಸಾವಿರ ರೂ. ಷೇರು ಪಾವತಿ ಮಾಡಿದ ಸದಸ್ಯರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಲು ಮತ್ತು ಮತದಾನ ಮಾಡಲು ಹಕ್ಕು ಪಡೆದುಕೊಂಡಿದ್ದಾರೆ. ಸರ್ಕಾರ ಸುತ್ತೊಲೆ ಪ್ರಕಾರ ಅರ್ಹರ ಮತದಾರರ ಪಟ್ಟಿಯನ್ನು ಸಂಘದ ನೋಟಿಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗುತ್ತದೆ. ಇದಕ್ಕೆ ಸಭೆಯಲ್ಲಿದ್ದ ಕೆಲÀ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿ, ಸಂಘದ ಸದಸ್ಯತ್ವ ಹೊಂದಿರುವ ಎಲ್ಲಾ ರೈತರಿಗೂ ಸಹ ಮತದಾನ ಹಕ್ಕು ನೀಡಬೇಕೆಂಬ ನಿರ್ಣಯ ಮಾಡಿ, ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದರು.

ಕಳೆದ 10 ವರ್ಷಗಳಿಂದ ಸುಸ್ತಿದಾರರಾಗದೆ ಸಾಲ ಮರು ಪಾವತಿ ಮಾಡಿಕೊಂಡು ಬಂದಿರುವ ಎಂಟು ಮಂದಿ ರೈತರಾದ ಉಮ್ಮತ್ತೂರು ಕೆ. ಮಹದೇವಮುರ್ತಿ, ಕುಳ್ಳೂರು ಅಮಿದುನ್ನಿಸಾ, ಚಂದಕವಾಡಿ ಕುಮಾರ್, ಉಡಿಗಾಲ ಲೋಕೇಶ್, ಬಸ್ತಿಪುರ ಆರ್. ಚನ್ನಂಜಪ್ಪ, ಬಿಸಲವಾಡಿ ಬಸವನಾಯಕ, ಕೇತಹಳ್ಳಿ ಕೆ.ಎಸ್. ಸುವರ್ಣ, ಹರದನಹಳ್ಳಿ ಕೆ. ನಾಗರಾಜಪ್ಪ ಅವರನ್ನು ಸಭೆಯಲ್ಲಿ ಶಾಲು ಹೊದಿಸಿ, ಹಾರ ಹಾಕಿ ಫಲಾತಂಬುಲ, ನೆನಪಿನ ಕಾಣಿಕೆ ನೀಡಿ ಗೌರವಿಸುವ ಮೂಲಕ ಮುಂದಿನ ವರ್ಷದ ಇನ್ನು ಹೆಚ್ಚಿನ ರೈತರು ಸಾಲ ಮರು ಪಾವತಿ ಮಾಡಿ ಗೌರವ ಸನ್ಮಾನ ಸ್ವೀಕರಿಸುವಂತಾಗಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಕಳೆದ 5 ವರ್ಷಗಳಿಂದ ನಮ್ಮ ಆಡಳಿತ ಮಂಡಳಿ ಉತ್ತಮವಾಗಿ ಸೇವೆ ಸಲ್ಲಿಸಿ, ಬ್ಯಾಂಕಿಗೆ ಅಭಿವೃದ್ದಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದೆ. ಸಂಘದ ಅಭಿವೃದ್ದಿಗೆ ತಮ್ಮದೇ ಅದ ಸೇವೆ ಸಲ್ಲಿಸುತ್ತಿದ್ಧಾರೆ. ಆಡಳಿತ ಮಂಡಲಿಯ ಚುನಾವಣೆ ಘೋಷಣೆ ಯಾಗಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಿಧನರಾದ ಬ್ಯಾಂಕಿನ ನಿರ್ದೇಶÀಕ ಚಿಕ್ಕನಾಗಪ್ಪ ಹಾಗೂ ರೈತ ಸದಸ್ಯರಿಗೆ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ, ಶ್ರದ್ದಾಂಜಲಿ ಸಲ್ಲಿಸಲಾಯಿತು.

ಬ್ಯಾಂಕ್‍ನ ಪ್ರಭಾರ ವ್ಯವಸ್ಥಾಪಕ ಸತೀಶ್ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಚ್.ಎಂ. ಬಸವಣ್ಣ, ಬಿ. ಮಹದೇವಪ್ಪ, ದೊರೆಸ್ವಾಮಿ, ಎಸ್.ರಾಜು, ಎಂ. ಬಸವರಾಜು ಶಿವಶಂಕರಪ್ಪ, ಮಹದೇವನಾಯಕ,ರತ್ನಮ್ಮ, ಬ್ಯಾಂಕಿನ ನೌಕರರಾದ ಶಶಿಕಿರಣ್, ನವೀನ್, ದಿನಕರ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *